ಉತ್ತರ ಕನ್ನಡ ಜಿಲ್ಲೆಯಲ್ಲಿನ ಮಟ್ಕಾ ಅಡ್ಡೆಗಳ ಮೇಲೆ ಪೊಲೀಸರ ದಾಳಿ ಮುಂದುವರೆದಿದೆ. ಶಿರಸಿಯ ಬನವಾಸಿ, ಕುಮಟಾ ತಾಲೂಕಿನ ಗೋಕರ್ಣ ಹಾಗೂ ಯಲ್ಲಾಪುರದ ಉಪಳೇಶ್ವರದಲ್ಲಿ ಜೂಜಾಟ ನಡೆಸುತ್ತಿದ್ದವರ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ.
ಸೋಮವಾರ ಸಂಜೆ ಬನವಾಸಿ ಬಳಿಯ ಚಂದ್ರು ಗಣಪತಿ ನಾಯ್ಕ (34) ಎಂಬಾತ ಶಿರಸಿಯ ಉದಯ ಶೆಟ್ಟಿ ಜೊತೆ ಸೇರಿ ಬಾಶಿ ಬಸ್ ನಿಲ್ದಾಣದ ಬಳಿಯ ಕಚ್ಚಾ ರಸ್ತೆಯಲ್ಲಿ ನಿಂತು ಮಟ್ಕಾ ಆಡಿಸುತ್ತಿದ್ದ. ಪಿಎಸ್ಐ ಚಂದ್ರಕಲಾ ಪತ್ತಾರ್ ದಾಳಿ ನಡೆಸಿದಾಗ ಸಂಖ್ಯೆ ಬರೆದುಕೊಳ್ಳುತ್ತಿದ್ದ ಚೀಟಿ ಹಾಗೂ ಬಾಲ್ ಪೆನ್ ಸಿಕ್ಕಿದೆ. ಅವರಿಬ್ಬರು ಜನರಿಂದ ಸಂಗ್ರಹಿಸಿದ್ದ 700ರೂ ಹಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಅಂಕೋಲಾ ಮೊರಬಾದ ನಾರಾಯಣ ಈಶ್ವರ ಪಟಗಾರ (44) ಸಹ ಮೊರಬಾ ಬಸ್ ನಿಲ್ದಾಣದ ಎದುರು ಜೂಜಾಡಿಸುತ್ತಿದ್ದಾಗ ಪೊಲೀಸರ ಬಳಿ ಸಿಕ್ಕಿಬಿದ್ದಿದ್ದು, ಆತ ಸಂಗ್ರಹಿಸಿದ್ದ 1400ರೂ ಹಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗೋಕರ್ಣ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ವಸಂತ್ ಆಚಾರ್ ಅವರು ಈತನ ಮೇಲೆ ದಾಳಿ ನಡೆಸಿ ಮಟ್ಕಾ ಸಾಮಗ್ರಿಗಳನ್ನು ಜಪ್ತು ಮಾಡಿದರು.
ಇನ್ನೂ ಯಲ್ಲಾಪುರ ತಾಲೂಕಿನ ಉಪಳೇಶ್ವರದಲ್ಲಿ ವಿಶ್ವನಾಥ ಕೃಷ್ಣ ಮರಾಠಿ (30) ಮಟ್ಕಾ ಆಡಿಸುತ್ತಿದ್ದಾಗ ಪಿಎಸ್ಐ ಶೇಡಜಿ ಚೌಹಾಣ್ ದಾಳಿ ಮಾಡಿದರು. ಬಸ್ ನಿಲ್ದಾಣದ ಎದುರು ನಿಂತಿದ್ದ ವಿಶ್ವನಾಥ ಅಲ್ಲಿ ಹೋಗಿ-ಬರುತ್ತಿದ್ದವರನ್ನು ಕರೆದು ಹಣ ಪಡೆಯುತ್ತಿದ್ದ. 1ರೂಪಾಯಿಗೆ 80ರೂಪಾಯಿ ನೀಡುವುದಾಗಿ ನಂಬಿಸಿ ಜನರಿಂದ 610ರೂಪಾಯಿ ಹಣ ಸಂಗ್ರಹಿಸಿದ್ದ. ಆ ಹಣ, ಚೀಟಿಗಳನ್ನು ತಾನೇ ಇರಿಸಿಕೊಳ್ಳುತ್ತಿದ್ದ. ಪೊಲೀಸರು ದಾಳಿ ನಡೆಸಿದಾಗ ಜನರಿಂದ ಸಂಗ್ರಹಿಸಿದ ಹಣದೊಂದಿಗೆ ಅಂಕೆ-ಸoಖ್ಯೆ ಬರೆದ ಚೀಟಿ, ಬಾಲ್ಪೆನ್ ಸಿಕ್ಕಿದೆ.




