ಕಾರವಾರ: ನಿಷೇಧಿತ ಪ್ಲಾಸ್ಟಿಕ್ ಬಳಕೆ ಮಾಡುತ್ತಿದ್ದ ಅಂಗಡಿಕಾರರಿಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯವರು ಬಿಸಿ ಮುಟ್ಟಿಸಿದ್ದಾರೆ.
ಕಾರವಾರ ನಗರಸಭೆಯ ವ್ಯಾಪ್ತಿಯಲ್ಲಿ ದಾಳಿ ನಡೆಸಿದ ಪರಿಸರ ಅಧಿಕಾರಿ ಬಿ ಕೆ ಸಂತೋಷ, ಆರೋಗ್ಯ ನಿರೀಕ್ಷಕ ಯಾಕೂಬ ಶೇಖ, ಆರೋಗ್ಯ ನಿರೀಕ್ಷಕಿ ದೀಪಾ ಎಮ್ ಶೆಟ್ಟಿ, ಪ್ರಮುಖರಾದ ಸಂತೋಷ್ ಗೋವೆಕರ ಅವರ ತಂಡ ಅಲ್ಲಲ್ಲಿ ದಾಳಿ ನಡೆಸಿ ಪ್ಲಾಸ್ಟಿಕ್ ರಾಶಿಗಳನ್ನು ವಶಕ್ಕೆ ಪಡೆದರು.
25ಕ್ಕೂ ಅಧಿಕ ಅಂಗಡಿಗಳ ಮೇಲೆ ದಾಳಿ ನಡೆಸಿದಾಗ 72 ಕೆಜಿ ಪ್ಲಾಸ್ಟಿಕ್ ಸಿಕ್ಕಿದೆ. ಒಟ್ಟು 6200ರೂ ದಂಡವನ್ನು ಅಧಿಕಾರಿಗಳು ವಿಧಿಸಿ ಎಚ್ಚರಿಕೆ ನೀಡಿದರು. ಪ್ಲಾಸ್ಟಿಕ್ ಬದಲು ಬಟ್ಟೆ ಚೀಲ ಬಳಸುವಂತೆ ಪರಿಸರ ಅಧಿಕಾರಿ ಬಿ.ಕೆ. ಸಂತೋಷ್ ತಿಳಿಸಿದರು. ನಗರಸಭೆ ಅಧ್ಯಕ್ಷ ರವಿರಾಜ ಚಂದ್ರಹಾಸ ಅಂಕೋಲೆಕರ, ನಗರ ಸಭೆ ಪೌರಾಯುಕ್ತ ಜಗದೀಶ ಬಿ ಹುಲಗೆಜ್ಜಿ ಇದ್ದರು.
ಉಪಸ್ಥಿತರಿದ್ದರು.




