6
  • Latest

ಬಿಸಗೋಡು ರಸ್ತೆಗೂ ಗೃಹಲಕ್ಷ್ಮಿ ಹಣ!

ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆಗೆ LIC ಗೋಲ್ಡನ್ ಜ್ಯೂಬಿಲಿ ಫೌಂಡೇಶನ್‌ನಿಂದ 4.31 ಕೋಟಿ ಮೌಲ್ಯದ ಯಂತ್ರಗಳ ದೇಣಿಗೆ!

ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆಗೆ LIC ಗೋಲ್ಡನ್ ಜ್ಯೂಬಿಲಿ ಫೌಂಡೇಶನ್‌ನಿಂದ 4.31 ಕೋಟಿ ಮೌಲ್ಯದ ಯಂತ್ರಗಳ ದೇಣಿಗೆ!

ಸಾಮಾಜಿಕ ಜವಾಬ್ದಾರಿ ಸಹಭಾಗಿತ್ವದ ಮೂಲಕ ಸಿ ಆರ್‌ ಪಿ ಎಫ್ ಆವರಣದಲ್ಲಿ ನೂತನ ಕೆರೆ ನಿರ್ಮಾಣ

ಸಾಮಾಜಿಕ ಜವಾಬ್ದಾರಿ ಸಹಭಾಗಿತ್ವದ ಮೂಲಕ ಸಿ ಆರ್‌ ಪಿ ಎಫ್ ಆವರಣದಲ್ಲಿ ನೂತನ ಕೆರೆ ನಿರ್ಮಾಣ

ಮೈಸೂರು: ಮೆಡಾಲ್ ಕ್ಲುಮ್ಯಾಕ್ಸ್ ಡಯಾಗ್ನೋಸ್ಟಿಕ್ಸ್‌ ಉದ್ಘಾಟನೆ

ಮೈಸೂರು: ಮೆಡಾಲ್ ಕ್ಲುಮ್ಯಾಕ್ಸ್ ಡಯಾಗ್ನೋಸ್ಟಿಕ್ಸ್‌ ಉದ್ಘಾಟನೆ

ADVERTISEMENT
  • Home
Wednesday, April 1, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಬಿಸಗೋಡು ರಸ್ತೆಗೂ ಗೃಹಲಕ್ಷ್ಮಿ ಹಣ!

AchyutKumar by AchyutKumar
in ಸ್ಥಳೀಯ
advt advt advt
ADVERTISEMENT

ಯಲ್ಲಾಪುರ: ಸಂಪೂರ್ಣ ಹದಗೆಟ್ಟ ಬಿಸಗೋಡು ರಸ್ತೆ ದುರಸ್ಥಿಗಾಗಿ ನಡೆದ `ಜೋಳಿಗೆ ಅಭಿಯಾನ’ಕ್ಕೆ ಜನರ ಸ್ಪಂದನೆ ದೊರೆತಿದೆ. ಅದರಲ್ಲಿಯೂ ಆ ಭಾಗದ ಮಹಿಳೆಯರು ಉದಾರ ಮನಸ್ಸಿನಿಂದ ದೇಣಿಗೆ ನೀಡಿದ್ದಾರೆ. ಕೆಲವರು ತಮ್ಮ ಖಾತೆಗೆ ಜಮಾ ಆದ ಗೃಹಲಕ್ಷ್ಮಿ ಹಣವನ್ನು ರಸ್ತೆ ರಿಪೇರಿಗಾಗಿ ತೆಗೆದು ಕೊಟ್ಟಿದ್ದಾರೆ!

ಬಿಸಗೋಡಿಗೆ ತೆರಳುವ 2ಕಿಮೀ ರಸ್ತೆ ದುರಸ್ಥಿಗಾಗಿ ಊರಿನ ಜನ ಸ್ಥಳೀಯ ಆನಗೋಡು ಗ್ರಾಮ ಪಂಚಾಯತದಿoದ ಹಿಡಿದು ಶಾಸಕ-ಸಚಿವ-ಸಂಸದರವರೆಗೆ ಮನವಿ ಮಾಡಿದ್ದರು. ಆದರೆ, ಈ ರಸ್ತೆ ಅಭಿವೃದ್ಧಿಗೆ ಸರ್ಕಾರದಿಂದ ಕಿಂಚಿತ್ತು ನೆರವು ಸಿಕ್ಕಿರಲಿಲ್ಲ. ಮಳೆಗಾಲದಲ್ಲಿನ ನೀರು ಹೊಂಡಗಳಲ್ಲಿ ತುಂಬಿದ ಕಾರಣ ಅಪಾಯ ಹೆಚ್ಚಿದ್ದು, ಸಾಕಷ್ಟು ಅಪಘಾತಗಳು ನಡೆದಿದ್ದವು. ಅಪಘಾತ ಪ್ರಮಾಣ ತಗ್ಗಿಸುವುದಕ್ಕಾಗಿ ಗ್ರಾಮಸ್ಥರೆಲ್ಲರೂ ಸೇರಿ `ಜೋಳಿಗೆ ಅಭಿಯಾನ’ ನಡೆಸಿದ್ದರು.

ADVERTISEMENT
ADVERTISEMENT

ಇದನ್ನೂ ಓದಿ: ನಿಧಾನವಾಗಿ ಬನ್ನಿ.. ಇದು ಬಿಸಗೋಡು ರಸ್ತೆ!

