ಯಲ್ಲಾಪುರ: ಉಮ್ಮಚ್ಗಿಯಲ್ಲಿ ವಾಸವಾಗಿದ್ದ ಸಜ್ಜಿಮೋಹನ ಕೃಷ್ಣ ನಾಯರ್ (53) ವಿಷ ಸೇವಿಸಿ ಸಾವನಪ್ಪಿದ್ದಾರೆ.
ವ್ಯಾಪಾರಿಯಾಗಿದ್ದ ಅವರು ಹಲವು ವರ್ಷಗಳಿಂದ ವಿಪರೀತ ಪ್ರಮಾಣದಲ್ಲಿ ಮದ್ಯ ಸೇವನೆ ಮಾಡುತ್ತಿದ್ದರು. ಈಚೆಗೆ ಮಾನಸಿಕವಾಗಿ ಕುಗ್ಗಿದ್ದ ಅವರು ನಿತ್ಯ ಕೊರಗುತ್ತಿದ್ದರು. ನ 3ರಂದು ರಾತ್ರಿ ಸರಾಯಿ ನಶೆಯಲ್ಲಿ ಅವರು ಕ್ರಿಮಿನಾಶಕ ಸೇವಿಸಿದ್ದಾರೆ.
ಮರುದಿನ ಬೆಳಗ್ಗೆ 8 ಗಂಟೆಗೆ ಅವರು ಕ್ರಿಮಿನಾಶಕ ಸೇವಿಸಿರುವುದು ಬೇರೆಯವರಿಗೆ ಗೊತ್ತಾಗಿದೆ. ಪರೀಕ್ಷಿಸಿದಾಗ ಸಜ್ಜಿಮೋಹನ ಉಸಿರಾಡುತ್ತಿರಲಿಲ್ಲ. ಉಚ್ಚಗೇರಿಯಲ್ಲಿ ವಾಸವಾಗಿರುವ ಅವರ ಸಹೋದರಿ ವತ್ಸಲಾ ಕೃಷ್ಣ ಪಿಳ್ಳೆ ಆಗಮಿಸಿ, ನಂತರ ಪೊಲೀಸ್ ದೂರು ನೀಡಿದರು.




