ಭಟ್ಕಳ: ಕೋಟೆಮನೆ ತಲಗೋಡಿನ ಶರತ್ ನಾಯ್ಕ ಹಾಗೂ ಅವರ ಅಕ್ಕನ ತಮ್ಮ ಗಣಪತಿ ನಾಯ್ಕ ನಡುವೆ ಹೊಡೆದಾಟ ನಡೆದಿದೆ.
ಗಣಪತಿ ಶಂಕರ್ ನಾಯ್ಕ ಎಂಬಾತರು ಶರತ ರಾಮಚಂದ್ರ ನಾಯ್ಕರ ಅಕ್ಕನನ್ನು ಮದುವೆಯಾಗಿದ್ದು, ಮದುವೆ ದಿನದಿಂದಲೂ ಭಾವ-ಬಾಮೈದರ ನಡುವೆ ಮನಸ್ತಾಪವಿತ್ತು. ಅಕ್ಟೊಬರ್ 23ರಂದು ನಡೆದ ವಿಷ್ಣು ನಾಯ್ಕ ಅವರ ಮದುವೆಯಲ್ಲಿ ಈ ಎಲ್ಲರೂ ಭಾಗವಹಿಸಿದ್ದರು. ಮದುವೆ ಮರುದಿನ ರಾತ್ರಿ ಊಟದ ವೇಳೆ ಶರತ್ ನಾಯ್ಕ ತನ್ನ ಸಹಚರರಾದ ಸುರೇಶ ನಾಗಪ್ಪ ನಾಯ್ಕ ಹಾಗೂ ಹರ್ಷ ಮಂಜುನಾಥ ನಾಯ್ಕರನ್ನು ಕರೆದುಕೊಂಡು ಬಂದು ಗಲಾಟೆ ಮಾಡಿದ್ದು, ಈ ವೇಳೆ ಹೊಡೆದಾಟ ನಡೆದಿದೆ.
ಶರತ್ ನಾಯ್ಕ ಕೈಯಲ್ಲಿ ದೊಣ್ಣೆ ಹಿಡಿದುಕೊಂಡು ಗಣಪತಿ ನಾಯ್ಕರ ಮೇಲೆ ಹಲ್ಲೆ ನಡೆಸಿದ ಆರೋಪವಿದೆ. ಭಾವನನ್ನು ಕೊಲೆ ಮಾಡುವ ಉದ್ದೇಶದಿಂದ ಆತ ಈ ಕೃತ್ಯ ಎಸಗಿರುವ ಬಗ್ಗೆ ಅಲ್ಲಿದ್ದ ರವಿ ಗೋವಿಂದ ನಾಯ್ಕ ಪೊಲೀಸರಿಗೆ ದೂರಿದ್ದಾರೆ. `ಮೂವರು ಸೇರಿ ಗಣಪತಿ ನಾಯ್ಕರ ಮೇಲೆ ಹಲ್ಲೆ ನಡೆಸಿದ್ದರಿಂದ ಗಣಪತಿ ನಾಯ್ಕರು ಗಾಯಗೊಂಡಿದ್ದಾರೆ. ಈ ವೇಳೆ ಭಾಸ್ಕರ ಹಾಗೂ ರಾಘವ ಎಂಬಾತರು ಈ ಜಗಳ ತಪ್ಪಿಸಿದರು’ ಎಂದು ದೂರುದಾರರು ವಿವರಿಸಿದ್ದಾರೆ.




