6
  • Latest

ಹೊರಗಡೆಯಿಂದ ಹೊಂಡ.. ಒಳ ಹೊಕ್ಕಿದರೆ ದೊಡ್ಡ ಗುಹೆ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Wednesday, February 11, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಹೊರಗಡೆಯಿಂದ ಹೊಂಡ.. ಒಳ ಹೊಕ್ಕಿದರೆ ದೊಡ್ಡ ಗುಹೆ!

AchyutKumar by AchyutKumar
October 28, 2024
in ಸ್ಥಳೀಯ
advt advt advt
ADVERTISEMENT

ಕುಮಟಾ: ಮಾಸೂರು ಗ್ರಾಮದಲ್ಲಿ ಕುಡಿಯುವ ನೀರಿನ ಯೋಜನೆಗಾಗಿ ನೆಲ ಅಗೆಯುತ್ತಿರುವಾಗ ವಿಚಿತ್ರ ಗುಹೆಯೊಂದು ಕಾಣಿಸಿದೆ. ಹಂಡೆ ಆಕಾರದಲ್ಲಿರುವ ಈ ಗುಹೆ 15 ಜನರನ್ನು ಏಕಕಾಲಕ್ಕೆ ಅಡಗಿಸಿಕೊಳ್ಳುವಷ್ಟು ಸಾಮರ್ಥ್ಯ ಹೊಂದಿದೆ. ಈ ಗುಹೆ ಯಾವ ಕಾಲದ್ದು? ಯಾವ ಉದ್ದೇಶಕ್ಕೆ ರಚಿತವಾಗಿದ್ದು ಎಂಬುದು ಈವರೆಗೂ ಖಚಿತವಾಗಿಲ್ಲ.

ಮಾಸೂರು ಗ್ರಾಮದ ಜೈನ ಜಟಕ ದೇವಾಲಯದ ಬಳಿ ಜಲ ಜೀವನ ಮಿಶನ್ ಯೋಜನೆ ಅಡಿ ಕುಡಿಯುವ ನೀರು ಕಾಮಗಾರಿಯ ಕೆಲಸ ನಡೆಯುತ್ತಿದೆ. ನೀರಿನ ಕೊಳವೆಗಳನ್ನು ಸಾಗಿಸುವುದಕ್ಕಾಗಿ ಮಣ್ಣು ಅಗೆಯುತ್ತಿರುವಾಗ ಅಲ್ಲಿ ಕಂದಕ ಕಾಣಿಸಿದೆ. ಮಣ್ಣಿನಲ್ಲಿ ಮುಚ್ಚಿ ಹೋಗಿದ್ದ ಗುಹೆಯ ಬಾಗಿಲು ತೆರೆದಾಗ ಅಲ್ಲಿನ ಕಾರ್ಮಿಕರು ಅಚ್ಚರಿಗೆ ಒಳಗಾದರು. ಕೆಲವರು ಏಣಿ ಹಾಕಿ ಕೆಳಗೆ ಇಳಿದು ಪರಿಶೀಲನೆ ನಡೆಸಿದರು. ಆದರೆ, ಯಾವುದೇ ಮಾಹಿತಿ ಅಥವಾ ಕುರುಹುಗಳು ಗುಹೆಯ ಒಳಗೆ ಪತ್ತೆ ಆಗಿಲ್ಲ.

ADVERTISEMENT
ADVERTISEMENT

ಗುಹೆಯ ತಲೆಭಾಗದಲ್ಲಿ ಸಣ್ಣ ರಂದ್ರವಿದೆ. ಒಳ ಪ್ರವೇಶಿಸಿದಂತೆ ಆ ರಂದ್ರ ಡೊಡ್ಡವಾಗುತ್ತಿದ್ದು, 10 ಅಡಿ ಆಳ ಹಾಗೂ ಅಷ್ಟೇ ಪ್ರಮಾಣದ ಅಗಲವನ್ನು ಹೊಂದಿದೆ. ಸಂಪೂರ್ಣ ಕಲ್ಲಿನ ಶಿಲೆಗಳಿಂದ ಈ ಗುಹೆ ರಚಿತವಾಗಿದ್ದು, ಅತ್ಯಂತ ಹಳೆಯ ಕಾಲದಲ್ಲಿಯೇ ಗುಹೆಯನ್ನು ಕೆತ್ತಿರಬಹುದು ಎಂದು ಅಂದಾಜಿಸಲಾಗಿದೆ. ಪಕ್ಕದ ದೇವಾಲಯ ಹಾಗೂ ನಿರ್ಮಿಸಲಾದ ಕಪೌಂಡ್ ಅಡಿಭಾಗದಲ್ಲಿ ಈ ಗುಹೆ ವಿಸ್ತರಿಸಿಕೊಂಡಿದೆ. ಸದ್ಯ ಬದುಕಿರುವ ಹಿರಿಯ ತಲೆಮಾರಿನವರಿಗೆ ಸಹ ಗುಹೆಯ ಬಗ್ಗೆ ಯಾವುದೇ ಖಚಿತ ಮಾಹಿತಿ ಇಲ್ಲ.

