6
  • Latest

ಗಣೇಶ ಹಬ್ಬದ ವೇಳೆ ಗಲಾಟೆ: ಐವರು ಕೊಲೆ ಆರೋಪಿತರಿಗೆ ಜೈಲಿನಲ್ಲಿಯೇ ಹಬ್ಬ!

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Wednesday, August 20, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಗಣೇಶ ಹಬ್ಬದ ವೇಳೆ ಗಲಾಟೆ: ಐವರು ಕೊಲೆ ಆರೋಪಿತರಿಗೆ ಜೈಲಿನಲ್ಲಿಯೇ ಹಬ್ಬ!

AchyutKumar by AchyutKumar
in ಸ್ಥಳೀಯ

ಕಾರವಾರ: ಸಾಯಿಕಟ್ಟಾದ ಬಿಂದು ಮಾಧವ ದೇವಸ್ಥಾನದ ಬಳಿ ನಡೆದ ಹೊಡೆದಾಟದಲ್ಲಿ ಸಾವನಪ್ಪಿದ್ದ ಸಂದೇಶ ಪ್ರಭಾಕರ್ ಬೋರ್ಕರ್ ಪ್ರಕರಣದ ವಿಚಾರಣೆ ನಡೆಸಿರುವ ಪೊಲೀಸರು ಅದೇ ಕುಟುಂಬದ ಐವರನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.

ADVERTISEMENT

ಬೋರ್ಕರ್ ಮನೆತನದವರಿಂದ ಪ್ರತಿ ವರ್ಷದಂತೆ ಈ ವರ್ಷ ಗಣಪತಿ ಕೂರಿಸಲಾಗಿತ್ತು. ಸೆ 7ರಂದು ಗಣಪತಿ ಪೂಜೆ ನಡೆದ ನಂತರ ಅಲ್ಲಿದ್ದ ಹಣಕ್ಕಾಗಿ ಎರಡು ಬಣಗಳ ನಡುವೆ ಹೊಡೆದಾಟ ನಡೆದಿತ್ತು. ದೇವರ ಕಾಸಿಗಾಗಿ ಸಹೋದದರೇ ಪರಸ್ಪರ ಹೊಡೆದಾಡಿಕೊಂಡಿದ್ದು ಈ ವೇಳೆ ಮನೀಷ್ ಬೋರ್ಕರ್ ಎಂಬಾತ ಸಂದೇಶ ಬೋರ್ಕರ್ ಎಂಬಾತರನ್ನು ಚಾಕುವಿನಿಂದ ಇರಿದಿದ್ದ. ರಕ್ತದ ಮಡುವಿನಲ್ಲಿ ಬಿದ್ದು ಸಂದೇಶ ಬೋರ್ಕರ್ ಸಾವನಪ್ಪಿದ್ದರು.

