6
  • Latest

ಗ್ರಾ ಪಂ ಪ್ರತಿನಿಧಿಗಳಿಂದ ಉಗ್ರ ಪ್ರತಿಭಟನೆ: ಈ ಹೋರಾಟದಿಂದ ಸರ್ಕಾರಕ್ಕೆ ಲಾಭ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜ್ಯ

ಗ್ರಾ ಪಂ ಪ್ರತಿನಿಧಿಗಳಿಂದ ಉಗ್ರ ಪ್ರತಿಭಟನೆ: ಈ ಹೋರಾಟದಿಂದ ಸರ್ಕಾರಕ್ಕೆ ಲಾಭ!

AchyutKumar by AchyutKumar
in ರಾಜ್ಯ

ಗ್ರಾಮ ಪಂಚಾಯತಗಳಿಗೆ ಸರ್ಕಾರ ಅನುದಾನ ನೀಡುತ್ತಿಲ್ಲ ಎಂದು ಆರೋಪಿಸಿ ಉತ್ತರ ಕನ್ನಡ ಜಿಲ್ಲೆಯ ಗ್ರಾ ಪಂ ಪ್ರತಿನಿಧಿಗಳ ಜೊತೆ ಗ್ರಾ ಪಂ ಸಿಬ್ಬಂದಿ ಸೇರಿ ಸಾವಿರಕ್ಕೂ ಅಧಿಕ ಜನ ಬೆಂಗಳೂರಿಗೆ ಹೋಗಿ ಹೋರಾಟ ನಡೆಸಿದ್ದಾರೆ. ಈ ಹೋರಾಟಕ್ಕಾಗಿ ಆದ ವೆಚ್ಚದ ಒಂದು ಪಾಲು ಅನುದಾನದ ಭರವಸೆ ಸಹ ಸರ್ಕಾರದಿಂದ ಸಿಕ್ಕಿಲ್ಲ!

ADVERTISEMENT

ಸ್ಥಳೀಯ ಗ್ರಾ ಪಂ ಪ್ರತಿನಿಧಿಗಳು ಹಾಗೂ ನೌಕರರನ್ನು ಗ್ರಾಮ ಪಂಚಾಯತ ಪ್ರತಿನಿಧಿಗಳ ಒಕ್ಕೂಟದ ಅಧ್ಯಕ್ಷ ಎಂ ಕೆ ಭಟ್ಟ ಕರೆದೊಯ್ದರು. ಕೇವಲ ಬಸ್ ಟಿಕೆಟ್’ಗಾಗಿಯೇ ಜನಪ್ರತಿನಿಧಿಗಳು 48 ಸಾವಿರ ರೂ ವೆಚ್ಚ ಮಾಡಿದ್ದು ಊಟ-ವಸತಿ ಎಲ್ಲಾ ವಿಷಯದಲ್ಲಿಯೂ ಹೋರಾಟಗಾರರು ನೀಡಿದ ಹಣದ ಒಂದಷ್ಟು ಪಾಲು ತೆರಿಗೆ ರೂಪದಲ್ಲಿ ಸರ್ಕಾರಕ್ಕೆ ಸಿಕ್ಕಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಕೆಲಸ ಮಾಡುವ ನೌಕರರು ಈ ಹೋರಾಟದಲ್ಲಿ ಭಾಗಿಯಾಗಿದ್ದು ಅವರ ಬಸ್ ಪ್ರಯಾಣದ ಶುಲ್ಕ ಹಾಗೂ ಇತರೆ ವೆಚ್ಚಗಳಿಂದ ಸರ್ಕಾರಕ್ಕೆ ದೊರೆತ ಲಾಭದ ಲೆಕ್ಕಾಚಾರ ಈ 48 ಸಾವಿರಕ್ಕೆ ಸೇರಿದ್ದಲ್ಲ. ಇನ್ನೂ ಇಡೀ ರಾಜ್ಯದಿಂದ 50 ಸಾವಿರಕ್ಕೂ ಅಧಿಕ ಜನ ಈ ಹೋರಾಟದಲ್ಲಿ ಭಾಗಿಯಾಗಿದ್ದಾರೆ. ಒಂದು ದಿನದ ಹೋರಾಟದಿಂದ ರಾಜ್ಯ ಸರ್ಕಾರಕ್ಕೆ ಕೋಟಿ ಲೆಕ್ಕಾಚಾರದಲ್ಲಿ ಹಣ ಸಂದಾಯವಾಗಿದ್ದು, ಶನಿವಾರ ಸಹ ಪ್ರತಿಭಟನೆ ಮುಂದುವರೆದಿದೆ. ಶನಿವಾರ ಸಹ ರಾಜ್ಯದ ನಾನಾ ಭಾಗಗಳಿಂದ ಇನ್ನಷ್ಟು ಜನ ಬೆಂಗಳೂರಿಗೆ ತೆರಳುತ್ತಿದ್ದಾರೆ.

