ಮುoಡಗೋಡು: ಹೊಲದ ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದ ದ್ಯಾಮಣ್ಣ ನಾಗಪ್ಪ ಬೆಂಡಿಗೇರಿ ಎಂಬಾತರ ಮೇಲೆ ಕರಡಿ ದಾಳಿ ನಡೆಸಿದೆ.
ಅಂದಲಗಿ ಗ್ರಾಮದ ದ್ಯಾಮಣ್ಣ ಕರಡಿ ದಾಳಿಗೆ ನಲುಗಿದ್ದಾರೆ. ಅವರ ಕೈ-ಕಾಲುಗಳಿಗೆ ಕಚ್ಚಿದ ಕರಡಿ ಮೈ ಮೇಲೆ ಪೂರ್ತಿಯಾಗಿ ಪರಚಿದೆ. ದ್ಯಾಮಣ್ಣ ಬೊಬ್ಬೆ ಹೊಡೆದಾಗ ಕರಡಿ ಕಾಡಿನ ಕಡೆ ಓಡಿದೆ. ಸ್ಥಳೀಯರು ದ್ಯಾಮಣ್ಣರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಯಲ್ಲಾಪುರ ಅರಣ್ಯ ವಿಭಾಗ ವ್ಯಾಪ್ತಿಯಲ್ಲಿ ಈಚೆಗೆ ಕರಡಿ ದಾಳಿ ಪ್ರಕರಣ ಹೆಚ್ಚಾಗಿದೆ.





