6
  • Latest
He is the king of the jungle!

ಕೆಳಾಸೆ ಕಾಡಿಗೆ ಈತನೇ ರಾಜ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Wednesday, February 11, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಲೇಖನ

ಕೆಳಾಸೆ ಕಾಡಿಗೆ ಈತನೇ ರಾಜ!

AchyutKumar by AchyutKumar
October 23, 2024
in ಲೇಖನ
He is the king of the jungle!
advt advt advt
ADVERTISEMENT

ಕೆಳಾಸೆ ಕಾಡಿನ ಸುರೇಶ ಸಿದ್ದಿ ಅವರಿಗಿರುವ ಅರಣ್ಯ ಜ್ಞಾನ ಹಾಗೂ ಕಾಳಜಿ ಬಹುತೇಕ ಅರಣ್ಯ ಅಧಿಕಾರಿ-ಸಿಬ್ಬಂದಿಗೆ ಇಲ್ಲ!

ಅಂಕೋಲಾ-ಯಲ್ಲಾಪುರ ಗಡಿಭಾಗದ ಕೆಳಾಸೆಯಲ್ಲಿ ಸುರೇಶ ಸಿದ್ದಿ ವಾಸವಾಗಿದ್ದಾರೆ. ಮಣ್ಣಿನ ಮನೆಯಲ್ಲಿ ಅವರೇ ತಯಾರಿಸಿದ ಗಣಪತಿ ಮೂರ್ತಿ, ಮನೆ ಮುಂದಿನ ದೈವ ಹಾಗೂ ಒಂದು ನಾಯಿ ಅವರ ಅತಿ ದೊಡ್ಡ ಆಸ್ತಿ. ಇದನ್ನು ಬಿಟ್ಟು ಬಿಡಿಗಾಸು ಅವರ ಬಳಿಯಿಲ್ಲ. ಅವರು ವಾಸಿಸುವ ಮಣ್ಣಿನ ಮನೆಗೆ ಬಾಗಿಲು ಸಹ ಇಲ್ಲ!

ADVERTISEMENT
ADVERTISEMENT

ಸುರೇಶ ಸಿದ್ದಿ `ಯಾವ ಮರದಲ್ಲಿ ಯಾವ ಹಕ್ಕಿ ಗೂಡು ಕಟ್ಟಿದೆ ಎಂಬುದರಿ0ದ ಹಿಡಿದು ಯಾವ ಪ್ರಾಣಿ ಈ ಭಾಗದಲ್ಲಿ ಸಂಚಲನ ನಡೆಸಿದೆ’ ಎಂಬುದನ್ನು ಸಹ ಕರಾರುವಕ್ಕಾಗಿ ಹೇಳುವಷ್ಟು ಅಧ್ಯಯನಶೀಲರಾಗಿದ್ದಾರೆ. `ಯಾವ ಬಳ್ಳಿ ವಿಷ. ಯಾವ ಗಿಡ ಔಷಧ’ ಎಂಬುದು ಸುರೇಶ ಸಿದ್ದಿ ಅವರಿಗೆ ಕರಗತ. ಎಂಥ ಬೆಟ್ಟ ಗುಡ್ಡಗಳಿದ್ದರೂ ಬರಿಗಾಲಿನಲ್ಲಿಯೇ ಹತ್ತುತ್ತಾರೆ. ಅದಾಗಿಯೂ ಬೇರೆಯವರು ಮಾಡಿದ ತಪ್ಪಿಗೆ ಸುರೇಶ ಸಿದ್ದಿ ಹೊಡೆತ ತಿನ್ನುವುದು ಮಾಮೂಲು. ಆ ಭಾಗದಲ್ಲಿ ಎಲ್ಲಿಯೇ ಅರಣ್ಯ ಅಪರಾಧ ನಡೆದರೂ ಅಧಿಕಾರಿ-ಸಿಬ್ಬಂದಿಗೆ ಸುರೇಶ ಸಿದ್ದಿ ಮೇಲೆ ಮೊದಲ ಕಣ್ಣು. ಹೀಗಾಗಿಯೇ ಅವರು ಯಾರೊಂದಿಗೂ ಹೆಚ್ಚಿಗೆ ಮಾತನಾಡುವುದಿಲ್ಲ. ಯಾರೊಂದಿಗೂ ಬೆರೆಯುವುದಿಲ್ಲ!

