ಕಾರವಾರ: ಸದಾಶಿವಗಡದ ಮಹಾಮಹಿ ದೇವಸ್ಥಾನದ ಬಳಿ ಮನೆ ಮಾಡಿಕೊಂಡಿರುವ ಪೂರ್ವಿ ಶಿರೂಡಕರ್ (32) ಅವರ ಮನೆಯಲ್ಲಿನ ಬಂಗಾರದ ಆಭರಣಗಳು ಕಳ್ಳರ ಪಾಲಾಗಿದೆ.
ಪೂರ್ವಿ ವಿವೇಕ ಶಿರೂಡಕರ್ (32) ಅವರು ಅಕ್ಟೊಬರ್ 6ರಿಂದ 27ರವರೆಗೆ ಮನೆಯಲ್ಲಿರಲಿಲ್ಲ. ಈ ವೇಳೆ ಅವರ ಮನೆಗೆ ನುಗ್ಗಿದ ಕಳ್ಳರು ಬಂಗಾರದ ಲಕ್ಷ್ಮೀ ಸರ,
ಚಿನ್ನದ ಚೈನ್, ಸಣ್ಣ ಮಕ್ಕಳ ಸರ, ಕೈ ಬಳೆ, ಉಂಗುರವನ್ನು ದೋಚಿ ಪರಾರಿಯಾಗಿದ್ದಾರೆ.
ಕಳ್ಳರ ಪತ್ತೆಗಾಗಿ ಅವರು ಸಾಕಷ್ಟು ಹುಡುಕಾಟ ನಡೆಸಿದರೂ ಪ್ರಯೋಜನವಾಗಿಲ್ಲ. ಕಳ್ಳತನವಾದ ಆಭರಣಗಳು ಸಹ ಮರಳಿ ಸಿಕ್ಕಿಲ್ಲ. ಹೀಗಾಗಿ ನ 4ರಂದು ಒಟ್ಟು 3 ಲಕ್ಷ ರೂ ಬೆಲೆಯ ಆಭರಣಗಳು ಕಳ್ಳತನವಾಗಿರುವ ಬಗ್ಗೆ ಅವರು ಪೊಲೀಸ್ ದೂರು ನೀಡಿದ್ದಾರೆ.
#S News Digitel Advertisement: ಕಳ್ಳತನ ತಡೆಗೆ ಸಿಸಿ ಕ್ಯಾಮರಾ ಅಳವಡಿಸಿ. ಗುಣಮಟ್ಟದ ಸಿಸಿ ಕ್ಯಾಮರಾಗಳಿಗೆ ಇಲ್ಲಿ ಫೋನ್ ಮಾಡಿ: 8431314190 (ಟೆಕ್ ಬೈಟ್ ಐಟಿ ಸೆಲ್ಯುಶನ್ ಎಜನ್ಸಿ)