ಮೊದಲ ಹಂತವಾಗಿ 32850ರೂ ದೇಣಿಗೆ ದೊರೆತಿದ್ದು, 7 ತಾಸುಗಳ ಜೆಸಿಬಿ ಕೆಲಸ ಮಾಡಿಸಿ ತಾತ್ಕಾಲಿಕವಾಗಿ ರಸ್ತೆ ದುರಸ್ಥಿ ಮಾಡಿಕೊಂಡಿದ್ದರು. ಇದೀಗ ಮಳೆ ಮುಗಿದ ಹಿನ್ನಲೆ ಭಾನುವಾರ ಡಾಂಬರು ರಸ್ತೆಗೆ ಮಣ್ಣು ಸುರುವಿದ ಜನ ಅಲ್ಲಿ ಶ್ರಮದಾನ ಮಾಡಿದ್ದಾರೆ. ಈವರೆಗೆ 77 ಸಾವಿರ ರೂ ಹಣ ಜಮಾ ಆಗಿದ್ದು, ಆ ಹಣದಲ್ಲಿ ರಸ್ತೆಗೆ ಮಣ್ಣು ಹಾಕುವ ಕೆಲಸ ಶುರುವಾಗಿದೆ. ಭಾನುವಾರ 12 ಮಹಿಳೆಯರನ್ನು ಒಳಗೊಂಡು 30ಕ್ಕೂ ಅಧಿಕ ಜನ ಭಾಗವಹಿಸಿ ಶ್ರಮದಾನ ಮಾಡಿದ್ದಾರೆ.

Advertisement. Scroll to continue reading.

ಇದನ್ನೂ ಓದಿ: ಜೋಳಿಗೆ ತುಂಬ ಜನರ ಅನುದಾನ

ಈ ದಿನ ನಡೆದ ಕೆಲಸಕ್ಕೆ ಗೃಹಲಕ್ಷ್ಮಿ ಹಣ ನೀಡಿದ್ದಲ್ಲದೇ, ಶ್ರಮದಾನಕ್ಕೆ ಬಂದವರಿಗೆ ಊಟೋಪಚಾರದ ವ್ಯವಸ್ಥೆಯನ್ನು ಸಹ ಮಹಾಲಕ್ಷ್ಮಿಯರು ವಹಿಸಿಕೊಂಡಿದ್ದರು. ಪ್ರಸ್ತುತ ಎರಡು ಟಿಪ್ಪರ್ ಹಾಗೂ ಎರಡು ಜೆಸಿಬಿ ಮೂಲಕ ರಸ್ತೆಗೆ ಮಣ್ಣು ಹಾಕಿ ಸಮದಟ್ಟು ಮಾಡುವ ಕೆಲಸ ನಡೆಯುತ್ತಿದ್ದು, ಕಾರ್ಮಿಕರಿಗೆ ಹಾಗೂ ಊರಿನವರಿಗೆ ಮಹಿಳಾ ಮಂಡಳದವರು ಮಧ್ಯಾಹ್ನದ ಸಿಹಿ ಊಟ ಬಡಿಸಿದರು.

ಇದನ್ನೂ ಓದಿ: ಹೊಗಳುಭಟ್ಟರಿಗೆ ಸಿಕ್ಕಿಲ್ಲ ಹೊಂಡ ಮುಚ್ಚುವ ಹಣ!

Advertisement. Scroll to continue reading.

ಇನ್ನೂ ಸೋಮವಾರ ಸಹ ಊರಿನವರ ಶ್ರಮದಾನ ಮುಂದುವರೆಯಲಿದೆ. ಸೋಮವಾರ ಇನ್ನಷ್ಟು ಜನ ಆಗಮಿಸಿ ರಸ್ತೆ ದುರಸ್ಥಿ ಕಾರ್ಯಕ್ಕೆ ಕೈ ಜೋಡಿಸುವ ಭರವಸೆ ನೀಡಿದ್ದಾರೆ.

 

ShareSendTweetShare
ADVERTISEMENT
Previous Post

ಹಣ್ಣು ವ್ಯಾಪಾರಿಯ ಗಾಂಜಾ ವ್ಯವಹಾರ!

Next Post

ಈ ಪೊಲೀಸರಿಗೆ ಭಾನುವಾರವೂ ಬಿಡುವಿಲ್ಲ: ಒಂದೇ ದಿನ ಎರಡು ದಾಳಿ!

Next Post

ಈ ಪೊಲೀಸರಿಗೆ ಭಾನುವಾರವೂ ಬಿಡುವಿಲ್ಲ: ಒಂದೇ ದಿನ ಎರಡು ದಾಳಿ!

ಸಿಕ್ಕಿದ್ದು 3 ಸಾವಿರ: ಹೋಗಿದ್ದು 37 ಸಾವಿರ | ಎಟಿಎಂ ಒಳಗೆ ಬೇಡ ಅನ್ಯರ ಪ್ರವೇಶ!

ಮನೆ ಕಟ್ಟುವ ಕೆಲಸಕ್ಕೆ ವಿಘ್ನ: ಚೀರೆಕಲ್ಲು ಗುಡ್ಡಕ್ಕೆ ಗುದ್ದಿದ ಲಾರಿ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.