ಹೊನ್ನಾವರ: ಶರಾವತಿ ಸರ್ಕಲ್’ನಿಂದ ಗೇರುಸೊಪ್ಪ ಸರ್ಕಲ್ ಕಡೆ ಬರುತ್ತಿದ್ದ ಬೈಕಿಗೆ ಎದುರಿನಿಂದ ಬಂದ ಇನ್ನೊಂದು ಬೈಕ್ ಡಿಕ್ಕಿಯಾದ ಪರಿಣಾಮ ಎರಡೂ ಬೈಕಿನ ಸವಾರರು ಗಾಯಗೊಂಡಿದ್ದಾರೆ.
ಪ್ರಭಾತನಗರದಲ್ಲಿ ವಾಸವಾಗಿರುವ ಯಲ್ಲಾಪುರ ಗಣಪತಿ ಗಲ್ಲಿಯ ಸಂತೋಷ ಮಾರುತಿ ಇಣಕಲ್ ಎಂಬಾತರು ಅ31ರ ರಾತ್ರಿ ಗೇರುಸೊಪ್ಪ ಕಡೆಯಿಂದ ಬೈಕ್ ಓಡಿಸಿಕೊಂಡು ಬರುತ್ತಿದ್ದರು. ಈ ವೇಳೆ ಶರಾವತಿ ಸರ್ಕಲ್’ನಿಂದ ಗೇರುಸೊಪ್ಪ ಸರ್ಕಲ್ ಕಡೆ ಬರುತ್ತಿದ್ದ ಮಂಕಿ ಆಡುಕುಳದ ನಾಗರಾಜ ಚೂಡಾ ಮರಾಠಿ (27) ಅವರ ಬೈಕಿಗೆ ಸಂತೋಷ ಅವರ ಬೈಕ್ ಡಿಕ್ಕಿಯಾಗಿದೆ.
ಕಾಮತ್ ಹೊಟೇಲ್ ಬಳಿಯ ರಿಕ್ಷಾ ನಿಲ್ದಾಣದ ಮುಂದೆ ಈ ಅಪಘಾತ ನಡೆದಿದೆ. ಎರಡು ಬೈಕ್ ಸವಾರರು ನೆಲಕ್ಕೆ ಬಿದ್ದು ಗಾಯಗೊಂಡಿದ್ದಾರೆ. ಅಪಘಾತದ ರಭಸಕ್ಕೆ ನಾಗರಾಜ ಅವರ ತಲೆ, ಮುಖ ಹಾಗೂ ಕಾಲಿಗೆ ಹೆಚ್ಚಿನ ಪೆಟ್ಟಾಗಿದೆ.




