ದಾಂಡೇಲಿ: ಜೊಯಿಡಾದ ವಿರ್ನೋಲಿ ಬಳಿಯ ಸದಾನಂದ ಮೋಹನ ಧರಣಿ (35) ಬಾವಿಗೆ ಬಿದ್ದು ಸಾವನಪ್ಪಿದ್ದಾರೆ.
ಸರಾಯಿ ಕುಡಿಯುವ ಚಟಕ್ಕೆ ಅಂಟಿಕೊoಡಿದ್ದ ಅವರು ಈಚೆಗೆ ಮಾನಸಿಕ ಅಸ್ವಸ್ಥರಂತೆ ವರ್ತಿಸುತ್ತಿದ್ದರು. ಜೀವನದಲ್ಲಿ ಜಿಗುಪ್ಸೆಗೆ ಒಳಗಾಗಿದ್ದರು. ನ 9ರಂದು ರಾಮಾ ಸದಾನಂದ ಧರಣಿ ಅವರ ತೋಟಕ್ಕೆ ಹೋಗಿದ್ದ ಅವರು ಅಲ್ಲಿದ್ದ ಬಾವಿಗೆ ಬಿದ್ದಿದ್ದಾರೆ.
ಎಷ್ಟು ಹೊತ್ತು ಕಳೆದರೂ ಮನೆಗೆ ಬಾರದ ಹಿನ್ನಲೆ ಅವರ ತಾಯಿ ಶಾಂತಿ ಧರಣಿ ಹುಡುಕಾಡಿದ್ದು, ಪತ್ತೆ ಆಗಿರಲಿಲ್ಲ. ನ 12ರಂದು ತೋಟದ ಬಾವಿಯಲ್ಲಿ ಶವ ಸಿಕ್ಕಿದೆ. ಈ ಬಗ್ಗೆ ಶಾಂತಿ ಅವರು ಪೊಲೀಸರಿಗೆ ಮಾಹಿತಿ ನೀಡಿ, ಪ್ರಕರಣ ದಾಖಲಿಸಿದ್ದಾರೆ.




