6
  • Latest

ಗ್ರಾ ಪಂ ಪ್ರತಿನಿಧಿಗಳಿಂದ ಉಗ್ರ ಪ್ರತಿಭಟನೆ: ಈ ಹೋರಾಟದಿಂದ ಸರ್ಕಾರಕ್ಕೆ ಲಾಭ!

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ADVERTISEMENT
  • Home
Wednesday, February 11, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜ್ಯ

ಗ್ರಾ ಪಂ ಪ್ರತಿನಿಧಿಗಳಿಂದ ಉಗ್ರ ಪ್ರತಿಭಟನೆ: ಈ ಹೋರಾಟದಿಂದ ಸರ್ಕಾರಕ್ಕೆ ಲಾಭ!

AchyutKumar by AchyutKumar
October 5, 2024
in ರಾಜ್ಯ
advt advt advt
ADVERTISEMENT

ಗ್ರಾಮ ಪಂಚಾಯತಗಳಿಗೆ ಸರ್ಕಾರ ಅನುದಾನ ನೀಡುತ್ತಿಲ್ಲ ಎಂದು ಆರೋಪಿಸಿ ಉತ್ತರ ಕನ್ನಡ ಜಿಲ್ಲೆಯ ಗ್ರಾ ಪಂ ಪ್ರತಿನಿಧಿಗಳ ಜೊತೆ ಗ್ರಾ ಪಂ ಸಿಬ್ಬಂದಿ ಸೇರಿ ಸಾವಿರಕ್ಕೂ ಅಧಿಕ ಜನ ಬೆಂಗಳೂರಿಗೆ ಹೋಗಿ ಹೋರಾಟ ನಡೆಸಿದ್ದಾರೆ. ಈ ಹೋರಾಟಕ್ಕಾಗಿ ಆದ ವೆಚ್ಚದ ಒಂದು ಪಾಲು ಅನುದಾನದ ಭರವಸೆ ಸಹ ಸರ್ಕಾರದಿಂದ ಸಿಕ್ಕಿಲ್ಲ!

ಸ್ಥಳೀಯ ಗ್ರಾ ಪಂ ಪ್ರತಿನಿಧಿಗಳು ಹಾಗೂ ನೌಕರರನ್ನು ಗ್ರಾಮ ಪಂಚಾಯತ ಪ್ರತಿನಿಧಿಗಳ ಒಕ್ಕೂಟದ ಅಧ್ಯಕ್ಷ ಎಂ ಕೆ ಭಟ್ಟ ಕರೆದೊಯ್ದರು. ಕೇವಲ ಬಸ್ ಟಿಕೆಟ್’ಗಾಗಿಯೇ ಜನಪ್ರತಿನಿಧಿಗಳು 48 ಸಾವಿರ ರೂ ವೆಚ್ಚ ಮಾಡಿದ್ದು ಊಟ-ವಸತಿ ಎಲ್ಲಾ ವಿಷಯದಲ್ಲಿಯೂ ಹೋರಾಟಗಾರರು ನೀಡಿದ ಹಣದ ಒಂದಷ್ಟು ಪಾಲು ತೆರಿಗೆ ರೂಪದಲ್ಲಿ ಸರ್ಕಾರಕ್ಕೆ ಸಿಕ್ಕಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಕೆಲಸ ಮಾಡುವ ನೌಕರರು ಈ ಹೋರಾಟದಲ್ಲಿ ಭಾಗಿಯಾಗಿದ್ದು ಅವರ ಬಸ್ ಪ್ರಯಾಣದ ಶುಲ್ಕ ಹಾಗೂ ಇತರೆ ವೆಚ್ಚಗಳಿಂದ ಸರ್ಕಾರಕ್ಕೆ ದೊರೆತ ಲಾಭದ ಲೆಕ್ಕಾಚಾರ ಈ 48 ಸಾವಿರಕ್ಕೆ ಸೇರಿದ್ದಲ್ಲ. ಇನ್ನೂ ಇಡೀ ರಾಜ್ಯದಿಂದ 50 ಸಾವಿರಕ್ಕೂ ಅಧಿಕ ಜನ ಈ ಹೋರಾಟದಲ್ಲಿ ಭಾಗಿಯಾಗಿದ್ದಾರೆ. ಒಂದು ದಿನದ ಹೋರಾಟದಿಂದ ರಾಜ್ಯ ಸರ್ಕಾರಕ್ಕೆ ಕೋಟಿ ಲೆಕ್ಕಾಚಾರದಲ್ಲಿ ಹಣ ಸಂದಾಯವಾಗಿದ್ದು, ಶನಿವಾರ ಸಹ ಪ್ರತಿಭಟನೆ ಮುಂದುವರೆದಿದೆ. ಶನಿವಾರ ಸಹ ರಾಜ್ಯದ ನಾನಾ ಭಾಗಗಳಿಂದ ಇನ್ನಷ್ಟು ಜನ ಬೆಂಗಳೂರಿಗೆ ತೆರಳುತ್ತಿದ್ದಾರೆ.

