6
  • Latest

ತಂದೆ ಇಲ್ಲದ ಮಕ್ಕಳಿಗೆ 24 ಸಾವಿರ: ಈ ಸುದ್ದಿ ಅರ್ಧ ಸತ್ಯ.. ಅರ್ಧ ಸುಳ್ಳು!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Saturday, July 4, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ತಂದೆ ಇಲ್ಲದ ಮಕ್ಕಳಿಗೆ 24 ಸಾವಿರ: ಈ ಸುದ್ದಿ ಅರ್ಧ ಸತ್ಯ.. ಅರ್ಧ ಸುಳ್ಳು!

ಉಪಕಾರ ಮಾಡಲು ಹೋಗಿ ಅಪಕಾರಕ್ಕೆ ಸಿಲುಕಿದ ಜನ |ಶೇರ್ ಮಾಡುವ ಮುನ್ನ ಸತ್ಯ ಶೋಧಿಸುವುದು ಒಳಿತು

AchyutKumar by AchyutKumar
in ಸ್ಥಳೀಯ

ತಂದೆ ಇಲ್ಲದ ಮಕ್ಕಳಿಗೆ ಸರ್ಕಾರದಿಂದ 24 ಸಾವಿರ ರೂ ಸಿಗುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹಬ್ಬಿರುವುದು ಅನಾಥ ಮಕ್ಕಳ ಕಚೇರಿ ಅಲೆದಾಟಕ್ಕೆ ಕಾರಣವಾಗಿದೆ. ನಿತ್ಯ 20ಕ್ಕೂ ಅಧಿಕ ಜನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಚೇರಿ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸುತ್ತಿದ್ದಾರೆ!

ಪಾಲಕರು ಜೈಲಿನಲ್ಲಿದ್ದು ಅವರ ಮಕ್ಕಳು ತೊಂದರೆಯಲ್ಲಿದ್ದವರಿಗೆ ಮೊದಲ ಆದ್ಯತೆ ನೀಡಿ ಸರ್ಕಾರ ನೆರವು ನೀಡುತ್ತದೆ. ಬಾಲ ಮಂದಿರದಲ್ಲಿದ್ದು ಬಿಡುಗಡೆ ಆದ ಮಕ್ಕಳಿಗೆ ಎರಡನೇ ಹಂತದ ಆದ್ಯತೆ ಅನುಸಾರ ನೆರವು ನೀಡಲಾಗುತ್ತದೆ. ಅದೂ ಮುಗಿದ ಮೇಲೆ ಭಿಕ್ಷುಕ ಹಾಗೂ ತಂದೆ-ತಾಯಿ ಇಲ್ಲದ ಅನಾಥ ಮಕ್ಕಳಿಗೆ ಆರ್ಥಿಕ ಸಹಾಯ ಮಾಡಲಾಗುತ್ತದೆ. ಈ ಎಲ್ಲಾ ಬಗೆಯ ಮಕ್ಕಳು ಭರ್ತಿಯಾದ ನಂತರ ತಂದೆ ಅಥವಾ ತಾಯಿ ಇಲ್ಲದ ಮಕ್ಕಳಿಗೆ ಸಹಾಯ ಮಾಡಲಾಗುತ್ತದೆ. ಪ್ರತಿ ತಿಂಗಳು 4 ಸಾವಿರ ರೂ ಆರ್ಥಿಕ ನೆರವು ಅಂಥವರಿಗೆ ಸಿಗಲಿದೆ. ಆದರೆ, ಉತ್ತರ ಕನ್ನಡ ಜಿಲ್ಲೆಯಲ್ಲಿ ಮೊದಲ ಹಾಗೂ ಎರಡನೇ ಆದ್ಯತೆಯ ಮಕ್ಕಳಿಗೆ ನೆರವು ನೀಡಲಾಗಿದ್ದು ಅದರಲ್ಲಿಯೂ ಈ ವರ್ಷದ ಅರ್ಜಿ ಪಡೆಯುವ ಪ್ರಕ್ರಿಯೆ ಜೂನ್ ತಿಂಗಳಿನಲ್ಲಿಯೇ ಮುಕ್ತಾಯವಾಗಿದೆ.

