6
  • Latest

ಆತ ವಿದ್ಯಾವಂತ.. ಪ್ರತಿಭಾವಂತ.. ವಿದೇಶಿ ಉದ್ಯೋಗಿ ಬೇರೆ.. ಆದರೆ, ಇದೀಗ ಅನಾಥ!

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜ್ಯ

ಆತ ವಿದ್ಯಾವಂತ.. ಪ್ರತಿಭಾವಂತ.. ವಿದೇಶಿ ಉದ್ಯೋಗಿ ಬೇರೆ.. ಆದರೆ, ಇದೀಗ ಅನಾಥ!

AchyutKumar by AchyutKumar
in ರಾಜ್ಯ

ಶಿರಸಿ: ಅಮೇರಿಕಾ, ಜರ್ಮನಿ ಸೇರಿ ವಿವಿಧ ದೇಶಗಳಲ್ಲಿ ಇಂಜಿನಿಯರ್ ಆಗಿ ಸೇವೆ ಸಲ್ಲಿಸಿದ ಶಿರಸಿ ಮೂಲದ ರಮೇಶ್ ಪಾಡುರಂಗ ಪಾವಸ್ವರ (65) ಇದೀಗ ಅನಾಥರಾಗಿದ್ದಾರೆ.

ADVERTISEMENT

ರಮೇಶ ಪಾವಸ್ವರ್ ಅವರ ಸಹೋದರಿ ಖ್ಯಾತ ವೈದ್ಯರು. ಅವರ ಮಗ ಸಹ ಮುಂಬೈಯಲ್ಲಿ ಉನ್ನತ ಉದ್ಯೋಗದಲ್ಲಿದ್ದಾರೆ. ಆದರೆ, ಅವರ ವಿಳಾಸ ಅರಿವಿಲ್ಲ. ಪತ್ನಿ ಅವರಿಂದ ದೂರವಾಗಿದ್ದು, ನಿವೃತ್ತಿ ನಂತರ ಅವರು ಅಲ್ಲಲ್ಲಿ ಅಲೆದಾಟ ನಡೆಸಿ ಕೊನೆಗೆ ಅನಾಥ ಆಶ್ರಮ ಸೇರಿದ್ದಾರೆ!

ಐದು ದಿನಗಳ ಹಿಂದೆ ಉಡುಪಿಗೆ ಹೋದ ಅವರು `ನಾನು ಎಲ್ಲಾ ಕಳೆದುಕೊಂಡಿದ್ದೇನೆ. ನನಗೆ ಆಸರೆ ಬೇಕು’ ಎಂದು ಪೊಲೀಸರ ಬಳಿ ಅಂಗಲಾಚಿದ್ದಾರೆ. ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರ ಆರೋಗ್ಯ ವಿಚಾರಿಸಿ ಉಡುಪಿಯ ಬೈಲೂರಿನಲ್ಲಿರುವ `ಹೊಸ ಬೆಳಕು’ ಆಶ್ರಮಕ್ಕೆ ದಾಖಲಿಸಿದ್ದಾರೆ.

Advertisement. Scroll to continue reading.

10ಕ್ಕೂ ಅಧಿಕ ಭಾಷೆ ಮಾತನಾಡುವ ಅವರು ಪ್ರಸ್ತುತ ಒಂದು ಭಾಷೆಯಲ್ಲಿ ಸಹ ಸರಿಯಾಗಿ ಉತ್ತರಿಸುತ್ತಿಲ್ಲ. ಶಿರಸಿ ತನ್ನ ಊರು ಎಂದು ಹೇಳಿಕೊಂಡಿರುವ ರಮೇಶ ಪಾವಸ್ವರ್ ಇನ್ನಷ್ಟು ಮಾಹಿತಿ ಹೇಳುವಂತೆ ಕೇಳಿದರೂ ಮಾತನಾಡುತ್ತಿಲ್ಲ.

Advertisement. Scroll to continue reading.

ರಸ್ತೆಯಲ್ಲಿ ಅಡ್ಡಾಡುತ್ತಿದ್ದ ಅವರು ಕೆಲ ದಿನಗಳಿಂದ ಊಟ ಮಾಡಿರಲಿಲ್ಲ. ಸ್ನಾನಕ್ಕೆ ಸಹ ಅವರಿಗೆ ಅವಕಾಶ ಸಿಕ್ಕಿರಲಿಲ್ಲ. ಉನ್ನತ ಓದು, ಅತ್ಯುತ್ತಮ ಉದ್ಯೋಗ ಮಾಡಿದ್ದ ಕಾರಣ ಭಿಕ್ಷೆ ಬೇಡಲು ಸಹ ಅವರಿಂದ ಸಾಧ್ಯವಾಗಿಲ್ಲ. ದುಡಿಮೆಯ ಒಂದು ಚೂರು ಹಣ ಸಹ ಅವರ ಬಳಿಯಿಲ್ಲ. ಹೀಗಿರುವಾಗ ಹೊಸ ಬೆಳಕು ಆಶ್ರಮಕ್ಕೆ ಬಂದ ತಕ್ಷಣ `ಇದು ಆಶ್ರಮ ಅಲ್ಲ, ಸ್ವರ್ಗ’ ಎಂದು ಹೇಳಿರುವುದು ರಮೇಶ್ ಪಾವಸ್ವರ ಅವರ ಮೊದಲ ನುಡಿ.

ನೇರ ಸ್ವಭಾವದ ರಮೇಶ ಪಾವಸ್ವರ್ ಪ್ರಸ್ತುತ ಸದಾ ಪುಸ್ತಕ ಹಿಡಿದು ಕುಳಿತಿರುತ್ತಾರೆ. `ಏನಾದರೂ ಕೆಲಸ ಕೊಡಿ’ ಎಂದು ಆಶ್ರಮದವರನ್ನು ಕೇಳುತ್ತಿದ್ದಾರೆ. `ತಾನು ಒಂಟಿ’ ಎನ್ನುತ್ತಿರುವ ಅವರು ಮಾನಸಿಕವಾಗಿ ಕುಗ್ಗಿದ್ದಾರೆ. ಪೊಲೀಸರು ಸಹ ಇದೀಗ ಅವರ ಸಂಬoಧಿಕರ ಹುಡುಕಾಟದಲ್ಲಿದ್ದಾರೆ.
ರಮೇಶ ಪಾವಸ್ವರ್ ಅವರ ಬಗ್ಗೆ ನಿಮಗೇನಾದರೂ ಗೊತ್ತಿದ್ದರೆ ಆಶ್ರಮಕ್ಕೆ ತಿಳಿಸಿ. ಆಶ್ರಮದ ಫೋನ್ ನಂ: 6364777100

Previous Post

ಕರೆಯದಿದ್ದರೂ ವೇದಿಕೆ ಏರಿದವರಿಗೆ ಮುಜುಗರ!

Next Post

ಸಾವಿರ ಸಾವಿರ ಪುಸ್ತಕಗಳ ಸರದಾರ: ಭಗವದ್ಗೀತೆ ಸಂದೇಶ ಸಾರುವ ಗುತ್ತಿಗೆದಾರ!

Next Post

ಸಾವಿರ ಸಾವಿರ ಪುಸ್ತಕಗಳ ಸರದಾರ: ಭಗವದ್ಗೀತೆ ಸಂದೇಶ ಸಾರುವ ಗುತ್ತಿಗೆದಾರ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