Advertisement. Scroll to continue reading.
Advertisement. Scroll to continue reading.
ADVERTISEMENT
ADVERTISEMENT

ಶುಕ್ರವಾರ ಪ್ರತಿಭಟನೆ ಮುಗಿಸಿದ ಕೆಲವರು ಶನಿವಾರ ಊರಿಗೆ ಮರಳಿದ್ದು, ಧರಣಿ ಮುಂದುವರೆದರೆ ಮತ್ತೆ ಸೋಮವಾರ ತೆರಳಿ ಅದರಲ್ಲಿ ಭಾಗವಹಿಸುವ ಉಮೇದಿಯಲ್ಲಿದ್ದಾರೆ. ಒಟ್ಟು 11 ಒಕ್ಕೂಟದವರು ಸೇರಿ ಈ ಪ್ರತಿಭಟನೆ ಆಯೋಜಿಸಿದ್ದಾರೆ. ವಿ ಪ ಸದಸ್ಯ ಶಾಂತರಾಮ ಸಿದ್ದಿ ಅವರು ಈ ಹೋರಾಟದಲ್ಲಿ ಭಾಗಿಯಾಗಿದ್ದಾರೆ. ಈ ಹೋರಾಟದಿಂದ ಸರ್ಕಾರದ ಬೊಕ್ಕಸ ತುಂಬುತ್ತಿದ್ದರೂ ಹೋರಾಟಗಾರರ ಬೇಡಿಕೆ ಮಾತ್ರ ಈಡೇರುತ್ತಿಲ್ಲ.

ಕಾಟಾಚಾರದ ಸಭೆ:
ಹೋರಾಟಗಾರರ ಮನವಿ ಸ್ವೀಕರಿಸಿದ ಸರ್ಕಾರದ ಕಾರ್ಯದರ್ಶಿ ಉಮಾ ಮಹಾದೇವನ್ `ಅನುದಾನದ ಬಗ್ಗೆ ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವೆ. 5 ಪ್ರತಿನಿಧಿಗಳು ಮಾತುಕಥೆಗೆ ಬನ್ನಿ’ ಎಂದು ಕರೆದರು. ಆದರೆ, ಪ್ರತಿಭಟನಾಕಾರರು ಇದಕ್ಕೆ ಒಪ್ಪದೇ ಹೋರಾಟ ಮುಂದುವರೆಸಿದರು. ಮಂತ್ರಿಗಳು ಆಗಮಿಸಿ ಮನವಿ ಸ್ವೀಕಾರ ನಡೆಸುವವರೆಗೂ ಪ್ರತಿಭಟನೆ ಮುಂದುವರೆಸುವುದಾಗಿ ಅಲ್ಲಿದ್ದವರು ತಿಳಿಸಿದರು.

ShareSendTweetShare
ADVERTISEMENT
Previous Post

ಮಂಚಿಕೇರಿಯ ಈ ಅಜ್ಜಿ – ಮೊಮ್ಮಗ ಇದೀಗ ವಲ್ಡ್ ಫೇಮಸ್ಸು!

Next Post

ಅಲ್ಪ ಹಣಕ್ಕೆ ಅಪಾರ ಬಂಗಾರ: ಅಂಗಡಿಕಾರರಿಗೆ ಮೋಸ ಮಾಡುವುದೇ ಅವರ ಕಾಯಕ!

Next Post

ಅಲ್ಪ ಹಣಕ್ಕೆ ಅಪಾರ ಬಂಗಾರ: ಅಂಗಡಿಕಾರರಿಗೆ ಮೋಸ ಮಾಡುವುದೇ ಅವರ ಕಾಯಕ!

ಸರ್ಕಾರಿ ಅಕ್ಕಿ ಕಳ್ಳರ ಪಾಲು!

ಜನಪ್ರಿಯ ವೈದ್ಯರ ವರ್ಗಾವಣೆಗೆ ಜನಶಕ್ತಿ ವೇದಿಕೆ ವಿರೋಧ

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.