ಹೊನ್ನಾವರ: ಸರ್ಕಾರಕ್ಕೆ ವಂಚಿಸಿ ಮರಳು ಸಾಗಾಟ ಮಾಡುತ್ತಿದ್ದ ಲಾರಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪೊಲೀಸರನ್ನು ನೋಡಿದ ಲಾರಿ ಚಾಲಕ ಹಾಗೂ ಮಾಲಕ ಲಾರಿ ಬಿಟ್ಟು ಪರಾರಿಯಾಗಿದ್ದಾರೆ.
ಅಕ್ಟೊಬರ್ 29ರ ರಾತ್ರಿ 12.20ಕ್ಕೆ ಶರಾವತಿ ನದಿಯಿಂದ ಅಕ್ರಮವಾಗಿ ಮರಳು ಸಾಗಾಟ ನಡೆಯುತ್ತಿತ್ತು. ಸರ್ಕಾರಕ್ಕೆ ರಾಜಧನ ಪಾವತಿಸದೇ ಸಾಗಾಟವಾಗುತ್ತಿರುವ ಬಗ್ಗೆ ಪೊಲೀಸರು ಮಾಹಿತಿ ಪಡೆದಿದ್ದು, ನೀಲಕೋಡು ಕ್ರಾಸಿನ ಬಳಿ ಲಾರಿಗೆ ಅಡ್ಡಲಾಗಿ ಕೈ ಮಾಡಿದರು.
ಈ ವೇಳೆ ಲಾರಿಯಲ್ಲಿ 9 ಸಾವಿರ ರೂ ಮೌಲ್ಯದ 3 ಬರಾಸ್ ಮರಳಿದ್ದು, ಲಾರಿ ಬಿಟ್ಟು ಅದರ ಚಾಲಕ ಹಾಗೂ ಮಾಲಕ ಪರಾರಿಯಾದರು. ಸರ್ಕಾರದ ಮರಳು ನೀತಿ ಉಲ್ಲಂಘಿಸಿ ಕಾನೂನುಬಾಹಿರ ಕೃತ್ಯ ಎಸಗಿದ ಕಾರಣ ಲಾರಿ ಚಾಲಕ ಹಾಗೂ ಮಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡರು. ಲಾರಿ ಜೊತೆ ಮರಳನ್ನು ವಶಕ್ಕೆ ಪಡೆದರು.





