6
  • Latest

ನಗರವಾಸಿಗಳಿಗೆ ವನ್ಯಜೀವಿ ಕಾಟ: ಆನೆ ಹೊಯ್ತು.. ಚಿರತೆ ಬಂತು!

ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆಗೆ LIC ಗೋಲ್ಡನ್ ಜ್ಯೂಬಿಲಿ ಫೌಂಡೇಶನ್‌ನಿಂದ 4.31 ಕೋಟಿ ಮೌಲ್ಯದ ಯಂತ್ರಗಳ ದೇಣಿಗೆ!

ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆಗೆ LIC ಗೋಲ್ಡನ್ ಜ್ಯೂಬಿಲಿ ಫೌಂಡೇಶನ್‌ನಿಂದ 4.31 ಕೋಟಿ ಮೌಲ್ಯದ ಯಂತ್ರಗಳ ದೇಣಿಗೆ!

ಸಾಮಾಜಿಕ ಜವಾಬ್ದಾರಿ ಸಹಭಾಗಿತ್ವದ ಮೂಲಕ ಸಿ ಆರ್‌ ಪಿ ಎಫ್ ಆವರಣದಲ್ಲಿ ನೂತನ ಕೆರೆ ನಿರ್ಮಾಣ

ಸಾಮಾಜಿಕ ಜವಾಬ್ದಾರಿ ಸಹಭಾಗಿತ್ವದ ಮೂಲಕ ಸಿ ಆರ್‌ ಪಿ ಎಫ್ ಆವರಣದಲ್ಲಿ ನೂತನ ಕೆರೆ ನಿರ್ಮಾಣ

ಮೈಸೂರು: ಮೆಡಾಲ್ ಕ್ಲುಮ್ಯಾಕ್ಸ್ ಡಯಾಗ್ನೋಸ್ಟಿಕ್ಸ್‌ ಉದ್ಘಾಟನೆ

ಮೈಸೂರು: ಮೆಡಾಲ್ ಕ್ಲುಮ್ಯಾಕ್ಸ್ ಡಯಾಗ್ನೋಸ್ಟಿಕ್ಸ್‌ ಉದ್ಘಾಟನೆ

ADVERTISEMENT
  • Home
Monday, March 30, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ನಗರವಾಸಿಗಳಿಗೆ ವನ್ಯಜೀವಿ ಕಾಟ: ಆನೆ ಹೊಯ್ತು.. ಚಿರತೆ ಬಂತು!

AchyutKumar by AchyutKumar
in ಸ್ಥಳೀಯ
advt advt advt
ADVERTISEMENT

ಶಿರಸಿ: ಅಧಿಕ ಪ್ರಮಾಣದಲ್ಲಿ ಕಾಡು ಹೊಂದಿರುವ ಉತ್ತರ ಕನ್ನಡ ಜಿಲ್ಲೆಗೆ ವನ್ಯಜೀವಿಗಳು ಹೊಸತಲ್ಲ. ಆದರೆ, ಕಾಡಿನಲ್ಲಿರಬೇಕಾದ ಪ್ರಾಣಿಗಳು ನಾಡಿಗೆ ಲಗ್ಗೆ ಇಡುತ್ತಿರುವುದನ್ನು ಜನರಿಂದ ಸಹಿಸಿಕೊಳ್ಳಲಾಗುತ್ತಿಲ್ಲ!

ಕಳೆದ ಮೂರು ದಿನಗಳ ಹಿಂದೆ ಶಿರಸಿ ಸುತ್ತಲಿನ ಪ್ರದೇಶದಲ್ಲಿ ಕಾಡಾನೆ ಕೊಟ್ಟ ಕಾಟ ಅಷ್ಟಿಷ್ಟಲ್ಲ. ಅರಣ್ಯ ಸಿಬ್ಬಂದಿ ಜೊತೆ ಸ್ಥಳೀಯರು ಸೇರಿ ಆನೆ ನಗರ ಪ್ರವೇಶಿಸದಂತೆ ಪ್ರಯತ್ನಿಸಿದರು. ರಾತ್ರಿಯಿಡಿ ಕಾದರೂ ಕಾಡಾನೆಗಳ ರಂಪಾಟ ಕಡಿಮೆಯಾಗಿರಲಿಲ್ಲ.

ADVERTISEMENT
ADVERTISEMENT

ಅಂಬಾಗಿರಿ, ಗಾಂಧಿನಗರ, ರಾಮನಬೈಲ್, ಬನವಾಸಿ ರಸ್ತೆ, ತೋಟಗಾರಿಕಾ ಕಾಲೇಜು ಕಡೆ ಆನೆ ಸಂಚಾರ ನಡೆಸಿತು. ಬನವಾಸಿ ರಸ್ತೆಯ ಪೆಡಂಬೂಲ್ ಸಮೀಪದ ತೋಟಗಾರಿಕಾ ಕಾಲೇಜು ಸುತ್ತ ತಿರುಗಾಡುತ್ತಲಿತ್ತು. ತವರುಮನೆ ತೋಟದಲ್ಲಿ ಕಾಡಾನೆ ಠಿಕಾಣಿ ಹೂಡಿ ಆತಂಕ ಮೂಡಿಸಿತು. ಬನವಾಸಿ ರಸ್ತೆಯ ರೇಷ್ಮೆ ಇಲಾಖೆ ಅಕ್ಕ-ಪಕ್ಕದಲ್ಲಿ ಕಾಡಾನೆಗಳು ಕಾಣಿಸಿದವು. ಕುಳುವೆ ರಸ್ತೆ, ತೆರಕನಳ್ಳಿ ಕಾಡಿನ ಹಾದಿಯಲ್ಲಿ ಆನೆ ಸಂಚಾರದ ಕುರುಹುಗಳಿದ್ದವು. ಕೊನೆಗೆ ಕೆರೆಗೈ, ಗಡಳ್ಳಿ ಭಾಗಗಳಲ್ಲಿ ಸಂಚರಿಸಿ ಕಾಡು ಸೇರಿತು.