Advertisement. Scroll to continue reading.

ಸುರೇಶ ಸಿದ್ದಿ ಅವರಿಗೆ ಯಕ್ಷಗಾನ ಎಂದರೆ ಅಚ್ಚುಮೆಚ್ಚು. ಯಕ್ಷವೇಷ ಧರಿಸಿ ಫೋಟೋ ತೆಗೆಸಿಕೊಳ್ಳಬೇಕು ಎಂಬುದು ಅವರ ಜೀವನದ ದೊಡ್ಡ ಆಸೆ. ಚಂದವಾಗಿ ಭಾಗವತಿಕೆಯನ್ನು ಸಹ ಅವರು ಮಾಡುತ್ತಾರೆ. ಬೇರವಯವರ ಕುಣಿತ-ಭಾಗವತಿಕೆ ನೋಡಿಯೇ ಅವರು ಹೆಜ್ಜೆ ಹಾಕುವುದು ಹಾಗೂ ಹಾಡುವುದನ್ನು ಕಲಿತಿದ್ದಾರೆ.

45 ವರ್ಷದ ಸುರೇಶ ಸಿದ್ದಿ ಏಕಾಂಗಿ. ಪುಟ್ಟ ಜೋಪಡಿಯಲ್ಲಿ ಒಬ್ಬರೇ ವಾಸಿಸುತ್ತಾರೆ. ಯಾರಾದರೂ ಕರೆದರೆ ಕೆಲಸಕ್ಕೆ ಹೋಗುತ್ತಾರೆ. ಕೆಲಸಕ್ಕೆ ಕರೆದವರು ಕಾಸು ಕೊಡುವುದು ಕಡಿಮೆ. ಹೊಟ್ಟೆಗೆ ಊಟ-ಒಂದು ಲೋಟ ಮಜ್ಜಿಗೆ ಕೊಟ್ಟು ಕಳುಹಿಸುವವರೇ ಅಧಿಕ. ಕೆಲಸ ಇಲ್ಲದ ದಿನಗಳಲ್ಲಿ ಕಾಡಿನ ಹಣ್ಣುಗಳನ್ನು ತಿಂದು ಕುಡಿದು ಬದುಕುತ್ತಾರೆ. `ನೆಲ್ಲಿಕಾಯಿ ತಿಂದು ನೀರು ಕುಡಿದರೆ ಎರಡು ದಿನವಾದರೂ ಹಸಿವಾಗುವುದಿಲ್ಲ’ ಎಂಬುದನ್ನು ಸುರೇಶ ಸಿದ್ದಿ ಕಂಡುಕೊoಡಿದ್ದಾರೆ. ನಾಯಿ ಏನಾದರೂ ಸಣ್ಣಪುಟ್ಟ ಶಿಕಾರಿ ಮಾಡಿದರೆ ಆ ದಿನ ಸುರೇಶ ಸಿದ್ದಿ ಪಾಲಿಗೆ ಹಬ್ಬ!

Advertisement. Scroll to continue reading.

