ಯಲ್ಲಾಪುರ: ಇಂದಿರಾ ಕ್ಯಾಂಟೀನ್ ಅವ್ಯವಸ್ಥೆ, ಸಿಬ್ಬಂದಿ ವೇತನ ಸಮಸ್ಯೆ ಹಾಗೂ ವಿದ್ಯುತ್ ಬಿಲ್ ಪಾವತಿಗೆ ಅನುದಾನ ಕೊರತೆ ಕುರಿತು S News Digital ಪ್ರಕಟಿಸಿದ ವರದಿಗೆ ಉತ್ತರ ಕನ್ನಡ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ತ್ವರಿತ ಸ್ಪಂದನೆ ನೀಡಿದ್ದಾರೆ.
ಶನಿವಾರ ಬೆಳಗ್ಗೆ 10.24ಕ್ಕೆ ಎಸ್ ನ್ಯೂಸ್ ಡಿಜಿಟಲ್ ವರದಿ ಪ್ರಸಾರ ಮಾಡಿತ್ತು. 10 ತಿಂಗಳಿನಿಂದ ಇಲ್ಲಿನ ಸಿಬ್ಬಂದಿಗೆ ವೇತನ ಆಗದಿರುವುದು ಹಾಗೂ ವಿದ್ಯುತ್ ಬಿಲ್ ಪಾವತಿ ಆಗದ ಹಿನ್ನಲೆ ಹೆಸ್ಕಾಂ ಅಧಿಕಾರಿಗಳು ವಿದ್ಯುತ್ ಸಂರ್ಕ ಕಡಿತ ಮಾಡಿದ ಬಗ್ಗೆ ವರದಿಯಲ್ಲಿ ವಿವರಿಸಲಾಗಿತ್ತು. ಇದರಿಂದ ಸರ್ವಜನಿಕರಿಗೆ ಆಗುವ ಸಮಸ್ಯೆಗಳ ಬಗ್ಗೆ ವರದಿಯಲ್ಲಿ ಉಲ್ಲೇಖಿಸಲಾಗಿತ್ತು.
ಶನಿವಾರ ಪ್ರಸಾರವಾದ ವರದಿ ಇಲ್ಲಿ ಓದಿ: ಇಂದಿರಾ ಕ್ಯಾಂಟೀನ್’ಗೆ ಇಲ್ಲ ಬೆಳಕಿನ ಭಾಗ್ಯ!
ರಾತ್ರಿ 9ಗಂಟೆ ವೇಳೆಗೆ ವರದಿ ವೀಕ್ಷಿಸಿದ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ತಕ್ಷಣ S News Digital ಪ್ರತಿನಿಧಿಗೆ ವಾಟ್ಸಪ್ ಮೂಲಕ ತ್ವರಿತ ಕ್ರಮದ ಭರವಸೆ ನೀಡಿದ್ದಾರೆ. ಸೋಮವಾರ ಮೊದಲ ಅವಧಿಯಲ್ಲಿ ಬಾಕಿ ಬಿಲ್ ಪಾವತಿಸುವುದಾಗಿ ಅವರು ಹೇಳಿದ್ದಾರೆ.
ಐದು ತಿಂಗಳ ಹಿಂದೆ ಉತ್ತರ ಕನ್ನಡ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಲಕ್ಷ್ಮೀಪ್ರಿಯಾ ಅವರು ಜನ ಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಜನ ಮನ್ನಣೆಗೆ ಪಾತ್ರರಾಗಿದ್ದಾರೆ.





