6
  • Latest

ಈ ಕಚೇರಿ ಇದ್ದೂ ಪ್ರಯೋಜನವಿಲ್ಲ: 7.25 ಲಕ್ಷ ರೂ ಪಡೆದರೂ ಕೆಲಸ ಮಾಡುವವರಿಲ್ಲ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Wednesday, February 11, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜ್ಯ

ಈ ಕಚೇರಿ ಇದ್ದೂ ಪ್ರಯೋಜನವಿಲ್ಲ: 7.25 ಲಕ್ಷ ರೂ ಪಡೆದರೂ ಕೆಲಸ ಮಾಡುವವರಿಲ್ಲ!

AchyutKumar by AchyutKumar
October 25, 2024
in ರಾಜ್ಯ
advt advt advt
ADVERTISEMENT

ಕಾರವಾರ: ಹಿರಿಯ ನಾಗರಿಕರ ಸಮಸ್ಯೆ ಆಲಿಸಿ ನೆರವು ನೀಡಲು ಸರ್ಕಾರ ಸಹಾಯವಾಣಿ ಜೊತೆ ಕಚೇರಿಯನ್ನು ತೆರೆದಿದೆ. ಆದರೆ, ಸಹಾಯವಾಣಿ ಕೆಲಸ ಮಾಡುತ್ತಿಲ್ಲ. ಕಚೇರಿಯಲ್ಲಿ ಅಗತ್ಯ ಸಿಬ್ಬಂದಿ ಇಲ್ಲ!

ಉತ್ತರ ಕನ್ನಡದ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿ ಒಳಭಾಗದಲ್ಲಿ ಈ ಸಹಾಯವಾಣಿ ಕೇಂದ್ರವಿದೆ. ಹುಬ್ಬಳ್ಳಿಯ ವೀರಭದ್ರೇಶ್ವರ ಚ್ಯಾರಿಟೇಬಲ್ ಟ್ರಸ್ಟ್’ಗೆ ಈ ಸಹಾಯವಾಣಿ ನಡೆಸಲು ಸರ್ಕಾರ ವಾರ್ಷಿಕ 7.25 ಲಕ್ಷ ರೂ ನೆರವು ನೀಡುತ್ತದೆ. ವೃದ್ಧರು 1090ಗೆ ಕರೆ ಮಾಡಿದರೆ ಅಂಥವರಿಗೆ ನೆರವಾಗಬೇಕು ಎಂಬುದು ಸರ್ಕಾರದ ನಿಯಮ. ವೃದ್ಧರಿಗೆ ನೆರವು ನೀಡಬೇಕಾಗಿರುವುದು ಅನುದಾನ ಪಡೆಯುತ್ತಿರುವ ವೀರಭದ್ರೇಶ್ವರ ಚ್ಯಾರಿಟೇಬಲ್ ಟ್ರಸ್ಟಿನ ಕರ್ತವ್ಯ. ಆದರೆ, ಈ ಸಹಾಯವಾಣಿಯ ಬಗ್ಗೆ ಬಹುತೇಕರಿಗೆ ಗೊತ್ತಿಲ್ಲ. ಸರ್ಕಾರ ನೀಡಿದ 1090ಗೆ ಕರೆ ಮಾಡಿದರೂ ಉತ್ತರಿಸುವವರಿಲ್ಲ. ಉಳಿದಂತೆ ಇನ್ನೂ ಎರಡು ಖಾಸಗಿ ಫೋನ್ ನಂ ನೀಡಲಾಗಿದ್ದು, ಅದಕ್ಕೆ ಕರೆ ಮಾಡಿದರೂ ಸ್ವೀಕರಿಸುವುದಿಲ್ಲ!

ADVERTISEMENT
ADVERTISEMENT

ಸಹಾಯವಾಣಿ ನಡೆಸುವುದಾಗಿ ತಿಳಿಸಿ ಅನುದಾನ ಪಡೆಯುತ್ತಿರುವ ಸಂಸ್ಥೆ ಸಹಾಯವಾಣಿ ಕೇಂದ್ರದ ಬಗ್ಗೆ ಜನ ಜಾಗೃತಿ ನಡೆಸಿಲ್ಲ. ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿಯೇ ಕೊಠಡಿ ನೀಡಿದರೂ ಅದಕ್ಕೆ ಯೋಗ್ಯ ನಾಮಫಲಕ ಅಳವಡಿಸಿಲ್ಲ. ಆ ಕಚೇರಿಗೆ ಅಗತ್ಯವಿರುವ ಸಿಬ್ಬಂದಿ ನೇಮಕಾತಿಯನ್ನು ಸಹ ನಡೆಸಿಲ್ಲ. `ನ್ಯಾಯವಾದಿ, ರಕ್ಷಣಾ ಸಿಬ್ಬಂದಿ ಹಾಗೂ ಪೊಲೀಸರ ಸಹಕಾರದಲ್ಲಿ ನಮ್ಮ ತಂಡ ಕೆಲಸ ಮಾಡುತ್ತಿದೆ’ ಎಂದು ಸಂಸ್ಥೆ ದಾಖಲೆಗಳಲ್ಲಿ ಹೇಳಿಕೊಂಡಿದ್ದರೂ, ಹಿರಿಯ ನಾಗರಿಕರ ಕ್ಷೇಮ ವಿಚಾರಿಸುವ ಆಪ್ತ ಸಮಾಲೋಚಕರು ಸಹ ಇಲ್ಲಿಲ್ಲ!

