ಕಾರವಾರ: ಕನ್ನಡ ರಾಜ್ಯೋತ್ಸವ ಹಾಗೂ ದೀಪಾವಳಿ ಹಿನ್ನಲೆ ಶಾಲಾ ಮಕ್ಕಳಿಗೆ ಮಣ್ಣಿನ ದೀಪಗಳನ್ನು ವಿತರಿಸುವ ಮೂಲಕ ನಗೆ ಶಾಲೆಯ ಮುಖ್ಯ ಶಿಕ್ಷಕ ಅಖ್ತರ ಸೈಯದ್ ಹಬ್ಬ ಆಚರಿಸಿದರು.
ಕನ್ನಡ ರಾಜ್ಯೋತ್ಸವದ ಅಂಗವಾಗಿ ಮಕ್ಕಳು ಕನ್ನಡ ಧ್ವಜ ಹಾಗೂ ಕನ್ನಡ ಶಾಲುಧರಿಸಿ ಶಾಲೆಗೆ ಬಂದಿದ್ದರು. ಅವರನ್ನು ಶಾಲಾ ಶಿಕ್ಷಕರು ಬರಮಾಡಿಕೊಂಡು ಕನ್ನಡ ಭಾಷೆಯ ಮಹತ್ವದ ಬಗ್ಗೆ ತಿಳಿಸಿದರು. ಧ್ವಜಾರೋಹಣದಲ್ಲಿ ಚಿಣ್ಣರು ಭಾಗಿಯಾದರು. ಈ ವೇಳೆ ಮುಖ್ಯ ಶಿಕ್ಷಕ ಎಲ್ಲಾ ಮಕ್ಕಳಿಗೂ ಮಣ್ಣಿನ ಹಣತೆ ಹಾಗೂ ತುಳಸಿ ಹಣತೆ ದೀಪಗಳನ್ನು ನೀಡಿದರು. ಎನ್ಪಿಸಿಐಎಲ್ ಕೈಗಾದವರು ಮಕ್ಕಳಿಗೆ ಶಾಲಾ ಬ್ಯಾಗ್ ವಿತರಿಸಿದರು. ಸಂತಸಗೊoಡ ಮಕ್ಕಳು ಛದ್ಮವೇಶ, ನೃತ್ಯ ಪ್ರದರ್ಶನ ಮಾಡಿದರು.
ಸಹ ಶಿಕ್ಷಕಿ ರೂಪಾ ಉಮೇಶ ನಾಯ್ಕ ನಿರ್ವಹಿಸಿದರು. ಕೈಗಾ ಯೋಜನೆಯ ಶಿಕ್ಷಕಿ ಪ್ರಿಯಾ ಲಾಂಜೇಕರ, ಕಂಪ್ಯೂಟರ್ ಶಿಕ್ಷಕಿ ಲಕ್ಷ್ಮೀ ಗೌಡ ಹಾಜರಿದ್ದರು. ಸಭೆ ನಂತರ ಮಕ್ಕಳಿಂದ ಮೆರವಣಿಗೆ ನಡೆಯಿತು.




