6
  • Latest
The pious spirit who saved the tree by giving up his life

ಅರಣ್ಯ ಯೋಧ | ಜೀವ ಬಿಟ್ಟು ಕಾಡು ಬದುಕಿಸಿದ ಪುಣ್ಯಾತ್ಮ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Wednesday, February 11, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಲೇಖನ

ಅರಣ್ಯ ಯೋಧ | ಜೀವ ಬಿಟ್ಟು ಕಾಡು ಬದುಕಿಸಿದ ಪುಣ್ಯಾತ್ಮ!

AchyutKumar by AchyutKumar
September 12, 2024
in ಲೇಖನ
The pious spirit who saved the tree by giving up his life
advt advt advt
ADVERTISEMENT

ಉತ್ತರ ಕನ್ನಡ ಜಿಲ್ಲೆಯಲ್ಲಿ ಎರಡು ಮರಗಳ ರಕ್ಷಣೆಗಾಗಿ ತಮ್ಮ ಪ್ರಾಣವನ್ನು ಲೆಕ್ಕಿಸದೇ ಹೋರಾಟಕ್ಕಿಳಿದವರು ಅರಣ್ಯ ರಕ್ಷಕ ಅಣ್ಣಪ್ಪ. ಅವರಿಂದ ಎರಡು ಮರಗಳನ್ನು ಬದುಕಿಸಲು ಸಾಧ್ಯವಾಗದೇ ಇದ್ದರೂ ಆ ಭಾಗದ ಸಾವಿರಾರು ಸಾಗವಾನಿ ಮರಗಳ ಜೀವ ಕಾಪಾಡಿದರು.

ಚಿಕ್ಕೋಡಿ ತಾಲೂಕಿನ ಕಬ್ಬೂರಿನವರಾಗಿದ್ದ ಅಣ್ಣಪ್ಪ ಮುಗಳಖೋಡ ಅವರು ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ಅರಣ್ಯ ರಕ್ಷಕರಾಗಿದ್ದರು. ಜಣಗಾ ಅರಣ್ಯ ವ್ಯಾಪ್ತಿಯಲ್ಲಿ ಅವರು ಕರ್ತವ್ಯದಲ್ಲಿದ್ದರು. ಸಾಂಬ್ರಾಣಿಯನ್ನು ಕೇಂದ್ರವಾಗಿರಿಸಿಕೊoಡು ನಿತ್ಯ 20 ಕಿಮೀ ಸೈಕಲ್ ಮೇಲೆ ಸಂಚರಿಸಿ ವನ್ಯ ಸಂಪತ್ತು ರಕ್ಷಣೆಗಾಗಿ ಶ್ರಮಿಸುತ್ತಿದ್ದರು. ಬೆಳಗ್ಗೆ 7 ಗಂಟೆಗೆ ಸೈಕಲ್ ಏರಿದರೆ ಕಾಡು-ಮೇಡುಗಳನ್ನೆಲ್ಲ ಸುತ್ತಾಡಿ ಮನೆ ಸೇರಲು ರಾತ್ರಿ ಆಗುತ್ತಿತ್ತು.

ADVERTISEMENT
ADVERTISEMENT

2002 ಜುಲೈ 26ರಂದು ಅವರು ಸೈಕಲ್ ಮೇಲೆ ಸಂಚರಿಸುತ್ತಿದ್ದಾಗ ಕಾಡಿನೊಳಗೆ ಶಬ್ದ ಕೇಳಿಸಿ ಅಲ್ಲಿ ತೆರಳಿದರು. ಅಲ್ಲಿ ಇಬ್ಬರು ಸಾಗವಾನಿ ಮರ ಕಡಿಯುತ್ತಿದ್ದರು. ಇದನ್ನು ವಿರೋಧಿಸಿದ ಅವರು ಆ ಇಬ್ಬರಿಗೂ ಕಾಡಿನ ಮಹತ್ವದ ಬಗ್ಗೆ ಪಾಠ ಮಾಡಿದ್ದರು. ಅದೇ ಕೊನೆ, ನಂತರ ಅವರನ್ನು ಜೀವಂತವಾಗಿ ನೋಡಿದವರಿಲ್ಲ!

ಮರಗಳ್ಳತನಕ್ಕೆ ಬಂದವರು ಅಣ್ಣಪ್ಪ ಅವರ ಎರಡು ಕೈಗಳನ್ನು ಹಗ್ಗದಿಂದ ಕಟ್ಟಿ ಮರಕ್ಕೆ ನೇಣು ಹಾಕಿದ್ದರು. ಅಣ್ಣಪ್ಪ ಅವರ ಸಾವಿನ ನಂತರವೂ ದುಷ್ಟರು ತಮ್ಮ ವಿಕೃತಿ ಮೆರೆದಿದ್ದರು. ವನ್ಯ ಸಂಪತ್ತು ರಕ್ಷಣೆಗಾಗಿ ಹೋರಾಡಿದ ಅಣ್ಣಪ್ಪ ಅವರು ತಮ್ಮ 49ನೇ ವಯಸ್ಸಿನಲ್ಲಿ ದುಷ್ಕಮಿಗಳ ಅಟ್ಟಹಾಸಕ್ಕೆ ಸಾವನಪ್ಪಿದರು. ದುಷ್ಕರ್ಮಿಗಳು ಕಡಿದಿದ್ದ ಸಾಗವಾನಿ ನಾಟುಗಳನ್ನು ಅಲ್ಲಿಯೇ ಬಿಟ್ಟು ಆ ಇಬ್ಬರು ಕಳ್ಳರು ಪರಾರಿಯಾಗಿದ್ದು, ಜೀವ ಹೋಗುವ ಕೊನೆ ಕ್ಷಣದಲ್ಲಿಯೂ ಅಣ್ಣಪ್ಪ ಅವರು ಅರಣ್ಯ ಸಂಪತ್ತನ್ನು ಇಲಾಖೆಗೆ ಒಪ್ಪಿಸಿದ್ದರು.

