ಯಲ್ಲಾಪುರ: ಶಿರಸಿಯ ಮಾರಿಕಾಂಬಾ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಮಂಚಿಕೇರಿ ಶ್ರೀ ರಾಜರಾಜೇಶ್ವರಿ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿದ್ದಾರೆ.
100ಮೀ ಓಟದಲ್ಲಿ ದರ್ಶನ ಬಿಲ್ಲವ್ ಪ್ರಥಮ ಸ್ಥಾನ ಪಡೆದಿದ್ದು ನಂತರ 200ಮೀ ಹಾಗೂ 400ಮೀ ಓಟದಲ್ಲಿ ಸಹ ಅವರು ಮೊದಲಿಗರಾದರು. ಆ ಮೂಲಕ ಜಿಲ್ಲಾಮಟ್ಟದ ವೀರಾಗ್ರಣಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡು ರಾಜ್ಯಮಟ್ಟದ ಕ್ರೀಡೆಗೆ ಅರ್ಹತೆ ಪಡೆದರು.
ನಾದಶ್ರೀ ರಾಮಚಂದ್ರ ಭಟ್ಟ ಎತ್ತರ ಜಿಗಿತ ಹಾಗೂ ಅಡೆತಡೆ ಓಟದಲ್ಲಿ ಪ್ರಥಮ ಸ್ಥಾನ ಪಡೆದರು. ಪೋಲ್ವಾಲ್ಟ ಸ್ಪರ್ಧೆಯಲ್ಲಿ ಭಾಗವಹಿಸಿದ ಯಾಸಿನ ಅಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾದರು. 200 ಮೀ ಓಟದಲ್ಲಿ ಭಾಗವಹಿಸಿದ್ದ ಆಶಾ ಬಿ ಸೈಯದ್ 200ಮೀ ಓಟದಲ್ಲಿ ದ್ವಿತೀಯ ಬಹುಮಾನ ಪಡೆದರು.
ಈ ಎಲ್ಲಾ ವಿದ್ಯಾರ್ಥಿಗಳಿಗೆ ಸದಾನಂದ ನಾಯ್ಕ ತರಬೇತಿ ನೀಡಿದ್ದರು. ಸಾಧಕ ಮಕ್ಕಳನ್ನು ಭೇಟಿ ಮಾಡಿದ ಶಾಲಾ ಆಡಳಿತ ಮಂಡಳಿಯವರು ಅವರ ಸಾಧನೆ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಎಲ್ಲಾ ಶಿಕ್ಷಕರು ಸಾಧಕರಿಗೆ ಶುಭ ಹಾರೈಸಿದರು.





