6
  • Latest

ಭರತನಾಟ್ಯ ಪ್ರವೇಶಕ್ಕೆ 25 ವಸಂತ: ಪ್ರವೇಶ ಉಚಿತ.. ಮನರಂಜನೆ ಖಚಿತ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಲೇಖನ

ಭರತನಾಟ್ಯ ಪ್ರವೇಶಕ್ಕೆ 25 ವಸಂತ: ಪ್ರವೇಶ ಉಚಿತ.. ಮನರಂಜನೆ ಖಚಿತ!

AchyutKumar by AchyutKumar
in ಲೇಖನ

ವಾರದ ಐದು ದಿನ ನಾನಾ ಭಾಗಗಳಲ್ಲಿ ಭರತನಾಟ್ಯ ತರಗತಿ ನಡೆಸುವ ವಿನುತಾ ಹೆಗಡೆ ಅವರು ಭರತ ನಾಟ್ಯ ಕ್ಷೇತ್ರದಲ್ಲಿ 25 ವಸಂತಗಳನ್ನು ಪೂರೈಸಿದ್ದಾರೆ.

ADVERTISEMENT

ಅಂಕೋಲಾ ತಾಲೂಕಿನ ಕಲ್ಲೇಶ್ವರದ ವಿನುತಾ ರಾಘವೇಂದ್ರ ಹೆಗಡೆ ಅವರು ಪ್ರತಿ ಭಾನುವಾರ ಬೆಳಗ್ಗೆ 9.30ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಹೊನ್ನಾವರದ ಕೆಳಗಿನಪಾಳ್ಯದಲ್ಲಿ ಭರತನಾಟ್ಯ ತರಗತಿ ನಡೆಸುತ್ತಾರೆ. ಮಧ್ಯಾಹ್ನ 4.30ಕ್ಕೆ ಅಂಕೋಲಾದ ವೆಂಕಟ್ರಮಣ ಮಠಕ್ಕೆ ಆಗಮಿಸಿ ಸಂಜೆ 6 ಗಂಟೆಯವರೆಗೂ ಮಕ್ಕಳಿಗೆ ನೃತ್ಯ ಅಭ್ಯಾಸ ಮಾಡಿಸುತ್ತಾರೆ. ಸೋಮವಾರ ಮಧ್ಯಾಹ್ನ 2.30ರಿಂದ ಸಂಜೆ 7ರವರೆಗೆ ಗ್ರಾಮೀಣ ಪ್ರದೇಶವಾದ ಕಲ್ಲೇಶ್ವರದ ಗೋಪಾಲಕೃಷ್ಣ ದೇವಾಲಯದಲ್ಲಿ ಅವರು ಕುಣಿಯುತ್ತಾರೆ. ಮಕ್ಕಳಿಗೂ ನಾಟ್ಯ ಕಲಿಸುತ್ತಾರೆ!

ಬುಧವಾರ ಯಲ್ಲಾಪುರ ವಿಶ್ವದರ್ಶನ ಕೇಂದ್ರೀಯ ವಿದ್ಯಾಲಯದ ಮಕ್ಕಳಿಗೆ ನೃತ್ಯದ ಪಾಠ ಮಾಡುವ ಅವರು ಶುಕ್ರವಾರ ಸಹ ವಿಶ್ವದರ್ಶನ ಕೇಂದ್ರಿಯ ವಿದ್ಯಾಲಯದ ಮಕ್ಕಳಿಗಾಗಿ ನೃತ್ಯ ತರಗತಿ ನಡೆಸುತ್ತಾರೆ. ಶನಿವಾರ ಮಧ್ಯಾಹ್ನ 2.30ರಿಂದ ಸಂಜೆ 7ಗಂಟೆಯವರೆಗೆ ವಿಶ್ವದರ್ಶನ ಆವಾರದಲ್ಲಿ ಚಿಣ್ಣರಿಗೆ ನಾಟ್ಯ ಮಾಡಿಸುತ್ತಾರೆ.

Advertisement. Scroll to continue reading.