ಶುಕ್ರವಾರ ಪ್ರತಿಭಟನೆ ಮುಗಿಸಿದ ಕೆಲವರು ಶನಿವಾರ ಊರಿಗೆ ಮರಳಿದ್ದು, ಧರಣಿ ಮುಂದುವರೆದರೆ ಮತ್ತೆ ಸೋಮವಾರ ತೆರಳಿ ಅದರಲ್ಲಿ ಭಾಗವಹಿಸುವ ಉಮೇದಿಯಲ್ಲಿದ್ದಾರೆ. ಒಟ್ಟು 11 ಒಕ್ಕೂಟದವರು ಸೇರಿ ಈ ಪ್ರತಿಭಟನೆ ಆಯೋಜಿಸಿದ್ದಾರೆ. ವಿ ಪ ಸದಸ್ಯ ಶಾಂತರಾಮ ಸಿದ್ದಿ ಅವರು ಈ ಹೋರಾಟದಲ್ಲಿ ಭಾಗಿಯಾಗಿದ್ದಾರೆ. ಈ ಹೋರಾಟದಿಂದ ಸರ್ಕಾರದ ಬೊಕ್ಕಸ ತುಂಬುತ್ತಿದ್ದರೂ ಹೋರಾಟಗಾರರ ಬೇಡಿಕೆ ಮಾತ್ರ ಈಡೇರುತ್ತಿಲ್ಲ.

Advertisement. Scroll to continue reading.

ಕಾಟಾಚಾರದ ಸಭೆ:
ಹೋರಾಟಗಾರರ ಮನವಿ ಸ್ವೀಕರಿಸಿದ ಸರ್ಕಾರದ ಕಾರ್ಯದರ್ಶಿ ಉಮಾ ಮಹಾದೇವನ್ `ಅನುದಾನದ ಬಗ್ಗೆ ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವೆ. 5 ಪ್ರತಿನಿಧಿಗಳು ಮಾತುಕಥೆಗೆ ಬನ್ನಿ’ ಎಂದು ಕರೆದರು. ಆದರೆ, ಪ್ರತಿಭಟನಾಕಾರರು ಇದಕ್ಕೆ ಒಪ್ಪದೇ ಹೋರಾಟ ಮುಂದುವರೆಸಿದರು. ಮಂತ್ರಿಗಳು ಆಗಮಿಸಿ ಮನವಿ ಸ್ವೀಕಾರ ನಡೆಸುವವರೆಗೂ ಪ್ರತಿಭಟನೆ ಮುಂದುವರೆಸುವುದಾಗಿ ಅಲ್ಲಿದ್ದವರು ತಿಳಿಸಿದರು.

Advertisement. Scroll to continue reading.
Previous Post

ಮಂಚಿಕೇರಿಯ ಈ ಅಜ್ಜಿ – ಮೊಮ್ಮಗ ಇದೀಗ ವಲ್ಡ್ ಫೇಮಸ್ಸು!

Next Post

ಅಲ್ಪ ಹಣಕ್ಕೆ ಅಪಾರ ಬಂಗಾರ: ಅಂಗಡಿಕಾರರಿಗೆ ಮೋಸ ಮಾಡುವುದೇ ಅವರ ಕಾಯಕ!

Next Post

ಅಲ್ಪ ಹಣಕ್ಕೆ ಅಪಾರ ಬಂಗಾರ: ಅಂಗಡಿಕಾರರಿಗೆ ಮೋಸ ಮಾಡುವುದೇ ಅವರ ಕಾಯಕ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