6
  • Latest

ಊರಲ್ಲಿ ಯಾರೂ ಸತ್ತರೂ ಈ ಶಾಲೆಗೆ ರಜೆ!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Thursday, July 2, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಊರಲ್ಲಿ ಯಾರೂ ಸತ್ತರೂ ಈ ಶಾಲೆಗೆ ರಜೆ!

AchyutKumar by AchyutKumar
in ಸ್ಥಳೀಯ

ಯಲ್ಲಾಪುರ: ಗಣ್ಯರು ಸಾವನಪ್ಪಿದಾಗ ಶಾಲೆಗೆ ರಜೆ ಕೊಡುವುದು ಸಾಮಾನ್ಯ. ಆದರೆ, ಯಲ್ಲಾಪುರದ ತೊಟ್ಟಿಲಗುಂಡಿಯಲ್ಲಿ ಊರಿನಲ್ಲಿ ಯಾರೇ ಸಾವನಪ್ಪಿದರೂ ಶಾಲೆಗೆ ರಜೆ ಕೊಡಲಾಗುತ್ತದೆ. ಶಾಲೆಗೆ ರಜೆ ಕೊಡದೇ ಇದ್ದರೂ ಆ ದಿನ ಮಕ್ಕಳು ಕಲಿಕೆಗೆ ಬರುವುದಿಲ್ಲ!

ಹುಬ್ಬಳ್ಳಿ – ಅಂಕೋಲಾ ರಸ್ತೆಯಲ್ಲಿ ಸಿಗುವ ಕಿರವತ್ತಿಯಿಂದ ಹಿಂದೆ ಬಲಕ್ಕೆ ತಿರುಗಿದರೆ ಅಲ್ಲಿ ತೊಟ್ಟಿಲಗುಂಡಿ ಶಾಲೆ ಸಿಗುತ್ತದೆ. ಬುಡಕಟ್ಟು ಪರಂಪರೆ ಹೊಂದಿದ ಕ್ರೆಸ್ತ ಸಿದ್ದಿ ಸಮುದಾಯದ ಮಕ್ಕಳು ಈ ಶಾಲೆಗೆ ಬರುತ್ತಾರೆ. ಪ್ರಸ್ತುತ 10 ಮಕ್ಕಳು ಅಲ್ಲಿ ಕಲಿಯುತ್ತಿದ್ದು, ಶುಕ್ರವಾರ ಊರಿನಲ್ಲಿ ವೃದ್ಧೆಯೊಬ್ಬರು ಸಾವನಪ್ಪಿದ ಕಾರಣ ಶಾಲೆಗೆ ರಜೆ ಘೋಷಿಸಲಾಗಿತು. `ಊರಿನಲ್ಲಿ ಸಾವುಗಳಾದಾಗ ಶಾಲೆಗೆ ರಜೆ ನೀಡುವುದು ಪದ್ಧತಿ’ ಎಂದು ಊರಿನವರು ತಿಳಿಸಿದರು.

`ಸಂಪ್ರದಾಯದ ಪ್ರಕಾರ ಸಾವನಪ್ಪಿದವರ ಮನೆಯಲ್ಲಿ ಶೋಕ ಆಚರಣೆ ನಡೆಯುತ್ತದೆ. ಆ ವೇಳೆ ಊರಿನ ಎಲ್ಲರೂ ಭಾಗವಹಿಸುತ್ತಾರೆ. ಶವಕ್ಕೆ ಅಂತಿಮ ನಮನ ಸಲ್ಲಿಸುವ ಕಾರ್ಯದಲ್ಲಿ ಮಕ್ಕಳು ಭಾಗಿಯಾಗುತ್ತಾರೆ. ಹೀಗಾಗಿ ಊರಿನಲ್ಲಿ ಯಾರಾದರೂ ಸಾವನಪ್ಪಿದರೆ ಪಾಲಕರು ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ’ ಎಂದು ಅಲ್ಲಿದ್ದವರು ತಿಳಿಸಿದರು.

