ಕುಮಟಾ: ಕಾರು ಹಾಗೂ ಬೈಕ್ ನಡುವೆ ನಡೆದ ಅಪಘಾತದಲ್ಲಿ ಮೀನುಗಾರ ರಾಮಚಂದ್ರ ಅಂಬಿಗ ಸಾವನಪ್ಪಿದ್ದಾರೆ.
ಅ 31ರ ಮಧ್ಯಾಹ್ನ ಗದಗದ ರಾಘವೇಂದ್ರ ಹುಚ್ಚಣ್ಣನವರ್ ಎಂಬ ವೈದ್ಯರು ಕುಮಟಾದಿಂದ ಅಂಕೋಲಾ ಕಡೆ ಕಾರು ಓಡಿಸುತ್ತಿದ್ದರು. ಅದೇ ವೇಳೆ ದಿವಿಗಿ ಕಡೆಯಿಂದ ಮಿರ್ಜಾನ್ ಕಡೆ ದಿವಿಗಿ ಕೆಳಗಿನಕೇರಿಯ ರಾಮಚಂದ್ರ ದೇವು ಅಂಬಿಗ (59) ಸ್ಕೂಟರ್ ಮೇಲೆ ತೆರಳುತ್ತಿದ್ದರು. ವೇಗವಾಗಿ ಕಾರು ಓಡಿಸಿಕೊಂಡು ಬಂದ ರಾಘವೇಂದ್ರ ಹುಚ್ಚಪ್ಪನವರ್ ಮಿರ್ಜಾನ್ ದರ್ಗಾ ಕ್ರಾಸಿನ ಬಳಿ ಸ್ಕೂಟರಿಗೆ ತಮ್ಮ ಕಾರು ಗುದ್ದಿದರು.
ನೆಲಕ್ಕೆ ಬಿದ್ದ ರಾಮಚಂದ್ರ ಅಂಬಿಗ ಅವರ ಕಿವಿಯಿಂದ ರಕ್ತ ಸೋರಲು ಶುರುವಾಗಿದ್ದು, ತಕ್ಷಣ ಅವರನ್ನು ಕುಮಟಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿನ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಮಣಿಪಾಲಿಗೆ ಒಯ್ಯುವಂತೆ ಸೂಚಿಸಿದರು. ಆಂಬುಲೆನ್ಸ ಮೂಲಕ ಕರೆದೊಯ್ಯುವಾಗ ಮುರುಡೇಶ್ವರ ಬೈಲೂರು ಬಳಿ ರಾಮಚಂದ್ರ ಅಂಬಿಗ ಕೊನೆ ಉಸಿರೆಳೆದರು.




