ಕುಮಟಾ: ಗೋಕರ್ಣದ ಕುಡ್ಲೆ ಕಡಲತೀರದ ಅಬ್ಬರಕ್ಕೆ ನೀರಿನಲ್ಲಿ ಕೊಚ್ಚಿ ಹೋಗಿದ್ದ ನಾಲ್ವರನ್ನು ಶುಕ್ರವಾರ ಸಂಜೆ ಜೀವ ರಕ್ಷಕ ಸಿಬ್ಬಂದಿ ರಕ್ಷಿಸಿದ್ದಾರೆ.
ಬೆಂಗಳೂರಿನ ಎಬಿನ್ ಡೇವಿಶ (35), ಮಧುರಾ ಅಗ್ರವಾಲ್(35) ಹಾಗೂ ರಮ್ಯಾ ವೆಂಕಟ್ರಮಣ (34) ಕಡಲ ತೀರದಲ್ಲಿ ಮೋಜು ಮಸ್ತಿಯಲ್ಲಿ ತೊಡಗಿದ್ದರು. ಅವರನ್ನು ನೋಡಿದ ರಷ್ಯಾದ ಮಹಿಳೆ ಜೈನ್ (41) ಸಹ ನೀರಿಗೆ ಇಳಿದಿದ್ದರು. ಎಲ್ಲರೂ ಒಟ್ಟಿಗೆ ಆಟವಾಡುತ್ತಿದ್ದಾಗ ಅಲೆಗಳ ಅಬ್ಬರ ಜೋರಾಗಿದ್ದು, ಸುಳಿಗೆ ಸಿಲುಕಿ ಅಪಾಯದ ಅಂಚು ತಲುಪಿದ್ದರು.
ಇದನ್ನು ಗಮನಿಸಿದ ಜೀವಕ್ಷಕ ಸಿಬ್ಬಂದಿ ನಾಗೇಂದ್ರ ಕುರ್ಲೆ, ಮಂಜುನಾಥ ಹರಿಕಂತ್ರ, ಪ್ರವಾಸಿಮಿತ್ರ ಶೇಖರ ಹರಿಕಂತ್ರ ತಕ್ಷಣ ಅಲ್ಲಿಗೆ ತೆರಳಿ ಅವರನ್ನು ಬದುಕಿಸಿದರು.




