6
  • Latest
Yakshashree A historical story by profession

ಯಕ್ಷಶ್ರೀ: ವೃತ್ತಿಯಿಂದ ಐತಿಹಾಸಿಕ ಕಥೆ.. ಪೃವೃತ್ತಿಯಿಂದ ಪೌರಾಣಿಕ ಕಥೆ ಹೇಳುವ ಸಾಹಿತಿ ಇವರು!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಲೇಖನ

ಯಕ್ಷಶ್ರೀ: ವೃತ್ತಿಯಿಂದ ಐತಿಹಾಸಿಕ ಕಥೆ.. ಪೃವೃತ್ತಿಯಿಂದ ಪೌರಾಣಿಕ ಕಥೆ ಹೇಳುವ ಸಾಹಿತಿ ಇವರು!

AchyutKumar by AchyutKumar
in ಲೇಖನ
Yakshashree A historical story by profession

ವೃತ್ತಿಯಲ್ಲಿ ಐತಿಹಾಸಿಕ ಕಥೆ ಹೇಳುವ ಕುಮಟಾ ಹಿತ್ತಲಮಕ್ಕಿಯ ಬೊಮ್ಮಯ್ಯ ಗಾಂವಕಾರರು ಪ್ರವೃತ್ತಿಯಲ್ಲಿ ಪೌರಾಣಿಕ ಕಥೆಗಳನ್ನು ತಿಳಿಸುವ ಮೂಲಕ ಜನಮನ್ನಣೆ ಪಡೆದಿದ್ದಾರೆ.

ADVERTISEMENT

ಎಂ.ಎ ಹಾಗೂ ಬಿ.ಇಡಿ ಓದಿರುವ ಅವರು ಬಾಲ್ಯದಿಂದಲೂ ಯಕ್ಷಗಾನದ ಬಗ್ಗೆ ಅಪಾರ ಆಸಕ್ತಿಹೊಂದಿದ್ದರು. ಹೀಗಾಗಿಯೇ 13ನೇ ವಯಸ್ಸಿನಲ್ಲಿ ಮನ್ಮಥನ ಪಾತ್ರದ ಮೂಲಕ ರಂಗ ಪ್ರವೇಶಿಸಿದರು. 16ನೇ ವಯಸ್ಸಿನಲ್ಲಿ ಕೃಷ್ಣ ಮಹಾಲೆ ಹಾಗೂ ಶುಕ್ರಪ್ಪ ನಾಯಕರ ನಿರ್ದೇಶನದಲ್ಲಿ ಭಾಗವತಿಕೆ ಆರಂಭಿಸಿದರು. 1984ರಲ್ಲಿ ಹಂಗಾರಕಟ್ಟೆ ಕೇಂದ್ರ ಸೇರಿ ಸದಾನಂದ ಐತಾಳ ಹಾಗೂ ಕೆ.ಪಿ.ಹೆಗಡೆಯವರಲ್ಲಿ ಭಾಗವತಿಕೆ ಅಭ್ಯಾಸ ಮಾಡಿದರು. ಆಕ್ಟರ್ ಜೋಶಿ, ಎಂ ಎಂ ನಾಯ್ಕ, ಸ ರಾ ನಾಯಕ ಮೊದಲಾದವರು ಅವರನ್ನು ಕೈ ಹಿಡಿದು ನಡೆಸಿದ್ದು ಅವರೆಲ್ಲರ ಮಾರ್ಗದರ್ಶನದಲ್ಲಿ ಅತ್ಯುತ್ತಮ ವೇಷಧಾರಿಯಾಗಿ ರೂಪುಗೊಂಡರು.