Advertisement. Scroll to continue reading.
Advertisement. Scroll to continue reading.

ಅಣ್ಣಪ್ಪ ಅವರ ಮಾವ ಅರ್ಜುನ ಪಾಟೀಲ್ ಅವರು ಸಹ ಅರಣ್ಯ ರಕ್ಷಕರಾಗಿದ್ದರು. ಅವರ ನೆರವಿನಿಂದ ತಟ್ಟಿಹಳ್ಳ ತರಬೇತಿ ಶಿಬಿರದಲ್ಲಿ ತರಬೇತಿ ಪಡೆದು ಅಣ್ಣಪ್ಪ ಅವರು ಅರಣ್ಯದ ಮಹತ್ವ ಅರಿತಿದ್ದರು. 10 ವರ್ಷಗಳ ಕಾಲ ಫ್ಯೂನ್ ಆಗಿ ಕೆಲಸ ಮಾಡಿದರು. ನಂತರ ಅರಣ್ಯ ರಕ್ಷಕರಾಗಿ ಕಾಡು ಸುತ್ತಿದರು. ಗಿಡ-ಮರಗಳ ಬಗ್ಗೆ ಅಪಾರ ಪ್ರೀತಿ ಬೆಳೆಸಿಕೊಂಡಿದ್ದ ಅವರು ವನ್ಯ ಸಂಪತ್ತಿಗೆ ಕೊಂಚ ಸಮಸ್ಯೆಯಾದರೂ ಸಹಿಸುತ್ತಿರಲಿಲ್ಲ. ಅವರ ಸೇವೆ ಸ್ಮರಿಸಿದ ಕೆನರಾ ವೃತ್ತದ ಎಲ್ಲಾ ನೌಕರರು ತಮ್ಮ ಒಂದು ದಿನದ ವೇತನವನ್ನು ಅಣ್ಣಪ್ಪ ಅವರ ಕುಟುಂಬಕ್ಕೆ ನೀಡಿ ಸಹಾಯ ಮಾಡಿದ್ದರು.

ಅಣ್ಣಪ್ಪ ಅವರ ಜೀವನವನ್ನು ಆದರ್ಶವನ್ನಾಗಿರಿಸಿಕೊಂಡ ಅವರ ಪುತ್ರ ಸಂತೋಷ್ ಸಹ ಇದೀಗ ಅರಣ್ಯ ಇಲಾಖೆಯ ಕರ್ತವ್ಯದಲ್ಲಿದ್ದಾರೆ. ಯಲ್ಲಾಪುರ ತಾಲೂಕಿನ ಕಿರವತ್ತಿ ಕಚೇರಿಯಲ್ಲಿ ದ್ವಿತಿಯ ದರ್ಜೆ ಸಹಾಯಕರಾಗಿ ಸೇವೆ ಶುರು ಮಾಡಿದ ಸಂತೋಷ್ ಇದೀಗ ಯಲ್ಲಾಪುರ ಕಚೇರಿಯ ಕರ್ತವ್ಯದಲ್ಲಿದ್ದಾರೆ. `ಅಣ್ಣಪ್ಪ ಅವರ ಕೊಲೆ ಪ್ರಕರಣ ವಿಚಾರಣೆ ನಡೆದು ಇಬ್ಬರು ಕಾಡುಗಳ್ಳರು ಐದು ವರ್ಷ ಜೈಲಿನಲ್ಲಿದ್ದರು. ಸಾಕ್ಷಿ ಕೊರತೆಯಿಂದ ಅವರು ಹೊರಬಂದರು’ ಎಂಬ ನೋವು ಅನೇಕರನ್ನು ಕಾಡುತ್ತಿದೆ.

ShareSendTweetShare
ADVERTISEMENT
Previous Post

ಗಣೇಶ ವಿಸರ್ಜನೆ : ಮದ್ಯದ ಅಂಗಡಿಗೆ ಬೀಗ!

Next Post

ವಿರೋಧ ಪಕ್ಷದವರನ್ನು ಹೊಗಳಿದ ಬಿಜೆಪಿ ನಾಯಕ!

Next Post

ವಿರೋಧ ಪಕ್ಷದವರನ್ನು ಹೊಗಳಿದ ಬಿಜೆಪಿ ನಾಯಕ!

ನಿಯಮಗಳಿಗೆ ಇಲ್ಲ ಮೂರು ಕಾಸಿನ ಬೆಲೆ | ಆಸ್ಪತ್ರೆ ಆವರಣದಲ್ಲಿ ಡಿಜೆ ಸದ್ದು: ರೋಗಿಗಳ ಎದೆಯಲ್ಲಿ ಡವಡವ!

ಅಡಿಕೆ ಮಾನ ಕಳೆದ ಅಗ್ಗದ ಅಡಿಕೆ | ವರ್ತಕನ ಕಳ್ಳಾಟಕ್ಕೆ 3 ಸಾವಿರ ರೂ ಬೆಲೆ ಕುಸಿತ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.