ವಿನುತಾ ಹೆಗಡೆ ಅವರು ತಮ್ಮ 10ನೇ ವಯಸ್ಸಿನಲ್ಲಿ ಭರತ ನಾಟ್ಯ ವೇದಿಕೆ ಪ್ರವೇಶಿಸಿದರು. ಕಳೆದ 24 ವರ್ಷಗಳಿಂದ ಅವರು ನಿತ್ಯ ಭರತ ನಾಟ್ಯ ಅಭ್ಯಾಸ ಮಾಡುತ್ತಿದ್ದಾರೆ. ಸಹನಾ ಹೆಗಡೆ ಅವರ ಗರಡಿಯಲ್ಲಿ ಪಳಗಿದ ಅವರು ಇದೀಗ ತಮ್ಮದೇ ಆದ ಶಿಷ್ಯರನ್ನು ಹೊಂದಿದ್ದಾರೆ. ವಿನುತಾ ಹೆಗಡೆ ಅವರ 6 ವರ್ಷದ ಪುತ್ರಿ ವಾರುಣಿ ಹೆಗಡೆ ಸಹ ನಾಟ್ಯಕಲೆಯಲ್ಲಿ ಹೆಜ್ಜೆ ಹಾಕಿದ್ದಾರೆ. ವಾರುಣಿ ಹೆಗಡೆ ತಮ್ಮ 3ನೇ ವಯಸ್ಸಿನಲ್ಲಿ ವೇದಿಕೆ ಪ್ರದರ್ಶನ ನೀಡಿದ್ದು, ಇದಕ್ಕೂ ವಿನುತಾ ಹೆಗಡೆ ಅವರೇ ಪ್ರೇರಣೆ!

Advertisement. Scroll to continue reading.

ವಿನುತಾ ಹೆಗಡೆ ಅವರಿಗೆ ಬಾಲ್ಯದಿಂದಲೂ ಭರತ ನಾಟ್ಯದ ಬಗ್ಗೆ ಅಪಾರ ಆಸಕ್ತಿ. ಗ್ರಾಮೀಣ ಭಾಗದಲ್ಲಿ ಗೆಜ್ಜೆ ಕಟ್ಟಿ ಕುಣಿಯಲು ಶುರು ಮಾಡಿದ ಅವರು ನಾಟ್ಯ ಅಭ್ಯಾಸಕ್ಕಾಗಿ ಶಿರಸಿ-ಹುಬ್ಬಳ್ಳಿಗೂ ಒಡಾಟ ನಡೆಸಿದ್ದಾರೆ. ಭರತನಾಟ್ಯ ವಿಷಯವಾಗಿಯೇ ಮೈಸೂರಿನ ಅಲ್ಲಮ್ಮಪ್ರಭು ಲಲಿತ ಅಕಾಡೆಮಿಯಲ್ಲಿ ಸ್ನಾತಕೋತರ ಪದವಿ ಪೂರೈಸಿದ್ದಾರೆ. ಕಳೆದ 12 ವರ್ಷಗಳಿಂದ ನಾಟ್ಯಾಂಜಲಿ ಕಲಾ ಕೇಂದ್ರದ ನೃತ್ಯ ಗುರುವಾಗಿ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ. ನಾಡಿನ ಹಲವು ಪ್ರತಿಷ್ಠಿತ ಉತ್ಸವಗಳಲ್ಲಿ ವಿನುತಾ ಹೆಗಡೆ ಅವರು ನಾಟ್ಯ ಪ್ರದರ್ಶನ ನೀಡಿದ್ದಾರೆ. ಇದಕ್ಕಾಗಿ ಹಲವು ಪ್ರಶಸ್ತಿಗಳು ಸಹ ಅವರಿಗೆ ಸಿಕ್ಕಿದೆ.

Previous Post

ಬೆಂಗಳೂರಿಗೆ ಬರುವ ನಾಯಕರಿಗೆ ಗ್ರೀನ್ ಕಾರ್ಡ!

Next Post

ಬೈಕ್’ಗೆ ಗುದ್ದಿ ಪರಾರಿಯಾದ ಲಾರಿ ಚಾಲಕ

Next Post

ಬೈಕ್'ಗೆ ಗುದ್ದಿ ಪರಾರಿಯಾದ ಲಾರಿ ಚಾಲಕ

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