ಅಭಿಮನ್ಯು, ಸುಧನ್ವ, ಬಬ್ರುವಾಹನ ಮುಂತಾದ ವೇಷಗಳ ಮೂಲಕ ಬೊಮ್ಮಯ್ಯ ಗಾಂವಕಾರರು ಪ್ರಸಿದ್ಧಿಗೆ ಬಂದರು. 1982ರಲ್ಲಿಯೇ ಅವರು ದೂರದರ್ಶನ ಕಾರ್ಯಕ್ರಮವೊಂದರಲ್ಲಿ ಯಕ್ಷಗಾನ ಪ್ರದರ್ಶನ ನೀಡಿದ್ದರು. ಚಿಟ್ಟಾಣಿ, ಗೋವಿಂದ ನಾಯ್ಕ ಮುಂತಾದ ದಿಗ್ಗಜ ಕಲಾವಿದರ ಒಡನಾಟ ಅವರಿಗೆ ಸಿಕ್ಕಿತು. ಪರಿಣಾಮ 1998ರಲ್ಲಿ ಬೆಂಗಳೂರು ದೂರದರ್ಶನದಲ್ಲಿಯೂ ಅವರ ಯಕ್ಷಗಾನ ಪ್ರಸಾರವಾಯಿತು. ನಂತರ ಕಾರವಾರ, ಧಾರವಾಡ ಆಕಾಶವಾಣಿಗಳಲ್ಲಿಯೂ ಅವರು ಕಾರ್ಯಕ್ರಮ ನೀಡಿದ್ದಾರೆ. ರಾಮನಾಥ ಪ್ರಸಾದಿತ ಯಕ್ಷಗಾನ ಮಂಡಳಿಯಲ್ಲಿ 5 ವರ್ಷ ಭಾಗವತರಾಗಿ ಸೇವೆ ಸಲ್ಲಿಸಿದ್ದಾರೆ.

Advertisement. Scroll to continue reading.

ಸಾಹಿತ್ಯದಲ್ಲೂ ಛಾಪು ಮೂಡಿಸಿರುವ ಗಾಂವಕರರು, 2011ರ ಜನವರಿಯಲ್ಲಿ ಯಕ್ಷಗಾನದ ಕುರಿತಾದ `ಯಕ್ಷ ದೀವಿಗೆ’ ಎಂಬ ಕೃತಿ ಹೊರತಂದಿದ್ದಾರೆ. 2013ರಲ್ಲಿ ಐತಿಹಾಸಿಕ ಕಥಾ ಹಂದರವುಳ್ಳ `ಚಾಲುಕ್ಯ ವರ್ಧನ’ ಪ್ರಸಂಗ ಬಿಡುಗಡೆ ಮಾಡಿದ್ದಾರೆ. ಧಾರವಾಡ, ಬೆಳಗಾವಿ, ಉಡುಪಿ ಹಾಗೂ ಉತ್ತರಕನ್ನಡದ ಹಲವು ಕಡೆ ಈ ಪ್ರಸಂಗ ಯಕ್ಷಗಾನ ಹಾಗೂ ತಾಳಮದ್ದಲೆಯಾಗಿ ಪ್ರದರ್ಶನ ಕಂಡಿದೆ. ಜಿಲ್ಲೆಯ ಹಲವು ಪ್ರಾಥಮಿಕ, ಪ್ರೌಢಶಾಲೆ, ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಯಕ್ಷಗಾನ ತರಬೇತಿಯನ್ನು ಅವರು ನೀಡಿದ್ದಾರೆ. ಸದ್ಯ ವೃತ್ತಿಯಿಂದ ನಿವೃತ್ತರಾಗಿದ್ದರೂ ಪ್ರವೃತ್ತಿಯಿಂದ ಅವರು ನಿವೃತ್ತರಾಗಿಲ್ಲ.

Advertisement. Scroll to continue reading.

– ಕರ್ನಾಟಕ ಕಲಾ ಸನ್ನಿಧಿ

Previous Post

ಕೊನೆಗೂ ಬದುಕದ ಕಾಡುಪ್ರಾಣಿ: ಕಡವೆ ಸಾವಿಗೆ ಕಾರಣ ಯಾರು?

Next Post

ಸಪ್ತಪದಿ ಸಡಗರಕ್ಕೂ ಮುನ್ನ ಕಲಾ ಸಂಗಮ: ಯಕ್ಷಗಾನ-ಭರತನಾಟ್ಯದ ಸಮಾಗಮ!

Next Post
Yakshagana - Pre wedding video shooting by Bharatanatyam

ಸಪ್ತಪದಿ ಸಡಗರಕ್ಕೂ ಮುನ್ನ ಕಲಾ ಸಂಗಮ: ಯಕ್ಷಗಾನ-ಭರತನಾಟ್ಯದ ಸಮಾಗಮ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