ಹೊನ್ನಾವರ: ರಾಜ್ಯ ಆಡಳಿತ ಆಯೋಗದ ಅಧ್ಯಕ್ಷ ಆರ್ ವಿ ದೇಶಪಾಂಡೆ ಹಳ್ಳಿ ಸೊಗಡಿನ `ದುರ್ಗಾ ಕೆಫೆ’ಗೆ ತೆರಳಿ ಅಲ್ಲಿನ ತಿಂಡಿಗಳನ್ನು ಸವಿದರು. ಮೊದಲು ಮೊಸರು ವಡೆಯ ಸೇವಿಸಿದ ಅವರು ನಂತರ ಮಿಸಲ್ ಬಾಜಿ ರುಚಿ ನೋಡಿದರು. ಇದಾದ ಮೇಲೆ `ತೆಳ್ಳವು ದೋಸೆ’ ತಿಂದು ಹೊಟ್ಟೆ ತುಂಬಿಸಿಕೊoಡರು.
ಆರ್ ವಿ ದೇಶಪಾಂಡೆ ಅವರು ಬುಧವಾರ ಕುಮಟಾದಿಂದ ಹೊನ್ನಾವರದ ಇಡಗುಂಜಿ ಕಡೆ ಹೋಗುತ್ತಿದ್ದರು. ಅನಾಧಿಕಾಲದಿಂದಲೂ ಇದ್ದ ವಾಸುದೇವ ಭಟ್ಟ ಮಾವಿನಕರ್ವ ಅವರ ಹೊಟೇಲ್ ನೋಡಿದ ಅವರು ಅಲ್ಲಿಯೇ ಕಾರು ನಿಲ್ಲಿಸುವಂತೆ ಚಾಲಕನಿಗೆ ಸೂಚಿಸಿದರು. ಹೊಟೇಲ್ ಬಳಿ ಕಾರು ಇಳಿದ ಕೂಡಲೇ ಒಳಗೆ ಪ್ರವೇಶಿಸಿ ತಿಂಡಗಳ ಆಯ್ಕೆ ಪಟ್ಟಿ ಗಮನಿಸಿದರು.
`ಆರ್ ವಿ ದೇಶಪಾಂಡೆ ಅವರು ಹಳ್ಳಿಗಾಡಿನ ಹೊಟೇಲ್’ಗೆ ಬಂದಿದ್ದಾರೆ’ ಎಂಬ ವಿಷಯ ತಿಳಿದ ನೂರಾರು ಜನ ಅಲ್ಲಿ ಜಮಾಯಿಸಿದರು. ತಮ್ಮ ಒಡನಾಡಿಗಳ ಜೊತೆ ಆರ್ ವಿ ದೇಶಪಾಂಡೆ ಕೊಂಕಣಿ ಭಾಷೆಯಲ್ಲಿ ಹರಟುತ್ತ ಖಾದ್ಯಗಳನ್ನು ಸವಿದರು. ನಡುನಡುವೆ ಆರ್ ದೇಶಪಾಂಡೆಯವರೇ ಹಾಸ್ಯ ಚಟಾಕಿ ಹಾರಿಸಿ ನೆರೆದಿದ್ದವರನ್ನು ನಗಿಸಿದರು. ನಂತರ ಅವರು ಅಲ್ಲಿಂದ ಇಡಗುಂಜಿಗೆ ತೆರಳಿದರು.




