6
  • Latest

ಬಿಸಗೋಡು ರಸ್ತೆಗೂ ಗೃಹಲಕ್ಷ್ಮಿ ಹಣ!

ಪಿಸ್ತೂಲ್’ ಕಥೆ ಹೇಳಲು ಹೊರಟ ಪ್ರಬಿಕ್ ಮೊಗವೀರ್!

ಪಿಸ್ತೂಲ್’ ಕಥೆ ಹೇಳಲು ಹೊರಟ ಪ್ರಬಿಕ್ ಮೊಗವೀರ್!

ಈ ಮೊದಲು ಕಂಡಿರದ ವಿಭಿನ್ನವಾದ ರೌಡಿಸಂ ಚಿತ್ರ

ಈ ಮೊದಲು ಕಂಡಿರದ ವಿಭಿನ್ನವಾದ ರೌಡಿಸಂ ಚಿತ್ರ

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ADVERTISEMENT
  • Home
Saturday, July 25, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಬಿಸಗೋಡು ರಸ್ತೆಗೂ ಗೃಹಲಕ್ಷ್ಮಿ ಹಣ!

AchyutKumar by AchyutKumar
in ಸ್ಥಳೀಯ

ಯಲ್ಲಾಪುರ: ಸಂಪೂರ್ಣ ಹದಗೆಟ್ಟ ಬಿಸಗೋಡು ರಸ್ತೆ ದುರಸ್ಥಿಗಾಗಿ ನಡೆದ `ಜೋಳಿಗೆ ಅಭಿಯಾನ’ಕ್ಕೆ ಜನರ ಸ್ಪಂದನೆ ದೊರೆತಿದೆ. ಅದರಲ್ಲಿಯೂ ಆ ಭಾಗದ ಮಹಿಳೆಯರು ಉದಾರ ಮನಸ್ಸಿನಿಂದ ದೇಣಿಗೆ ನೀಡಿದ್ದಾರೆ. ಕೆಲವರು ತಮ್ಮ ಖಾತೆಗೆ ಜಮಾ ಆದ ಗೃಹಲಕ್ಷ್ಮಿ ಹಣವನ್ನು ರಸ್ತೆ ರಿಪೇರಿಗಾಗಿ ತೆಗೆದು ಕೊಟ್ಟಿದ್ದಾರೆ!

ಬಿಸಗೋಡಿಗೆ ತೆರಳುವ 2ಕಿಮೀ ರಸ್ತೆ ದುರಸ್ಥಿಗಾಗಿ ಊರಿನ ಜನ ಸ್ಥಳೀಯ ಆನಗೋಡು ಗ್ರಾಮ ಪಂಚಾಯತದಿoದ ಹಿಡಿದು ಶಾಸಕ-ಸಚಿವ-ಸಂಸದರವರೆಗೆ ಮನವಿ ಮಾಡಿದ್ದರು. ಆದರೆ, ಈ ರಸ್ತೆ ಅಭಿವೃದ್ಧಿಗೆ ಸರ್ಕಾರದಿಂದ ಕಿಂಚಿತ್ತು ನೆರವು ಸಿಕ್ಕಿರಲಿಲ್ಲ. ಮಳೆಗಾಲದಲ್ಲಿನ ನೀರು ಹೊಂಡಗಳಲ್ಲಿ ತುಂಬಿದ ಕಾರಣ ಅಪಾಯ ಹೆಚ್ಚಿದ್ದು, ಸಾಕಷ್ಟು ಅಪಘಾತಗಳು ನಡೆದಿದ್ದವು. ಅಪಘಾತ ಪ್ರಮಾಣ ತಗ್ಗಿಸುವುದಕ್ಕಾಗಿ ಗ್ರಾಮಸ್ಥರೆಲ್ಲರೂ ಸೇರಿ `ಜೋಳಿಗೆ ಅಭಿಯಾನ’ ನಡೆಸಿದ್ದರು.

ಇದನ್ನೂ ಓದಿ: ನಿಧಾನವಾಗಿ ಬನ್ನಿ.. ಇದು ಬಿಸಗೋಡು ರಸ್ತೆ!