Advertisement. Scroll to continue reading.

ಮೊದಲು ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಹೊರಭಾಗದಲ್ಲಿ ಈ ಸಹಾಯವಾಣಿ ಕೇಂದ್ರವಿತ್ತು. ನಂತರ ಕಳೆದ ಒಂದು ವರ್ಷಗಳಿಗೂ ಅಧಿಕ ಕಾಲ ಈ ಸಹಾಯವಾಣಿ ಕೇಂದ್ರ ಬಂದ್ ಆಗಿತ್ತು. ಕಳೆದ ಅಕ್ಟೊಬರ್ 2ರಂದು ಸಹಾಯವಾಣಿಯನ್ನು ಪುನ: ಶುರು ಮಾಡಲಾಗಿದೆ. ಆದರೆ, ಕನಿಷ್ಟ ಮೂಲಭೂತ ಸೌಕರ್ಯದ ವ್ಯವಸ್ಥೆಯನ್ನು ಸಹ ಸಂಸ್ಥೆ ಮಾಡಿಕೊಂಡಿಲ್ಲ.

Advertisement. Scroll to continue reading.

ಕೌಟುAಬಿಕ ವ್ಯಾಜ್ಯ ಸೇರಿ ಉತ್ತರ ಕನ್ನಡ ಜಿಲ್ಲೆಯಲ್ಲಿ ವಾಸಿಸುವ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಸ್ಪಂದಿಸುವ ಸಹಾಯವಾಣಿ ಕೇಂದ್ರ ಇದಾಗಬೇಕಿತ್ತು. ಆದರೆ, ಸಹಾಯವಾಣಿ ಕೇಂದ್ರವೇ ಸರಿಯಿಲ್ಲದ ಕಾರಣ ಜನರಿಂದ ಯಾವುದೇ ದೂರು ಬರುತ್ತಿಲ್ಲ. ದಿನದ 24 ತಾಸು ಈ ಕೇಂದ್ರ ತೆರದಿರಬೇಕು ಎಂಬ ನಿಯಮವಿದ್ದರೂ ಅದು ಪಾಲನೆ ಆಗುತ್ತಿಲ್ಲ. ಕಚೇರಿಗೆ ಹಿರಿಯ ನಾಗರಿಕರು ಭೇಟಿ ನೀಡಿದರೆ ಅವರನ್ನು ಮಾತನಾಡಿಸುವವರು ಸಹ ಇಲ್ಲಿಲ್ಲ!

`ಮೂರು ಇಲಾಖೆಗಳ ಸಮನ್ವಯದಿಂದ ಹಿರಿಯ ನಾಗರಿಕರ ಸಹಾಯವಾಣಿ ನಡೆಯುತ್ತಿದೆ. ಆದರೂ ಹಿರಿಯ ನಾಗರಿಕರ ಸಮಸ್ಯೆ ಆಲಿಸುವವರಿಲ್ಲ. ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿನ ಕೊಠಡಿಯಲ್ಲಿ ಈ ಬಗ್ಗೆ ಸಮಸ್ಯೆಯಿರುವ ಬಗ್ಗೆ ಪೊಲೀಸ್ ಅಧೀಕ್ಷಕರಿಗೆ ಮಾಹಿತಿ ನೀಡಿದ್ದು, ಅವರು ವಿಚಾರಿಸುವ ಭರವಸೆ ನೀಡಿದ್ದಾರೆ’ ಎಂದು ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡ್ರಿಗ್ಸ್ ಹೇಳಿದರು. `ಹಿರಿಯ ನಾಗರಿಕರ ಇಲಾಖೆಗೆ ಖಾಯಂ ಅಧಿಕಾರಿ ಇಲ್ಲದಿರುವುದು ಈ ಎಲ್ಲಾ ಸಮಸ್ಯೆಗಳಿಗೆ ಕಾರಣ’ ಎಂದವರು ವಿವರಿಸಿದರು.

ShareSendTweetShare
ADVERTISEMENT
Previous Post

ಸಪ್ತಪದಿ ಸಡಗರಕ್ಕೂ ಮುನ್ನ ಕಲಾ ಸಂಗಮ: ಯಕ್ಷಗಾನ-ಭರತನಾಟ್ಯದ ಸಮಾಗಮ!

Next Post

ಊರಲ್ಲಿ ಯಾರೂ ಸತ್ತರೂ ಈ ಶಾಲೆಗೆ ರಜೆ!

Next Post

ಊರಲ್ಲಿ ಯಾರೂ ಸತ್ತರೂ ಈ ಶಾಲೆಗೆ ರಜೆ!

ಮದುವೆ ಮನೆಯಲ್ಲಿ ಮನಸ್ತಾಪ: ಹಳೆ ದ್ವೇಷ.. ಹೊಸ ಹೊಡೆದಾಟ!

ಸ್ನಾನಕ್ಕೆ ಹೋದವ ಶವವಾದ: ಬಾತ್ ರೂಂ'ನಲ್ಲಿ ಬಿದ್ದು ಯುವಕ ಸಾವು!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.