ಶಿರಸಿ: ನಿಂತಿದ್ದ ಲಾರಿಗೆ ಬೈಕ್ ಗುದ್ದಿದ ಪರಿಣಾಮ ಬೈಕ್ ಓಡಿಸುತ್ತಿದ್ದ ಮನೋಜ್ ಜಿ ಹೆಗಡೆ ಸಾವನಪ್ಪಿದ್ದಾರೆ.
ಶಿರಸಿ ತಾಲೂಕಿನ ಹಾರುಗಾರ ಬಳಿ ಈ ಅಪಘಾತ ನಡೆದಿದೆ. ಮನೋಜ ಹೆಗಡೆ ಶಿರಸಿ ಎಂ ಇ ಎಸ್ ಆರ್ ಎನ್ ಶೆಟ್ಟಿ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿಯಾಗಿದ್ದರು. ಮೊದಲ ವರ್ಷದ ಇಲೆಕ್ಟ್ರಾನಿಕ್ಸ್ ವಿಭಾಗದಲ್ಲಿ ಅವರು ಓದುತ್ತಿದ್ದರು.
ಪರೀಕ್ಷೆಗೆ ಹಾಜರಾಗಲು ಸೋಮವಾರ ಬೆಳಗ್ಗೆ ಅವರು ಮನೆಯಿಂದ ಹೊರಟಿದ್ದರು. ಪರೀಕ್ಷೆ ಮುಗಿಸಿ ಹುಬ್ಬಳ್ಳಿಗೆ ಹೋಗಿ ಹಲ್ಲು ನೋವಿಗೆ ಚಿಕಿತ್ಸೆ ಪಡೆಯುವ ಬಗ್ಗೆ ಮನೆಯಲ್ಲಿ ಹೇಳಿದ್ದರು. ಆದರೆ, ಮನೆಯಿಂದ ಹೊರಟ ಕೆಲವೇ ನಿಮಿಷದಲ್ಲಿ ಅವರ ಅಪಘಾತದಲ್ಲಿ ಸಾವನಪ್ಪಿದರು.