Advertisement. Scroll to continue reading.
Advertisement. Scroll to continue reading.

ಪ್ರಸ್ತುತ ತಾತ್ಕಾಲಿಕವಾಗಿ ಕಾಡಾನೆ ಆತಂಕ ದೂರವಾಗಿದೆ. ಅರಣ್ಯ ಸಿಬ್ಬಂದಿ ಸಹ ಆನೆ ಓಡಿಸುವ ಸಾಹಸದಲ್ಲಿ ಒಮ್ಮೆ ಯಶಸ್ವಿಯಾಗಿದ್ದು, ಇದೀಗ ಅರಣ್ಯ ಇಲಾಖೆಗೆ ಇನ್ನೊಂದು ತಲೆನೋವು ಶುರುವಾಗಿದೆ. ಜನವಸತಿ ಹಾಗೂ ಜನ ಓಡಾಡುವ ರಸ್ತೆ ಮಾರ್ಗವಾಗಿ ರಾಜಾರೋಷವಾಗಿ ಚಿರತೆಗಳು ಸಂಚರಿಸುತ್ತಿವೆ. ಹೀಗಾಗಿ ವನ್ಯಪ್ರಾಣಿಗಳ ಆಗಮನದಿಂದ ಜನ ಭಯಭೀತರಾಗಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಆನೆ ಹಾಗೂ ಚಿರತೆ ದಾಳಿಯಿಂದ ಮಾನವನ ಜೀವ ಹೋದ ಪ್ರಕರಣಗಳು ಅಷ್ಟಿಲ್ಲ. ಅದಾಗಿಯೂ ಆಕ್ರಮಣಕಾರಿ ಜೀವಿಗಳಲ್ಲಿನ ಆತಂಕ ಮನುಷ್ಯನಿಗೆ ತೊಂದರೆ ಮಾಡಲ್ಲ ಎನ್ನುವ ಹಾಗಿಲ್ಲ. ರಾತ್ರಿ ವೇಳೆ ಸಂಚರಿಸುವವರಿಗೆ ಚಿರತೆ ರಸ್ತೆಗೆ ಅಡ್ಡಲಾಗಿ ಕಾಣುತ್ತಿದೆ. ಬೆಳಕು ಬಂದ ದಿಕ್ಕಿನಲ್ಲಿಯೇ ಚಿರತೆಯೂ ಓಡುವ ವಿಡಿಯೋ ವೈರಲ್ ಆಗಿದೆ.

ಬನದಗೋಡಿನ ಪರಮೇಶ್ವರ್ ಅವರು ಸಂಚರಿಸುತ್ತಿದ್ದಾಗ ಚಿರತೆ ಕಾಣಿಸಿದ್ದು, ಅದರ ಚಲನ-ವಲನವನ್ನು ಮೊಬೈಲಿನಲ್ಲಿ ಸೆರೆ ಹಿಡಿದಿದ್ದಾರೆ. ಸುಗ್ಗಾವಿ-ಬಿದ್ರಳ್ಳಿ ರಸ್ತೆಯಲ್ಲಿ ಕಳೆದ ಆರು ದಿನಗಳಿಂದ ಚಿರತೆ ಓಡಾಟದ ಬಗ್ಗೆ ಜನ ಅರಣ್ಯ ಇಲಾಖೆಗೆ ದೂರಿದ್ದಾರೆ. ಅರಣ್ಯ ಸಿಬ್ಬಂದಿ ಆ ಬಗ್ಗೆಯೂ ತಲೆಕೆಡಿಸಿಕೊಂಡಿದ್ದು, ಚಿರತೆಯನ್ನು ಅಲ್ಲಿಂದ ಓಡಿಸಲು ನಾನಾ ತಂತ್ರ ಅನುಸರಿಸಿದ್ದಾರೆ.

ShareSendTweetShare
ADVERTISEMENT
Previous Post

ತರಬೇತಿ ಜೊತೆ ಸಂಬಳ: ಪತ್ರಕರ್ತರಾಗಲು ಇಲ್ಲಿದೆ ಒಂದು ಅವಕಾಶ!

Next Post

ಪೊಲೀಸ್ ಠಾಣೆಯಲ್ಲಿ ಬಾಲ್‌ಪೆನ್ನುಗಳ ರಾಶಿ!

Next Post

ಪೊಲೀಸ್ ಠಾಣೆಯಲ್ಲಿ ಬಾಲ್‌ಪೆನ್ನುಗಳ ರಾಶಿ!

ದನಕ್ಕೆ ಬೆದರಿ ಗದ್ದೆಗೆ ಹಾರಿದ ಲಾರಿ!

ಮಂಜುಗುಣಿ-ಗoಗಾವಳಿ ಸೇತುವೆ ಕೆಲಸ ಅಪೂರ್ಣ

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.