6
  • Latest
Constable till yesterday.. Now PSI

ನಿನ್ನೆ ಮೊನ್ನೆಯವರೆಗೂ ಕಾನ್ಸ್ಟೇಬಲ್.. ಇದೀಗ ಪಿಎಸ್‌ಐ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜ್ಯ

ನಿನ್ನೆ ಮೊನ್ನೆಯವರೆಗೂ ಕಾನ್ಸ್ಟೇಬಲ್.. ಇದೀಗ ಪಿಎಸ್‌ಐ!

AchyutKumar by AchyutKumar
in ರಾಜ್ಯ
Constable till yesterday.. Now PSI

ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಬಳಿಯ ಹಾರುಮೇಸ್ಕೇರಿಯ ಗೀತಾ ಗೌಡ ನಿನ್ನೆ-ಮೊನ್ನೆಯವರೆಗೂ ಪೊಲೀಸ್ ಕಾನ್ಸ್ಟೇಬಲ್ ಆಗಿದ್ದರು. ಆದರೆ, ಇದೀಗ ಅವರು ಪಿಎಸ್‌ಐ ಆಗಿದ್ದಾರೆ!

ADVERTISEMENT

ಮುಂಬಡ್ತಿ ಪಡೆದು ಈ ಹುದ್ದೆಗೆ ಬರಬೇಕು ಅಂದರೆ ಸೇವೆಗೆ ಸೇರಿ ಕನಿಷ್ಟ 25 ವರ್ಷ ಕಳೆಯಬೇಕಿತ್ತು. ಆದರೆ, ಶೃದ್ಧೆಯಿಂದ ಪರೀಕ್ಷೆ ಎದುರಿಸಿದ ಅವರು ಸೇವೆಗೆ ಸೇರಿದ 10 ವರ್ಷದಲ್ಲಿ ಈ ಸಾಧನೆ ಮಾಡಿದ್ದಾರೆ. ಸಕಾಲದಲ್ಲಿ ಮುಂಬ0ಡ್ತಿ ದೊರೆತರೂ ಈ ವೇಳೆಗೆ ಅವರು ಹೆಡ್ ಕಾನ್ಸಟೇಬಲ್ ಆಗುತ್ತಿದ್ದರು. ಪರೀಕ್ಷೆ ಎದುರಿಸಿದ ಕಾರಣ ಅವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಪಿಎಸ್‌ಐ ಆಗಿ ಆಯ್ಕೆಯಾಗಿದ್ದಾರೆ.

ಪೊಲೀಸ್ ಪೇದೆಯಾಗಿ ಆಯ್ಕೆಯಾದ ತಕ್ಷಣ ಮೈಸೂರಿನಲ್ಲಿ ತರಬೇತಿ ಪಡೆದಿದ್ದ ಗೀತಾ ಗೌಡ ನಂತರ ಬೆಂಗಳೂರು ಸೇರಿದರು. ಅಲ್ಲಿ ಬಾಂಬ್ ದಾಳಿ ರಕ್ಷಣಾ ತಂಡದಲ್ಲಿ ಕಾರ್ಯ ನಿರ್ವಹಿಸಿದರು. ನಂತರ ಮೆಟ್ರೋ ಸೇರಿ ವಿವಿಧ ಕಡೆ ಸೇವೆ ಸಲ್ಲಿಸಿದರು. ನಡುವೆ ಸೂಕ್ಷ್ಮ ಸ್ಥಾವರಗಳ ಭದ್ರತೆಗೂ ಅವರನ್ನು ನಿಯೋಜಿಸಲಾಗಿತ್ತು. ಅದಾದ ನಂತರ ಹುಬ್ಬಳ್ಳಿ ವಿಮಾನ ನಿಲ್ದಾಣದ ಭದ್ರತೆಗೆ ಅವರನ್ನು ಕಳುಹಿಸಲಾಗಿದ್ದು, ಪ್ರಸ್ತುತ ಧಾರವಾಡ ಕಾರಾಗೃಹದಲ್ಲಿ ಕರ್ತವ್ಯದಲ್ಲಿದ್ದಾರೆ.

Advertisement. Scroll to continue reading.

`ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಕೌಶಲ್ಯ ಅಳವಡಿಸಿಕೊಂಡರೆ ಸಾಧನೆ ಸಾಧ್ಯ’ ಎಂಬುದು ಗೀತಾ ಗೌಡ ಅವರ ಮಾತು. `ವಿಮಾನ ನಿಲ್ದಾಣದಲ್ಲಿ ಸೇವೆಯಲ್ಲಿದ್ದ ಕಾರಣ ಭಾಷಾ ಸಂವಹನ ಪರೀಕ್ಷೆ ಎದುರಿಸಲು ಸಹಾಯವಾಯಿತು’ ಎಂದವರು ಅನಿಸಿಕೆ ಹಂಚಿಕೊoಡರು. `ಪರೀಕ್ಷೆಯಲ್ಲಿ ಪ್ರಬಂಧಕ್ಕೆ 50 ಅಂಕಗಳಿದ್ದು, ಪ್ರಜಾಪ್ರಭುತ್ವ ಕಾನೂನು ಮಹತ್ವದ ಬಗ್ಗೆ ಪ್ರಶ್ನೆ ಕೇಳಲಾಗಿತ್ತು. ಕಾನೂನು ಮಹತ್ವದ ಬಗ್ಗೆ ಇದ್ದ ತಿಳುವಳಿಕೆ ಪಿಎಸ್‌ಐ ಆಗಲು ನೆರವಾಯಿತು’ ಎಂದವರು ಹೇಳಿದರು.

Advertisement. Scroll to continue reading.

ಅತ್ಯಂತ ಹಿಂದೂಳಿದ ಹಾಲಕ್ಕಿ ಸಮುದಾಯದವರಲ್ಲಿ ಮಹಿಳಾ ಪೊಲೀಸರ ಸಂಖ್ಯೆ ವಿರಳ. ಅದರಲ್ಲಿಯೂ ಪಿಎಸ್‌ಐ ಆಗಿ ಆಯ್ಕೆ ಆದವರಲ್ಲಿ ಗೀತಾ ಗೌಡ ಮೊದಲಿಗರು. ಹೀಗಾಗಿ ಹಾಲಕ್ಕಿ ಸಮುದಾಯದಲ್ಲಿ ಸಡಗರ ಮನೆ ಮಾಡಿದೆ.

 

Previous Post

ಕೈ ಮುಗಿದ ಫೋಟೋಗಳನ್ನು ಬಿಸಾಡಬೇಡಿ: ವಿಘ್ನ ದೇವರಿಗೆ ವೈಜ್ಞಾನಿಕ ಮುಕ್ತಿ!

Next Post

ನಿವೃತ್ತಿ ಅಂಚಿನಲ್ಲಿರುವವರಿಗೆ ಈ ಇಲಾಖೆ: ಹಿರಿಯ ನಾಗರಿಕರ ಸೇವೆಗಿಲ್ಲ ನಿರ್ಧಿಷ್ಟ ಅಧಿಕಾರಿ!

Next Post

ನಿವೃತ್ತಿ ಅಂಚಿನಲ್ಲಿರುವವರಿಗೆ ಈ ಇಲಾಖೆ: ಹಿರಿಯ ನಾಗರಿಕರ ಸೇವೆಗಿಲ್ಲ ನಿರ್ಧಿಷ್ಟ ಅಧಿಕಾರಿ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