ಸಾವನಪ್ಪಿದ ಸಂದೇಶ ಬೋರ್ಕರ್ ಸರ್ಕಾರಿ ಉದ್ಯೋಗಿಯಾಗಿದ್ದರು. ಈಚೆಗಷ್ಟೇ ಅವರ ವಿವಾಹವಾಗಿತ್ತು. ಗಣೇಶನ ಅಲಂಕಾರಕ್ಕೆ ಕೂಡಿಟ್ಟ ಹಣ ಅವರ ಬದುಕಿಗೆ ಮಾರಕವಾಗಿದ್ದು, ಕೊಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಶುರು ಮಾಡಿದ್ದರು. ಶಿರಸಿ ನಗರದ ಕಿರಣ ಬೋರಕರ್ ಹಾಗೂ ಪ್ರಭಾಕರ ಬೋರ್ಕರ್ ಎಂಬಾತರ ನಡುವೆ ಶುರುವಾದ ಗಲಾಟೆ ಇದಾಗಿದ್ದು, ಈ ಹೊಡೆದಾಟದಲ್ಲಿ ಪ್ರಭಾಕರ ಬೋರ್ಕರ್ ನೆಲಕ್ಕೆ ಬಿದ್ದಿದ್ದರು. ಹೀಗಾಗಿ ಅವರ ಮಗ ಸಂದೇಶ ಸಹ ರೊಚ್ಚಿಗೆದ್ದು ತಂದೆಯ ಪರ ವಾಗ್ವಾದ ನಡೆಸಿದ್ದರು. ಆಗ ಕಿರಣ ಬೋರ್ಕರ್ ಅವರ ಮಗ ಮನೀಷ ಬೋರ್ಕರ್ ಸಹ ಜಗಳಕ್ಕೆ ಬಂದಿದ್ದು, ದೊಡ್ಡವರ ನಡುವೆ ಇದ್ದ ಜಗಳ ಮಕ್ಕಳ ವ್ಯಾಪ್ತಿಗೆ ಬಂದಿತ್ತು. ಸoದೇಶ ಹಾಗೂ ಮನೀಷ್ ನಡುವಿನ ಈ ಜಗಳದಲ್ಲಿ ರೊಚ್ಚಿಗೆದ್ದ ಮನೀಷ್ ಸಂದೇಶರಿಗೆ ಚೂರಿ ಇರಿದಿದ್ದ. ಚೂರಿ ಇರಿದ ರಭಸಕ್ಕೆ ದೇಹದ ಒಳಗೆ ಚಾಕು ಮುರಿದಿತ್ತು. ಅಪಾರ ರಕ್ತಸ್ರಾವದಿಂದ ಸಂದೇಶ ಸಾವನಪ್ಪಿದ್ದರು. ಶರದ ಪ್ರಭಾಕರ ಬೋರ್ಕರ್ ಸಹ ಗಾಯಗೊಂಡಿದ್ದು, ಪೊಲೀಸ್ ದೂರು ನೀಡಿದ್ದರು.

Advertisement. Scroll to continue reading.

ಇದನ್ನೂ ಓದಿ: ದೇವರ ದುಡ್ಡಿಗೆ ಸಹೋದರರ ಕಾಳಗ: ಹಬ್ಬದ ದಿನ ಹರಿದ ರಕ್ತ!

Advertisement. Scroll to continue reading.

ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದರು. ಪೊಲೀಸ್ ಅಧಿಕಾರಿಗಳ ತಂಡ ರಚಿಸಿ ಶಿರಸಿ ಬಾಪೂಜಿನಗರದಲ್ಲಿ ವಾಸವಾಗಿರುವ ಕಾರವಾರ ಮೂಲದ ಖಾಸಗಿ ಉದ್ಯೋಗಿಗಳಾದ ಮನಿಷ ಕಿರಣ ಬೋರ್ಕರ್ (30), ರತನ್ ಮನೋಹರ್ ಬೋರ್ಕರ್ (45) ಟೇಲರ್ ಆಗಿರುವ ಸಂತೋಷ ಮನೋಹರ ಬೋರ್ಕರ್ (44), ಚಾಲಕರಾಗಿರುವ ಪ್ರಶಾಂತ ಮನೋಹರ ಬೋರ್ಕರ್ (51) ಹಾಗೂ ನೌಕರಿ ಮಾಡುತ್ತಿದ್ದ ಕಿರಣ ಮನೋಹರ ಬೋರ್ಕರ್ (54) ಅವರನ್ನು ಬಂಧಿಸಿದ್ದಾರೆ.

 

Previous Post

ಕಟ್ಟಡ ಕಾರ್ಮಿಕನಿಗೆ ಜೂಜಾಟದ ಚಟ!

Next Post

ತಂದೆ ಇಲ್ಲದ ಮಕ್ಕಳಿಗೆ 24 ಸಾವಿರ: ಈ ಸುದ್ದಿ ಅರ್ಧ ಸತ್ಯ.. ಅರ್ಧ ಸುಳ್ಳು!

Next Post

ತಂದೆ ಇಲ್ಲದ ಮಕ್ಕಳಿಗೆ 24 ಸಾವಿರ: ಈ ಸುದ್ದಿ ಅರ್ಧ ಸತ್ಯ.. ಅರ್ಧ ಸುಳ್ಳು!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