ವಿಧಾನ ಸಭಾ ಉಪಚುನಾವಣೆಯ ನೀತಿ ಸಂಹಿತೆ ಕಾರಣ ಅರಣ್ಯ ಅತಿಕ್ರಮಣದಾರರ ಬೆಂಗಳೂರು ಚಲೋ ಮುಂದೂಡಲ್ಪಟ್ಟಿದೆ. ನವೆಂಬರ್ 7ಕ್ಕೆ ಬೆಂಗಳೂರು ಚಲೋ ಹೋರಾಟ ನಡೆಸುವ ಸಿದ್ಧತೆ ನಡೆದಿದ್ದು, ಅದನ್ನು ನ 21ಕ್ಕೆ ಮುಂದೂಡಲಾಗಿದೆ.
ಹೊನ್ನಾವರ ತಾಲೂಕಿನ ಮೂಡ ಗಣಪತಿ ದೇವಸ್ಥಾನದ ಸಂಭಾಗಣದಲ್ಲಿ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಈ ವಿಷಯ ತಿಳಿಸಿದರು. ಈ ಸಭೆಯಲ್ಲಿ ಅರಣ್ಯ ಕಾಯಿದೆ ಮತ್ತು ಅರಣ್ಯವಾಸಿಗಳಿಗಾಗುವ ದೌರ್ಜನ್ಯದ ಕುರಿತು ಚಿಂತನಾ ಕೂಟ ನಡೆಸಲಾಯಿತು. ಅರಣ್ಯವಾಸಿಗಳಿಗೆ ಕಾನೂನಾತ್ಮಕ ಭದ್ರತೆ ಮತ್ತು ಸಾಗುವಳಿ ರಕ್ಷಣೆ ಕುರಿತು ಸಂವಾದ ಮತ್ತು ಚರ್ಚೆ ನಡೆಯಿತು.
ಸಂಘಟನೆಯ ನಗರ ಅಧ್ಯಕ್ಷ ಸುರೇಶ ಮೇಸ್ತಾ, ಜಿಲ್ಲಾ ಸಂಚಾಲಕ ರಾಮ ಮರಾಠಿ ಎಲ್ಕೊಟಕಿ, ಸುರೇಶ ನಾಯ್ಕ ಕರ್ನಾಕೋಡ್, ಮಹೇಶ ನಾಯ್ಕ ಕಾನಕ್ಕಿ, ಗಜಾನನ ನಾಯ್ಕ ಸಾಲ್ಕೋಡ, ಆರ್.ಎಚ್. ನಾಯ್ಕ ಜನಕಡಗಲ್ ಸಭೆಯಲ್ಲಿ ಮಾತನಾಡಿದರು. ಪ್ರಮುಖರಾದ ವಿನೋದ ನಾಯ್ಕ ಎಲ್ಕೊಟಕಿ, ಗೀರಿಶ ಚಿತ್ತಾರ, ಸಚೀನ ನಾಯ್ಕ ಇದ್ದರು.