Advertisement. Scroll to continue reading.
Advertisement. Scroll to continue reading.

ದೇವಾಲಯದಕ್ಕೆ ತಾಗಿಕೊಂಡು ಗುಹೆಯ ಪ್ರವೇಶ ದ್ವಾರವಿದೆ. `ರಾಜರ ಕಾಲದಲ್ಲಿ ದವಸ-ಧಾನ್ಯಗಳನ್ನು ಸಂಗ್ರಹಿಸಿಡುವ ಉದ್ದೇಶದಿಂದ ಈ ಗುಹೆ ಕೊರೆದಿರುವ ಸಾಧ್ಯತೆಯಿದೆ’ ಎಂದು ಸ್ಥಳೀಯ ಮುಖಂಡ ಮಂಜುನಾಥ ಪಟಗಾರ ಅಂದಾಜಿಸಿದರು. `ಶತ್ರು ದಾಳಿಯಿಂದ ರಕ್ಷಿಸಿಕೊಳ್ಳುವ ಉದ್ದೇಶಕ್ಕಾಗಿಯೂ ಈ ಗುಹೆ ಕೊರೆದಿರಬಹುದು’ ಎನ್ನುವ ಬಗ್ಗೆಯೂ ಚರ್ಚೆ ನಡೆಸಿದ್ದಾರೆ.

`ಇದು ಪ್ರಾಚೀನ ಕಾಲದ ಬಾವಿ. ನೀರು ಬತ್ತಿರುವ ಸಾಧ್ಯತೆಗಳಿವೆ. ಅಧ್ಯಯನದ ನಂತರ ನಿಖರವಾಗಿ ಹೇಳಲು ಸಾಧ್ಯ’ ಎಂದು ಇತಿಹಾಸ ತಜ್ಞ ಲಕ್ಷೀಶ ಹೆಗಡೆ ಸೋಂದಾ ಪ್ರತಿಕ್ರಿಯಿಸಿದರು. ಗುಹೆ ಪತ್ತೆಯಾಗಿ ಒಂದು ವಾರ ಕಳೆದರೂ ಭಾರೀ ಪ್ರಮಾಣದಲ್ಲಿ ಸುದ್ದಿಯಾಗಿಲ್ಲ. ಈ ಬಗ್ಗೆ ಪುರಾತತ್ವ ಇಲಾಖೆಯವರು ಸ್ಥಳಕ್ಕೆ ಬಂದಿಲ್ಲ. ಸಂಶೋಧನೆ ಸಹ ನಡೆದಿಲ್ಲ. ಹೀಗಾಗಿ ಆ ಗುಹೆಯ ರಹಸ್ಯ ಇನ್ನೂ ರಹಸ್ಯವಾಗಿಯೇ ಉಳಿದಿದೆ.

ShareSendTweetShare
ADVERTISEMENT
Previous Post

ಅಡಿಕೆ ಭವನದಲ್ಲಿ ಸುದರ್ಶನ ಶಿಬಿರ

Next Post

ಗುರು ನಮನ | ಶಿಕ್ಷಣದ ಜೊತೆ ಶಾಲೆಯ ಜೀರ್ಣೋದ್ಧಾರಕ್ಕೆ ಶ್ರಮಿಸಿದ ಅಪರೂಪದ ಶಿಕ್ಷಕ!

Next Post

ಗುರು ನಮನ | ಶಿಕ್ಷಣದ ಜೊತೆ ಶಾಲೆಯ ಜೀರ್ಣೋದ್ಧಾರಕ್ಕೆ ಶ್ರಮಿಸಿದ ಅಪರೂಪದ ಶಿಕ್ಷಕ!

ಮಧ್ಯರಾತ್ರಿ ಮದ್ಯದ ನಶೆ: ಚೀರೆಕಲ್ಲಿನಿಂದ ಜಜ್ಜಿ ಕಾರ್ಮಿಕನ ಕೊಲೆ

ಹಾರುಗಾರ ಬಳಿ ಬೈಕ್ ಅಪಘಾತ: ಪರೀಕ್ಷೆಗೆ ಹೊರಟ ವಿದ್ಯಾರ್ಥಿ ಸಾವು

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.