`ಶೋಕದ ಕಾರಣ ಆ ದಿನ ಯಾರೂ ಅಡುಗೆ ಮಾಡುವುದಿಲ್ಲ. ಹೀಗಾಗಿ ಊಟವೂ ಇಲ್ಲ. ಇದರಿಂದ ಶಾಲೆಯಲ್ಲಿ ಸಹ ಬಿಸಿಯೂಟ ಮಾಡಲಿಲ್ಲ. `ಇಂದು ಶಾಲೆಗೆ ಮಕ್ಕಳು ಬರುವುದಿಲ್ಲ’ ಎಂದು ಊರಿನವರು ಬೆಳಗ್ಗೆಯೇ ಶಿಕ್ಷಕರಿಗೆ ಫೋನ್ ಮಾಡಿ ಹೇಳಿದ್ದರು. ಶುಕ್ರವಾರ ಸಾವನಪ್ಪಿದವರು ಶಾಲಾ ಎಸ್‌ಡಿಎಂಸಿ ಸದಸ್ಯರಾಗಿರಲಿಲ್ಲ. ಶಾಲೆಗೆ ಹಾಗೂ ಅವರಿಗೆ ಸಂಬoಧವೂ ಇರಲಿಲ್ಲ. ಅದಾಗಿಯೂ ಶಾಲೆಗೆ ರಜೆ ನೀಡಿದ್ದರಿಂದ ಶಾಲೆಯ ಬಾಗಿಲು ತೆರೆಯಲು ಯಾರೂ ಬಂದಿರಲಿಲ್ಲ.  `ತಾನು ಶಾಲೆಗೆ ಹೋಗಿ ಶಿಕ್ಷಣಾಧಿಕಾರಿಗಳಿಗೆ ತಿಳಿಸಿ ರಜೆ ಘೋಷಿಸಿ ಮರಳಿದೆ’ ಎಂದು ಶಿಕ್ಷಕ ಸಂತೋಷ ನಾಯ್ಕ ತಿಳಿಸಿದರು.

`ಶಾಲಾ ಎಸ್‌ಡಿಎಂಸಿಯವರ ಸೂಚನೆ ಮೇರೆಗೆ ಶಾಲೆಗೆ ರಜೆ ಕೊಡಲಾಗಿದೆ. ನನ್ನ ಸೇವಾ ಅವಧಿಯಲ್ಲಿ ಇಂಥ ಪ್ರಕರಣಗಳು ಅಪರೂಪ. ಸ್ಥಳೀಯ ರಜೆ ಹೊಂದಾಣಿಕೆ ಮಾಡಿಕೊಂಡು, ರಜೆ ನೀಡಲಾಗಿದೆ’ ಎಂದು ಶಿಕ್ಷಕ ಸಂತೋಷ ನಾಯ್ಕ ತಿಳಿಸಿದರು. `ಊರಿನಲ್ಲಿ ಸಾವು ಉಂಟಾದಾಗ ಶಾಲೆಗೆ ರಜೆ ನೀಡದಿದ್ದರೂ ಮಕ್ಕಳು ಬರುವುದಿಲ್ಲ. ಈ ಹಿಂದೆ ಶಾಲೆ ತೆರೆದು ಇಡೀ ದಿನ ಕಾದರೂ ಮಕ್ಕಳು ಬರದ ಉದಾಹರಣೆಗಳಿವೆ’ ಎಂದು ಸಂತೋಷ ನಾಯ್ಕ ವಿವರಿಸಿದರು.

ಶಿಕ್ಷಣಾಧಿಕಾರಿಗೆ ಗೊತ್ತೇ ಇಲ್ಲ!

`ತೊಟ್ಟಿಲಗುಂಡಿ ಶಾಲೆಗೆ ರಜೆ ಇರುವ ಬಗ್ಗೆ ನನಗೆ ಮಾಹಿತಿಯಿಲ್ಲ. ಈ ಬಗ್ಗೆ ವಿಚಾರಿಸುವೆ’ ಎಂದು ಶಿಕ್ಷಣಾಧಿಕಾರಿ ಎನ್ ಆರ್ ಹೆಗಡೆ ತಿಳಿಸಿದರು. ನಂತರ ಈ ವಿಷಯದ ಬಗ್ಗೆ ಅರಿತ ಶಿಕ್ಷಣಾಧಿಕಾರಿ ಶಾಲಾ ಮುಖ್ಯ ಶಿಕ್ಷಕರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ.

ShareSendTweetShare
Previous Post

ಈ ಕಚೇರಿ ಇದ್ದೂ ಪ್ರಯೋಜನವಿಲ್ಲ: 7.25 ಲಕ್ಷ ರೂ ಪಡೆದರೂ ಕೆಲಸ ಮಾಡುವವರಿಲ್ಲ!

Next Post

ಮದುವೆ ಮನೆಯಲ್ಲಿ ಮನಸ್ತಾಪ: ಹಳೆ ದ್ವೇಷ.. ಹೊಸ ಹೊಡೆದಾಟ!

Next Post

ಮದುವೆ ಮನೆಯಲ್ಲಿ ಮನಸ್ತಾಪ: ಹಳೆ ದ್ವೇಷ.. ಹೊಸ ಹೊಡೆದಾಟ!

ಸ್ನಾನಕ್ಕೆ ಹೋದವ ಶವವಾದ: ಬಾತ್ ರೂಂ'ನಲ್ಲಿ ಬಿದ್ದು ಯುವಕ ಸಾವು!

ತಾಯಿ ನೆನಪಿನಲ್ಲಿ ಸರಾಯಿ ಚಟ: ಕೊನೆಗೂ ಜೀವಬಿಟ್ಟ ಮಗ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.