ಶಿರಸಿ: ಮಾಂಸಕ್ಕಾಗಿ ಕಾಡು ಹಂದಿ ಕೊಂದ ಪರಶುರಾಮ ಕಾಳೇನವರ್ ಎಂಬಾತರನ್ನು ಅರಣ್ಯ ಇಲಾಖೆ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ.
ಶಿರಸಿ ಮುಗವಳ್ಳಿಯ ಪರಶುರಾಮ ಮಂಗಳವಾರ ರಾತ್ರಿ ಶಿಖಾರಿಗೆ ಹೋಗಿದ್ದ. ಅಲ್ಲಿ ಆತನಿಗೆ ಕಾಡು ಹಂದಿ ಸಿಕ್ಕಿದ್ದು, ಮಾಂಸದ ಆಸೆಗೆ ಆ ಪ್ರಾಣಿಯನ್ನು ಬೇಟೆ ಆಡಿದ್ದ. ಹಂದಿಯ ಮಾಂಸದ ಜೊತೆ ಮನೆಗೆ ಬಂದಿದ್ದ ಆತನ ಮೇಲೆ ಅರಣ್ಯ ಸಿಬ್ಬಂದಿ ದಾಳಿ ನಡೆಸಿದರು. ಆಗ. 25 ಕೆಜಿ ಮಾಂಸದ ಜೊತೆ ಪರಶುರಾಮ ಕಾಳೇನವರ್ ಸಿಕ್ಕಿ ಬಿದ್ದಿದ್ದಾನೆ.
ಬನವಾಸಿ ವಲಯ ಅರಣ್ಯಾಧಿಕಾರಿ ಭವ್ಯ ನಾಯ್ಕ, ಅರಣ್ಯ ಸಿಬ್ಬಂದಿ ಮಂಜುನಾಥ ಗಂಗೆಮತ, ಯಶೋದಾ ನಾಯ್ಕ ,ಮಹೇಶ ಅಜ್ಮೀರ, ಅರಣ್ಯ ಪಾಲಕ ಬಸನಗೌಡ ಹಲಗಿ, ಖಾದರ ಸಾಬ್,ಪರಶುರಾಮ, ಮಂಜುನಾಥ ನಾಯ್ಕ ಕಾರ್ಯಾಚರಣೆಯಲ್ಲಿದ್ದರು.