ಮೊದಲ ಹಂತವಾಗಿ 32850ರೂ ದೇಣಿಗೆ ದೊರೆತಿದ್ದು, 7 ತಾಸುಗಳ ಜೆಸಿಬಿ ಕೆಲಸ ಮಾಡಿಸಿ ತಾತ್ಕಾಲಿಕವಾಗಿ ರಸ್ತೆ ದುರಸ್ಥಿ ಮಾಡಿಕೊಂಡಿದ್ದರು. ಇದೀಗ ಮಳೆ ಮುಗಿದ ಹಿನ್ನಲೆ ಭಾನುವಾರ ಡಾಂಬರು ರಸ್ತೆಗೆ ಮಣ್ಣು ಸುರುವಿದ ಜನ ಅಲ್ಲಿ ಶ್ರಮದಾನ ಮಾಡಿದ್ದಾರೆ. ಈವರೆಗೆ 77 ಸಾವಿರ ರೂ ಹಣ ಜಮಾ ಆಗಿದ್ದು, ಆ ಹಣದಲ್ಲಿ ರಸ್ತೆಗೆ ಮಣ್ಣು ಹಾಕುವ ಕೆಲಸ ಶುರುವಾಗಿದೆ. ಭಾನುವಾರ 12 ಮಹಿಳೆಯರನ್ನು ಒಳಗೊಂಡು 30ಕ್ಕೂ ಅಧಿಕ ಜನ ಭಾಗವಹಿಸಿ ಶ್ರಮದಾನ ಮಾಡಿದ್ದಾರೆ.

ಇದನ್ನೂ ಓದಿ: ಜೋಳಿಗೆ ತುಂಬ ಜನರ ಅನುದಾನ

ಈ ದಿನ ನಡೆದ ಕೆಲಸಕ್ಕೆ ಗೃಹಲಕ್ಷ್ಮಿ ಹಣ ನೀಡಿದ್ದಲ್ಲದೇ, ಶ್ರಮದಾನಕ್ಕೆ ಬಂದವರಿಗೆ ಊಟೋಪಚಾರದ ವ್ಯವಸ್ಥೆಯನ್ನು ಸಹ ಮಹಾಲಕ್ಷ್ಮಿಯರು ವಹಿಸಿಕೊಂಡಿದ್ದರು. ಪ್ರಸ್ತುತ ಎರಡು ಟಿಪ್ಪರ್ ಹಾಗೂ ಎರಡು ಜೆಸಿಬಿ ಮೂಲಕ ರಸ್ತೆಗೆ ಮಣ್ಣು ಹಾಕಿ ಸಮದಟ್ಟು ಮಾಡುವ ಕೆಲಸ ನಡೆಯುತ್ತಿದ್ದು, ಕಾರ್ಮಿಕರಿಗೆ ಹಾಗೂ ಊರಿನವರಿಗೆ ಮಹಿಳಾ ಮಂಡಳದವರು ಮಧ್ಯಾಹ್ನದ ಸಿಹಿ ಊಟ ಬಡಿಸಿದರು.

ಇದನ್ನೂ ಓದಿ: ಹೊಗಳುಭಟ್ಟರಿಗೆ ಸಿಕ್ಕಿಲ್ಲ ಹೊಂಡ ಮುಚ್ಚುವ ಹಣ!

ಇನ್ನೂ ಸೋಮವಾರ ಸಹ ಊರಿನವರ ಶ್ರಮದಾನ ಮುಂದುವರೆಯಲಿದೆ. ಸೋಮವಾರ ಇನ್ನಷ್ಟು ಜನ ಆಗಮಿಸಿ ರಸ್ತೆ ದುರಸ್ಥಿ ಕಾರ್ಯಕ್ಕೆ ಕೈ ಜೋಡಿಸುವ ಭರವಸೆ ನೀಡಿದ್ದಾರೆ.

 

ShareSendTweetShare
Previous Post

ಹಣ್ಣು ವ್ಯಾಪಾರಿಯ ಗಾಂಜಾ ವ್ಯವಹಾರ!

Next Post

ಈ ಪೊಲೀಸರಿಗೆ ಭಾನುವಾರವೂ ಬಿಡುವಿಲ್ಲ: ಒಂದೇ ದಿನ ಎರಡು ದಾಳಿ!

Next Post

ಈ ಪೊಲೀಸರಿಗೆ ಭಾನುವಾರವೂ ಬಿಡುವಿಲ್ಲ: ಒಂದೇ ದಿನ ಎರಡು ದಾಳಿ!

ಸಿಕ್ಕಿದ್ದು 3 ಸಾವಿರ: ಹೋಗಿದ್ದು 37 ಸಾವಿರ | ಎಟಿಎಂ ಒಳಗೆ ಬೇಡ ಅನ್ಯರ ಪ್ರವೇಶ!

ಮನೆ ಕಟ್ಟುವ ಕೆಲಸಕ್ಕೆ ವಿಘ್ನ: ಚೀರೆಕಲ್ಲು ಗುಡ್ಡಕ್ಕೆ ಗುದ್ದಿದ ಲಾರಿ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.