ಕಾರವಾರ: ದೀಪಾವಳಿ ಹಬ್ಬದ ಪ್ರಯುಕ್ತ ಸರಕಾರಿ ಬಾಲ ಮಂದಿರದ ಬಾಲಕಿಯರಿಗೆ ಜಿಲ್ಲಾ ಉಸ್ತುವಾರಿ ಸಚಿವರ ಮಂಕಾಳ ವೈದ್ಯ ಹೊಸ ಬಟ್ಟೆ ವಿತರಿಸಿದರು. ಜೊತೆಗೆ ಸಿಹಿ ತಿಂಡಿಗಳನ್ನು ಹಂಚಿ ಹಬ್ಬದ ಶುಭಾಶಯ ಕೋರಿದರು.
ನಂತರ ಮಕ್ಕಳೊಂದಿಗೆ ಸಂವಾದ ನಡೆಸಿದ ಸಚಿವರು `ಉತ್ತಮ ರೀತಿಯಲ್ಲಿ ವಿದ್ಯಾಭ್ಯಾಸ ಮಾಡಿ, ಉನ್ನತ ಸಾಧನೆಗಳನ್ನು ಮಾಡಿ’ ಎಂದು ಕರೆ ನೀಡಿದರು. ಅಲ್ಲಿದ್ದ ಮಕ್ಕಳು ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಬಯಕೆ ವ್ಯಕ್ತಪಡಿಸಿದ್ದು, `ಪ್ರವಾಸಕ್ಕೆ ಅನುಮತಿ ನೀಡಿ’ ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು. ಜೊತೆಗೆ ಮಕ್ಕಳ ಪ್ರವಾಸದ ವೆಚ್ಚ ತಾವೇ ಪಾವತಿಸುವುದಾಗಿ ಘೋಷಿಸಿದರು.




