ಕುಮಟಾ: ತಾಯಿ ಮರಣದ ಶೋಕದಲ್ಲಿ ಸರಾಯಿ ಕುಡಿಯಲು ಶುರು ಮಾಡಿದ ಗಣೇಶ ಗೌಡ ಎಂಬಾತರು ಇದೀಗ ತಾವು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಹೊಸ್ಕೇರಿಯ ಗಣೇಶ ಮಹಾದೇವ ಗೌಡ ಕೂಲಿ ಕೆಲಸ ಮಾಡಿಕೊಂಡಿದ್ದರು. ಆರು ತಿಂಗಳ ಹಿಂದೆ ಅವರ ತಾಯಿ ಸಾವನಪ್ಪಿದ್ದರು. ಇದೇ ನೋವಿನಲ್ಲಿದ್ದ ಅವರು ವಿಪರೀತ ಸರಾಯಿ ಕುಡಿಯಲು ಶುರು ಮಾಡಿದ್ದರು.
ಅಕ್ಟೊಬರ್ 20ರಂದು ಮನೆ ಒಳಗೆ ಹೋದ ಅವರು ಹೊರಗೆ ಬಂದಿರಲಿಲ್ಲ. ಅಕ್ಟೊಬರ್ 24ರಂದು ಪರಿಶೀಲಿಸಿದಾಗ ಮನೆಯ ಕಿಟಕಿಗೆ ಲುಂಗಿಯಿAದ ನೇಣು ಹಾಕಿಕೊಂಡು ಅವರು ಸಾವನಪ್ಪಿದ್ದಾರೆ.




