ಯಲ್ಲಾಪುರ: ಕೇರಳದಿಂದ ಮಂಗಳೂರು ಮಾರ್ಗವಾಗಿ ಹುಬ್ಬಳ್ಳಿ ಕಡೆ ಹೊರಟಿದ್ದ ಲಾರಿ ಯಲ್ಲಾಪುರದ ಆರತಿಬೈಲ್ ಘಟ್ಟದಲ್ಲಿ ಪಲ್ಟಿಯಾಗಿದೆ.
ಅ 31ರ ಸಂಜೆ ಆರತಿಬೈಲ್ ಬಳಿ ಲಾರಿ ತಲುಪಿದಾಗ ಚಾಲಕ ವಾಹನದ ವೇಗ ಹೆಚ್ಚಿಸಿದ್ದು, ಲಾರಿ ಮೇಲಿನ ನಿಯಂತ್ರಣ ತಪ್ಪಿತು. ಘಟ್ಟದ ತಿರುವಿನಲ್ಲಿ ಲಾರಿ ಅಪಘಾತವಾಯಿತು. ಲಾರಿ ಪಲ್ಟಿಯಾಗಿದ್ದರಿಂದ ಚಾಲಕ ಬೆಳಗಾವಿಯ ಜಗದೀಶ ಪಾಟೀಲ ಹಾಗೂ ಕ್ಲಿನರ್ ಮುನೀರ ಅಹ್ಮದ್’ಗೆ ಪೆಟ್ಟಾಗಿದೆ. ಅತಿವೇಗ ಹಾಗೂ ಚಾಲಕನ ನಿರ್ಲಕ್ಷ್ಯವೇ ಈ ಅಪಘಾತಕ್ಕೆ ಕಾರಣ ಎಂದು ಲಾರಿ ಮಾಲಕ ಅಹ್ಮದ್ ಖಾನ್ ಪೊಲೀಸ್ ದೂರು ನೀಡಿದ್ದಾರೆ.




