6
  • Latest

ರಾಷ್ಟ್ರೀಯ ಹೆದ್ದಾರಿ | ಅಭಿವೃದ್ಧಿ ಜೊತೆ ಹೊಂಡ ಮುಚ್ಚುವ ಕೆಲಸದ ಬಗ್ಗೆ ಸಂಸದರು ಹೇಳಿದ್ದೇನು?

ಪಿಸ್ತೂಲ್’ ಕಥೆ ಹೇಳಲು ಹೊರಟ ಪ್ರಬಿಕ್ ಮೊಗವೀರ್!

ಪಿಸ್ತೂಲ್’ ಕಥೆ ಹೇಳಲು ಹೊರಟ ಪ್ರಬಿಕ್ ಮೊಗವೀರ್!

ಈ ಮೊದಲು ಕಂಡಿರದ ವಿಭಿನ್ನವಾದ ರೌಡಿಸಂ ಚಿತ್ರ

ಈ ಮೊದಲು ಕಂಡಿರದ ವಿಭಿನ್ನವಾದ ರೌಡಿಸಂ ಚಿತ್ರ

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ADVERTISEMENT
  • Home
Saturday, July 25, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ದೇಶ - ವಿದೇಶ

ರಾಷ್ಟ್ರೀಯ ಹೆದ್ದಾರಿ | ಅಭಿವೃದ್ಧಿ ಜೊತೆ ಹೊಂಡ ಮುಚ್ಚುವ ಕೆಲಸದ ಬಗ್ಗೆ ಸಂಸದರು ಹೇಳಿದ್ದೇನು?

AchyutKumar by AchyutKumar
in ದೇಶ - ವಿದೇಶ

`ಕುಮಟಾ-ಶಿರಸಿ ರಾಷ್ಟ್ರೀಯ ಹೆದ್ದಾರಿ ಹಾಗೂ ಭಟ್ಕಳ-ಕಾರವಾರ ಗಡಿವರೆಗಿನ ಚತುಷ್ಪಥ ಕಾಮಗಾರಿ ಪೂರ್ಣಗೊಳಿಸಲು ಆಡಳಿತಾತ್ಮಕ ಸಮಸ್ಯೆಯಿದ್ದು, ಡಿಸೆಂಬರ್ ಒಳಗೆ ಆ ಸಮಸ್ಯೆ ಬಗೆಹರಿಸಲಾಗುತ್ತದೆ’ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು. ವಿವಿಧ ಇಲಾಖೆಗಳ ಸಭೆ ನಡೆಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು `ಕರಾವಳಿಯಲ್ಲಿ 187 ಕಿ.ಮೀ ಉದ್ದದ ಚತುಷ್ಪಥ ನಿರ್ಮಿಸಲು 2014ರಲ್ಲಿ ಗುತ್ತಿಗೆ ನೀಡಲಾಯಿತು. ಈಗಾಗಲೆ 180ಕಿಮೀ ಕೆಲಸ ಮುಗಿದಿದೆ. ಇನ್ನುಳಿದ 7 ಕಿಮೀ ಕೆಲಸಕ್ಕೆ ಅಡ್ಡಿಯಾಗಿರುವ ಆಡಳಿತಾತ್ಮಕ ಸಮಸ್ಯೆ ಬಗೆಹರಿಯಲಿದೆ’ ಎಂದರು.

ಹೊ0ಡ ಮುಚ್ಚುವ ಕೆಲಸ ಶುರು
`ಅಂಕೋಲಾ-ಯಲ್ಲಾಪುರ ಹೆದ್ದಾರಿಯಲ್ಲಿ ಬಿದ್ದಿರುವ ಹೊಂಡಗಳನ್ನು ಮುಚ್ಚುವ ಕೆಲಸ ನಡೆಯುತ್ತಿದೆ. ಅಗತ್ಯವಿರುವ ಕಡೆ ಮರುಡಾಂಬರೀಕರಣ ಸಹ ನಡೆಯಲಿದೆ. ಕಾರವಾರದಿಂದ ಭಟ್ಕಳ ವರೆಗಿನ ಚತುಷ್ಪಥದಲ್ಲೂ ಹೊಂಡ ತುಂಬುವ ಕೆಲಸ ನಡೆಯುತ್ತಿದೆ. ಕುಮಟಾ ಭಾಗದ ಚತುಪ್ಪಥ ಕಾಮಗಾರಿಯನ್ನು ಟೆಂಡರ್‌ನಲ್ಲಿ ನಮೂದಿಸಿದ ರೀತಿಯಲ್ಲಿಯೇ ನಡೆಸಲು ಸೂಚನೆ ಕೊಡಲಾಗಿದೆ’ ಎಂದರು.

