ಹಳಿಯಾಳ: ಮೆಡಿಕಲ್ ರಿಪ್ರೇಸೆಂಟೀವ್ ರಾಹುಲ್ ಮಿಶಾಳಿ (23) ಅವರು ಓಡಿಸುತ್ತಿದ್ದ ಬೈಕಿಗೆ ಆಲ್ಟೋ ಕಾರು ಗುದ್ದಿದೆ. ಪರಿಣಾಮ ರಾಹುಲ್ ಗಂಭೀರ ಗಾಯಗೊಂಡಿದ್ದಾರೆ.
ಧಾರವಾಡ ರಸ್ತೆಯ ಪೆಟ್ರೊಲ್ ಬಂಕ್ ಬಳಿ ಈ ಅಪಘಾತ ನಡೆದಿದೆ. ಬೈಕಿಗೆ ತನ್ನ ಕಾರು ಗುದ್ದಿದ ಕಾರು ಚಾಲಕ ಗಾಯಾಳುವನ್ನು ಉಪಚರಿಸಿದೇ ಮುಂದೆ ಹೋಗಿದ್ದು, ನಂತರ ಕಾರನ್ನು ಎ ಪಿ ಎಂ ಸಿ ಬಳಿ ನಿಲ್ಲಿಸಿ ಪರಾರಿಯಾಗಿದ್ದಾರೆ.
ಗಾಯಗೊಂಡ ರಾಹುಲ್ ಮಿಶಾಳಿ ದಾಂಡೇಲಿಯ ಕೆರೆವಾಡದವರು. ಕಾರು ಚಾಲಕನ ಹೆಸರು, ವಿಳಾಸ ಗೊತ್ತಾಗಿಲ್ಲ. ಪಟ್ಟೇಕರ್ ಲೇಔಟ್ ನಿವೃತ್ತ ಸೈನಿಕ ತುಕಾರಾಮ ಮಿಳಾಸಿ ಪೊಲೀಸರಿಗೆ ಮಾಹಿತಿ ನೀಡಿದ್ದು, ದೂರು ದಾಖಲಿಸಿಕೊಂಡ ಪೊಲೀಸರು ಕಾರು ಚಾಲಕನ ಹುಡುಕಾಟ ನಡೆಸಿದ್ದಾರೆ.




