ಕುಮಟಾ: ಗೋಕರ್ಣ ಬಸ್ ನಿಲ್ದಾಣ ಹಿಂದಿನ ಓಂ ಹೋಟೆಲ್ ಬಳಿ ಓಸಿ ಆಡಿಸುತ್ತಿದ್ದ ರಮೇಶ ನಾಗಪ್ಪ ಗೌಡ ಎಂಬಾತನ ಮೇಲೆ ಪೊಲೀಸರು ದಾಳಿ ನಡೆಸಿದರು.
ತಾರಿಮಕ್ಕಿಯ ರಮೇಶ ಗೌಡ ಸೆಂಟ್ರಿoಗ್ ಕೆಲಸ ಮಾಡಿಕೊಂಡಿದ್ದು, ಅದರ ಜೊತೆಗೆ ಜೂಜಾಟವನ್ನು ನಡೆಸುತ್ತಿದ್ದ. ಸಾರ್ವಜನಿಕರು ಓಡಾಡುವ ರಸ್ತೆ ಅಂಚಿನಲ್ಲಿ ನಿಂತು `ತನ್ನಲ್ಲಿ ಹಣ ಹೂಡಿ’ ಎಂದು ಆತ ಪ್ರಚೋದಿಸುತ್ತಿದ್ದ. ಇದನ್ನು ತಿಳಿದ ಪಿಎಸ್ಐ ಖಾದರ್ ಬಾಷಾ ಸೆ 9ರಂದು ಆತನ ಮೇಲೆ ದಾಳಿ ಮಾಡಿದರು. ಆಗ 650ರೂ ಹಣದ ಜೊತೆ ಸಂಖ್ಯೆಗಳನ್ನು ಬರೆದ ಚೀಟಿ ಹಾಗೂ ಇನ್ನಿತರ ವಸ್ತುಗಳು ಸಿಕ್ಕಿವೆ.
ಜೊಯಿಡಾದಲ್ಲೂ ದಾಳಿ
ಜೊಯಿಡಾ ಚಾಪೋಲಿಯಲ್ಲಿ ಮಟ್ಕಾ ಆಡಿಸುತ್ತಿದ್ದ ಸಂದೀಪ ವಿಠ್ಠಲ ಕಾರ್ಟೋಳಕರ್ ಎಂಬಾತನ ಮೇಲೆ ಪಿಎಸ್ಐ ಮಹೇಶ ಬಸಪ್ಪ ಮಾಳಿ ದಾಳಿ ನಡೆಸಿದ್ದಾರೆ.
ಬಸ್ ನಿಲ್ದಾಣದ ಆಸ್ಪತ್ರೆ ಕ್ರಾಸ್ ಬಳಿ ಸಂದೀಪ ಓಸಿ ಆಡಿಸುತ್ತಿದ್ದ. ಆಗ ದಾಳಿ ಮಾಡಿದ ಪೊಲೀಸರಿಗೆ 450ರೂ ಹಣ ಹಾಗೂ ಇನ್ನಿತರ ವಸ್ತುಗಳು ಸಿಕ್ಕಿವೆ.
ಉಡುಪಿ ರಾಯರಿಗೆ ಕಾರು ಗುದ್ದಿದ ಹುಬ್ಬಳ್ಳಿಗ
ಭಟ್ಕಳ: ಉಡುಪಿಯ ಗೋವಿಂದರಾಯ ಮಲ್ಯ ಹಾಗೂ ಅವರ ಕುಟುಂಬದವರಿಗೆ ಹುಬ್ಬಳ್ಳಿಯ ಮಂಜುನಾಥ ಹೆರೂರು ಎಂಬಾತ ಕಾರು ಗುದ್ದಿದ್ದು, ಇದರಿಂದ ಐವರಿಗೆ ಗಾಯವಾಗಿದೆ.
ಸೆ 8ರಂದು ಸಂಜೆ ಬೆಳೆಕೆ ಸೊಸೈಟಿ ಬಳಿ ಈ ಅಪಘಾತ ನಡೆದಿದೆ. ಉಡುಪಿ ಕಡೆಯಿಂದ ಇನೋವಾ ಕಾರು ಓಡಿಸಿಕೊಂಡು ಬಂದ ಮಂಜುನಾಥ ಹೇರೂರು ಉಡುಪಿ ಕಡೆ ಹೋಗುತ್ತಿದ್ದ ಗೋವಿಂದರಾಯ ಅವರ ಕಾರಿಗೆ ಗುದ್ದಿದ್ದಾನೆ. ಇದರಿಂದ ಗೋವಿಂದರಾಯ ಅವರ ಜೊತೆ ಅವರ ಪತ್ನಿ, ಮಗಳು, ಅತ್ತೆ, ಅಕ್ಕನಿಗೆ ಗಾಯವಾಗಿದೆ.
ಕಾರುಗಳ ನಡುವೆ ಮುಖಾಮುಖಿ
ಕುಮಟಾ: ಧಾರವಾಡದ ಉದ್ಯಮಿ ಕೃಷ್ಣ ಚಲವಾದಿಗೆ (32) ಅವರು ಓಡಿಸುತ್ತಿದ್ದ ಕಾರಿಗೆ ಕಾರವಾರ ಕೋಡಿಭಾಗದ ಸಂದರ್ಶ ಸಂದೀಪ ತಾಮ್ಸೆ (21) ಎಂಬಾತ ಕಾರು ಗುದಿದ್ದಾನೆ
ಸೆ 9ರಂದು ರಾತ್ರಿ ದುಂಡಕುಳಿ ಬಳಿ ಈ ಅಪಘಾತ ನಡೆದಿದೆ. ಕುಮಟಾದಿಂದ ಅಂಕೋಲಾ ಕಡೆ ಕೃಷ್ಣ ಅವರು ಕಾರು ಓಡಿಸುತ್ತಿದ್ದರು. ಆಗ ಎದುರಿನಿಂದ ಜೋರಾಗಿ ಕಾರು ಓಡಿಸಿಕೊಂಡು ಬಂದ ಸಂದರ್ಶ ತಾಮ್ಸೆ ಡಿಕ್ಕಿ ಹೊಡೆದ ಬಗ್ಗೆ ದೂರಲಾಗಿದೆ.