ಯಲ್ಲಮ್ಮ ದೇವಿ ಆರಾಧಕರಾದವ ಅವರು ಹರಕೆಗಾಗಿ ಕೂದಲು ಬಿಟ್ಟಿದ್ದರು. ಆ ಕೂದಲಿಗೆ ಇದೀಗ ಮಾಂಸ ಬೆಳೆದಿದ್ದು, ಕತ್ತರಿಸಲು ಅಸಾಧ್ಯ. ಅವರ ವೇಷ-ಜಡೆ ನೋಡಿ ಹತ್ತಿರ ಬಂದು ಮಾತನಾಡಿಸುವವರು ವಿರಳ. `ತಾನು ಮದುವೆ ಆದರೂ ಹೆಂಡತಿಯನ್ನು ಬೇರೆಯವರು ಅಪಹರಿಸುತ್ತಾರೆ’ ಎಂಬುದು ಅವರ ದೂರು. ಕೆಳಾಸೆಗೆ ಭೇಟಿ ನೀಡುವ ಕೆಲ ಪ್ರವಾಸಿಗರು ಸುರೇಶ ಸಿದ್ದಿ ಜೊತೆ ಫೋಟೋ ತೆಗೆಸಿಕೊಳ್ಳುತ್ತಾರೆ. ಅವರವರು ನೀಡಿದ ಕಾಸನ್ನು ಸುರೇಶ ಸಿದ್ದಿ ದೇವರ ಪಟದ ಮುಂದಿಡುತ್ತಾರೆ. ದೇವರ ಮುಂದಿದ್ದ ಕಾಸು ಕಳ್ಳರ ಪಾಲಾಗುವುದೇ ಹೆಚ್ಚು!

ಸುರೇಶ ಸಿದ್ದಿ ಅವರ ಬಳಿ ಮೊಬೈಲ್ ಇಲ್ಲ. ವನ ಚೇತನ ತಂಡದವರು ಅವರಿಗೆ ಸೈಕಲ್ ಕೊಡಿಸಿದ್ದಾರೆ. ಮೊದಲು ನಡೆದು ಹೋಗುತ್ತಿದ್ದ ಅವರು ಇದೀಗ ಸೈಕಲ್ ಸವಾರಿ ಮಾಡುತ್ತಾರೆ. ಪೇಟೆಗೆ ಹೋದಾಗ ಸಹ ಮೂಲೆಯಲ್ಲಿ ಕುಳಿತು ಎಲ್ಲರೂ ಹೋದ ಮೇಲೆ ಅಗತ್ಯ ವಸ್ತು ಪಡೆಯುತ್ತಾರೆ. ಹಲವರು ಅವರನ್ನು `ಮಾನಸಿಕ’ ಎನ್ನುತ್ತಾರೆ. ಇನ್ನೂ ಕೆಲವರು `ಮುಗ್ದ’ ಎನ್ನುತ್ತಾರೆ. `ಆತ ಕಳ್ಳ’ ಎನ್ನುವವರೂ ಇದ್ದಾರೆ. ಆದರೆ, ಜನರ ಈ ಯಾವ ಮಾತುಗಳಿಗೆ ಸುರೇಶ ಸಿದ್ದಿ ಎಂದಿಗೂ ತಲೆ ಕೆಡಿಸಿಕೊಂಡಿಲ್ಲ!

ShareSendTweetShare
ADVERTISEMENT
Previous Post

ಪತ್ನಿ ಹೆಸರಲ್ಲಿ ಭೂಮಿ ಖರೀದಿಸಿದ್ದ ಬೆಂಗಳೂರು ಉದ್ಯಮಿ: ದುಷ್ಕರ್ಮಿಯಿಂದ ಬೆಳೆ ನಾಶ!

Next Post

ಶಿರಸಿಗೂ ವ್ಯಾಪಿಸಿದ ಲಿವಿಂಗ್ ಟೂಗೆದರ್: ಆಂಟಿ ಹಿಂದೆ ಹೋದವ ಆತ್ಮಹತ್ಯೆ!

Next Post

ಶಿರಸಿಗೂ ವ್ಯಾಪಿಸಿದ ಲಿವಿಂಗ್ ಟೂಗೆದರ್: ಆಂಟಿ ಹಿಂದೆ ಹೋದವ ಆತ್ಮಹತ್ಯೆ!

ಅರಣ್ಯಾಧಿಕಾರಿ ನಡೆಗೆ ಅತಿಕ್ರಮಣದಾರರ ಆಕ್ರೋಶ

ದೀಪಾವಳಿ ಆಫರ್ ನೀಡಿದವನ ಮೇಲೆ ಪೊಲೀಸ್ ದೂರು!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.