ಆದರೆ, ಈ ಬಗ್ಗೆ ಮಾಹಿತಿ ಇಲ್ಲದ ಅನೇಕ ಮಕ್ಕಳು ಪ್ರತಿ ದಿನ ಜಿಲ್ಲಾ ಕೇಂದ್ರ ಕಾರವಾರಕ್ಕೆ ಬರುತ್ತಿದ್ದಾರೆ. ಅಲ್ಲಿ ಕಚೇರಿ ಅಲೆದಾಟ ನಡೆಸಿ ಅರ್ಜಿ ಸಲ್ಲಿಸುತ್ತಿದ್ದಾರೆ. ಯಲ್ಲಾಪುರ, ಮುಂಡಗೋಡು, ಹಳಿಯಾಳ, ಸಿದ್ದಾಪುರ ಸೇರಿ ದೂರ ದೂರದ ಊರಿನಿಂದ ಮಕ್ಕಳು ಬರುತ್ತಿದ್ದಾರೆ. ಅದರಲ್ಲಿಯೂ ಗ್ರಾಮೀಣ ಭಾಗದ ಬಡ ಮಕ್ಕಳು ಅನಗತ್ಯವಾಗಿ ತಮ್ಮ ಹಣ ಹಾಗೂ ಶ್ರಮ ವ್ಯಯಿಸುತ್ತಿದ್ದಾರೆ. ಸರ್ಕಾರಿ ಹಣ ಸಿಗುತ್ತದೆ ಎಂಬ ಆಸೆಯಿಂದ ಕಚೇರಿ ಅಲೆದಾಟ ನಡೆಸುವವರಿಗೆ ಆ ಹಣ ಸಿಗುವ ಸಾಧ್ಯತೆಗಳಿಲ್ಲ.

ಅರ್ಜಿ ಸಲ್ಲಿಸಲು ದೂರದ ಊರಿನಿಂದ ಆಗಮಿಸುವ ಮಕ್ಕಳಿಂದ ಅರ್ಜಿ ಸ್ವೀಕರಿಸದೇ ಇರಲು ಅಧಿಕಾರಿ-ಸಿಬ್ಬಂದಿಗೆ ಆಗುತ್ತಿಲ್ಲ. ಏಕಪಾಲಕರನ್ನು ಹೊಂದಿದ ಮಕ್ಕಳು ಸಹ ಅರ್ಜಿ ಸಲ್ಲಿಸಲು ಅರ್ಹರೇ ಆಗಿದ್ದು, ಮೊದಲ ಆದ್ಯತೆ ಅವರಿಗಲ್ಲ. ಮಂಗಳೂರಿನ ಮಕ್ಕಳ ಘಟಕದ ಮೊಹರು ಹೊಂದಿದ ನಮೂನೆಯೊಂದು ಎಲ್ಲಡೆ ವೈರಲ್ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ `ತಂದೆ ಇಲ್ಲದ ಮಕ್ಕಳಿಗೆ 24 ಸಾವಿರ’ ಎಂಬ ಸುದ್ದಿ ಸತ್ಯವಲ್ಲ!

ಸುಳ್ಳು ಸುದ್ದಿ ಡಿಲಿಟ್ ಮಾಡಿ… ಸತ್ಯವನ್ನು ಶೇರ್ ಮಾಡಿ…

ShareSendTweetShare
Previous Post

ಗಣೇಶ ಹಬ್ಬದ ವೇಳೆ ಗಲಾಟೆ: ಐವರು ಕೊಲೆ ಆರೋಪಿತರಿಗೆ ಜೈಲಿನಲ್ಲಿಯೇ ಹಬ್ಬ!

Next Post

ಬಿಜೆಪಿ ಸೇರಲು ಮಿಸ್ ಕಾಲ್ ಕೊಡಿ!

Next Post

ಬಿಜೆಪಿ ಸೇರಲು ಮಿಸ್ ಕಾಲ್ ಕೊಡಿ!

ದಿವ್ಯ ದೇಗುಲ | ವರ್ಷಕ್ಕೆ ಒಮ್ಮೆ ದರ್ಶನ ನೀಡುವ ಸಾತೇರಿ ದೇವಿ!

ಗ್ರಾಮ ಪಂಚಾಯತ ಗೃಂಥಾಲಯದಲ್ಲಿ ಉದ್ಯೋಗ ಅವಕಾಶ

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.