ಕುಮಟಾ: ಬೈಕ್ ಓಡಿಸಿಕೊಂಡು ಹೋಗುತ್ತಿದ್ದ ವಿಘ್ನೇಶ್ ಮುಕ್ರಿ (19) ಅವರಿಗೆ ಅಪರಿಚಿತ ಲಾರಿ ಗುದ್ದಿದೆ.
ಹಂದಿಗೋಣದ ವಿಘ್ನೇಶ ನಾಗೇಶ ಮುಕ್ರಿ (19) ಗುರುವಾರ ಮಧ್ಯಾಹ್ನ ತಮ್ಮ ಊರಿನಿಂದ ಕುಮಟಾ ಕಡೆ ಬೈಕ್ ಓಡಿಸುತ್ತಿದ್ದರು. ಮಂಗಳೂರಿನಿAದ ಕುಮಟಾ ಕಡೆ ಹೊರಟಿದ್ದ ಲಾರಿ ಅಳ್ವೆಕೊಡಿ ಬಳಿ ಅವರಿಗೆ ಡಿಕ್ಕಿಯಾಗಿದೆ.
ಪರಿಣಾಮ ವಿಘ್ನೇಶ್ ಅವರ ತಲೆಗೆ ಭಾರೀ ಪ್ರಮಾಣದಲ್ಲಿ ಪೆಟ್ಟಾಗಿದೆ. ಅಪಘಾತದ ನಂತರ ಲಾರಿ ಚಾಲಕ ಲಾರಿ ಜೊತೆ ಪರಾರಿಯಾಗಿದ್ದು, ಆತನ ಹುಡುಕಾಟ ಮುಂದುವರೆದಿದೆ. ಗಾಯಾಳುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದೆ. ಮಗನಿಗೆ ಲಾರಿ ಗುದ್ದಿದ ಚಾಲಕನನ್ನು ಹಿಡಿದು ಶಿಕ್ಷಿಸುವಂತೆ ಸುಮಾ ನಾಗೇಶ ಮುಕ್ರಿ ಪೊಲೀಸ್ ದೂರು ನೀಡಿದ್ದಾರೆ.