`ಚತುಷ್ಪಥ ನಿರ್ಮಾಣವಾದ ಅನೇಕ ಕಡೆ ಪ್ಲೆಓವರ್, ಅಂಡರ್ ಪಾಸ್ ಸೇರಿದಂತೆ ಇನ್ನು ಅನೇಕವನ್ನು ನಿರ್ಮಿಸಿ ಕೊಡುವ ಬೇಡಿಕೆ ಜನರಿಂದ ಬಂದಿದೆ. ಆದರೆ ಅವು ಈಗಾಗಲೆ ನೀಡಿರುವ ಟೆಂಡರ್‌ನಲ್ಲಿ ಇಲ್ಲ. ಈ ಬೇಡಿಕೆಗಳಿಗೆ ನನ್ನ ಸಹ ಮತವಿದೆ. ಆದರೆ, ಈಗ ಅದು ಅಸಾಧ್ಯವಾಗಿದ್ದು, ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರದ ಮೂಲಕ ಅದನ್ನು ಮಾಡಿಸಲಾಗುತ್ತದೆ’ ಎಂಬ ಭರವಸೆ ನೀಡಿದರು. `ಕುಮಟಾದಲ್ಲಿ ಬೈಪಾಸ್ ನಿರ್ಮಿಸುವ ಪ್ರಸ್ತಾಪವಿದೆ. ಪರ-ವಿರೋಧ ಎರಡೂ ಇದ್ದಿದ್ದರಿಂದ ಈ ಬಗ್ಗೆ ಇನ್ನಷ್ಟು ಚರ್ಚೆ ಅಗತ್ಯ’ ಎಂದರು.

`ಕುಮಟಾ-ಶಿರಸಿ ರಾ.ಹೆದ್ದಾರಿ ಕಾಮಗಾರಿಗೆ ಸಂಬoಧಿಸಿದ ಪರಿಹಾರ ಕೊಡಬೇಕಾದ 87 ಜನರಲ್ಲಿ 77 ಜನರಿಗೆ ಪರಹಾರ ವಿತರಿಸಲಾಗಿದೆ. 10 ಜನರು ವಿಳಾಸದಲ್ಲಿ ಇಲ್ಲದ ಕಾರಣ ಅವರ ಹುಡುಕಾಟ ನಡೆದಿದೆ. ಈ ಕಾಮಗಾರಿಗಾಗಿ ರಸ್ತೆ ಸಂಪೂರ್ಣ ಬಂದ್ ಮಾಡುವುದು ಅನಿವಾರ್ಯ’ ಎಂದು ಹೇಳಿದರು. `ಮುಂದಿನ ಮಳೆಗಾಲದ ಒಳಗೆ ಕುಮಟಾ-ಶಿರಸಿ ರಾ.ಹೆದ್ದಾರಿ ಹಾಗು ಭಟ್ಕಳ-ಕಾರವಾರ ಗಡಿವರೆಗಿನ ಚತುಷ್ಪಥ ಕಾಮಗಾರಿ ಮುಗಿಸಲು ನಿರ್ಧರಿಸಲಾಗಿದೆ’ ಎಂದು ತಿಳಿಸಿದರು.

ShareSendTweetShare
Previous Post

ಸೊಸೈಟಿ ನೌಕರನ ಮೇಲೆ  ಸ್ಕ್ರೂ ಡ್ರೈವರ್ ದಾಳಿ

Next Post

ಯಲ್ಲಾಪುರ | ನೊಂದಣಿ ಕಾರ್ಯ ಸಂಪೂರ್ಣ ಸ್ಥಗಿತ: ಕೋಟಿ ಕಾಸಿದ್ದರೂ 30 ಸಾವಿರ ಕೊಡಲಿಲ್ಲ!

Next Post

ಯಲ್ಲಾಪುರ | ನೊಂದಣಿ ಕಾರ್ಯ ಸಂಪೂರ್ಣ ಸ್ಥಗಿತ: ಕೋಟಿ ಕಾಸಿದ್ದರೂ 30 ಸಾವಿರ ಕೊಡಲಿಲ್ಲ!

ಖಾಲಿ ಖುರ್ಚಿ ಮುಂದೆ ಗ್ಯಾರಂಟಿ ಅಧ್ಯಕ್ಷರ ಭಾಷಣ!

ದ್ವೇಷಕ್ಕೆ ದ್ವೇಷ.. ದೂರಿಗೆ ದೂರು: ಐದು ರಸ್ತೆ ಬಳಿ ಐವರ ಹೊಡೆದಾಟ ವಿಡಿಯೋ ವೈರಲ್!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.