ಮುಂಡಗೋಡು: ಹುಬ್ಬಳ್ಳಿ ರಸ್ತೆಯ ಪಾಂಡುರoಗ ಹೊಟೇಲ್ ಬಳಿ ಚಹಾ ಅಂಗಡಿಗೆ ಬೈಕ್ ಗುದ್ದಿದೆ. ಈ ಅಪಘಾತದಲ್ಲಿ ಇಬ್ಬರು ಗಾಯಗೊಂಡಿದ್ದಾರೆ.
ಹಳ್ಳೂರಿನ ಚಾಲಕ ರಾಜೇಶ ಹುಲಿಯಪ್ಪನವರ್ ಎಂಬಾತ ಅ 31ರ ರಾತ್ರಿ ವೇಗವಾಗಿ ಬೈಕ್ ಓಡಿಸಿಕೊಂಡು ಬಂದು ಅಂಗಡಿಗೆ ಗುದ್ದಿದ್ದು, ರಾಜೇಶ್ ಜೊತೆ ಬೈಕಿನಲ್ಲಿ ಹಿಂದೆ ಕೂತಿದ್ದ ಮಣಿಕಂಠ ಶಿವಾಜಿ ಕಾಳೆನ್ನವರ್ (26) ಸಹ ಗಾಯಗೊಂಡಿದ್ದಾರೆ. ಈ ಪೈಕಿ ಮಣಿಕಂಠ ಅವರ ತಲೆ ಹಾಗೂ ಪಾದಕ್ಕೆ ದೊಡ್ಡ ಪ್ರಮಾಣದಲ್ಲಿ ಪೆಟ್ಟಾಗಿದೆ. ಹೀಗಾಗಿ ಕಿರಣ್ ಬೋವಿ ಎಂಬಾತರು ಪೊಲೀಸ್ ದೂರು ನೀಡಿದ್ದಾರೆ.




