ಮುoಡಗೋಡ: ಪಾಳಾದ ಸಂತೋಷ ಮಲ್ಲೂರು (36) ಕಾಣೆಯಾಗಿದ್ದಾರೆ.
ಕೂಲಿ ಕೆಲಸ ಮಾಡುತ್ತಿದ್ದ ಸಂತೋಷ ಶೇಕಪ್ಪ ಮಲ್ಲೂರು ಸಪ್ಟೆಂಬರ್ 9ರಂದು ಬೆಂಗಳೂರಿಗೆ ಹೋಗುವುದಾಗಿ ಹೇಳಿದ್ದರು. ಅಂದು ಸಂಜೆ 6 ಗಂಟೆಗೆ ಮನೆಯಿಂದ ಹೊರಟಿದ್ದರು. ಬೆಂಗಳೂರಿನಲ್ಲಿ ಕೂಲಿ ಕೆಲಸ ಇರುವುದಾಗಿ ಸಹ ಹೇಳಿಕೊಂಡಿದ್ದರು.
ಆದರೆ, ಅವರು ಬೆಂಗಳೂರಿನಲ್ಲಿ ಎಲ್ಲಿಯೂ ಸಿಕ್ಕಿಲ್ಲ. ನಂತರ ಫೋನ್ ಸಂಪರ್ಕ ಸಹ ಸಾಧ್ಯವಾಗಿಲ್ಲ. ಸಂಬoಧಿಕರ ಮನೆಯಲ್ಲಿ ವಿಚಾರಿಸಿದರೂ ಅವರ ಸುಳಿವಿಲ್ಲ. ಒಂದುವರೆ ತಿಂಗಳ ಕಾಲ ಅವರನ್ನು ಹುಡುಕದ ಜಾಗವಿಲ್ಲ. ಈವರೆಗೂ ಸಂತೋಷ ಅವರ ಬಗ್ಗೆ ಯಾವುದೇ ಮಾಹಿತಿ ಸಿಗದ ಕಾರಣ ಇದೀಗ ಅವರ ಪತ್ನಿ ಆಶಾ ಮಲ್ಲೂರು ಪೊಲೀಸ್ ದೂರು ನೀಡಿದ್ದಾರೆ. `ತನ್ನ ಗಂಡನನ್ನು ಹುಡುಕಿಕೊಡಿ’ ಎಂದವರು ಮನವಿ ಮಾಡಿದ್ದಾರೆ.




