6
  • Latest

ಜಲ ಜೀವನ | ಕೋಟಿ ಖರ್ಚು ಮಾಡಿದರೂ ಕುಡಿಯಲು ನೀರಿಲ್ಲ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Friday, February 13, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಜಲ ಜೀವನ | ಕೋಟಿ ಖರ್ಚು ಮಾಡಿದರೂ ಕುಡಿಯಲು ನೀರಿಲ್ಲ!

ಟಾಕಿಯೂ ಇದೆ.. ನಲ್ಲಿಯೂ ಇದೆ... ಆದರೆ, ನೀರು ಮಾತ್ರ ಬರಲ್ಲ!

AchyutKumar by AchyutKumar
November 14, 2024
in ಸ್ಥಳೀಯ
advt advt advt
ADVERTISEMENT

ಯಲ್ಲಾಪುರ: ಮದನೂರು ಗ್ರಾ ಪಂ ವ್ಯಾಪ್ತಿಯ ಅಲ್ಕೇರಿ ಗೌಳಿವಾಡದಲ್ಲಿ ಮೂರು ವರ್ಷದ ಹಿಂದೆ ನೀರಿನ ಟಾಕಿ ನಿರ್ಮಿಸಲಾಗಿದೆ. ಎರಡು ವರ್ಷದ ಹಿಂದೆ ಪೈಪ್‌ಲೈನ್ ಹುಗಿದು ಮನೆ ಮನೆಗೂ ನಲ್ಲಿ ಅಳವಡಿಸಲಾಗಿದೆ. ಆದರೆ, ಈವರೆಗೂ ಒಂದು ಹನಿ ನೀರು ಸಹ ಪೂರೈಕೆಯಾಗಿಲ್ಲ!

ಪ್ರತಿ ವರ್ಷ ಬೇಸಿಗೆಯಲ್ಲಿ ಈ ಭಾಗದ ಜನ ಕುಡಿಯುವ ನೀರಿನ ಸಮಸ್ಯೆ ಅನುಭವಿಸುತ್ತಿದ್ದಾರೆ. ಸಮಸ್ಯೆ ಬಗ್ಗೆ ಅಲ್ಲಿನವರು ಹೋರಾಟ ನಡೆಸಿದ ಪರಿಣಾಮ ಜಲಜೀವನ್ ಮಿಷನ್ ಯೋಜನೆಗೆ ಅಧಿಕಾರಿಗಳು ಕ್ರಿಯಾಯೋಜನೆ ರೂಪಿಸಿದರು. ಕಾಮಗಾರಿ ಕುಂಟುತ್ತ ಸಾಗಿದರೂ ಜನ `ಮುಂದಿನ ವರ್ಷವಾದರೂ’ ನೀರು ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದರು. ಆದರೆ, ಎಲ್ಲಾ ಕೆಲಸ ಮುಗಿದು ಮೂರು ವರ್ಷ ಕಳೆದರೂ ನೀರು ಸಿಕ್ಕಿಲ್ಲ. ಜನರ ಸಮಸ್ಯೆಯೂ ಬಗೆಹರಿದಿಲ್ಲ!

Advertisement. Scroll to continue reading.
ADVERTISEMENT
ADVERTISEMENT

ಕಾಮಗಾರಿ ಶುರು ಮಾಡುವ ಮುನ್ನ ಅಧಿಕಾರಿಗಳು ಜಲ ಶೋಧ ನಡೆಸಿಲ್ಲ. ನೀರಿನ ಮೂಲ ಹುಡುಕದೇ ಅಲ್ಲಿ ಟ್ಯಾಂಕ್ ನಿರ್ಮಿಸಿದರು. ಪೈಪ್‌ಲೈನ್ ಎಳೆದರು. ಮನೆ ಮನೆಗೆ ನಲ್ಲಿಯನ್ನು ಕೂರಿಸಿದರು. ಆದರೆ, ನೀರು ಸರಬರಾಜು ಮಾಡುವುದಕ್ಕಾಗಿ ಬೋರ್‌ವೆಲ್ ತೆಗೆದಾಗ ಮೂರು ಬೋರ್‌ವೆಲ್ ವಿಫಲವಾದವು. ಇದೇ ಕಾರಣದಿಂದ ಮಾಡಿದ ಕೆಲಸಗಳಿಗೆ ಗುತ್ತಿಗೆದಾರರಿಗೆ ಕಾಸು ಪಾವತಿಸಿದ ಅಧಿಕಾರಿಗಳು ನೀರು ಸರಬರಾಜು ಮಾಡುವುದನ್ನೇ ಮರೆತರು!

ಆ ಭಾಗದಲ್ಲಿ ಹಿಂದುಳಿದ ಗೌಳಿ ಸಮುದಾಯದವೇ ಹೆಚ್ಚಿದ್ದು, ನೀರಿಗಾಗಿ ಅವರೆಲ್ಲರೂ ನಿತ್ಯ ಕಾಯುತ್ತಿದ್ದರು. ಪೈಪ್‌ಲೈನ್ ಹಾಗೂ ನಲ್ಲಿ ಅಳವಡಿಕೆಗೆ ಬಂದ ಅಧಿಕಾರಿಗಳು ಮತ್ತೆ ಆ ಕಡೆ ಬರಲಿಲ್ಲ. ಕಚೇರಿಯಿಂದ ಕಚೇರಿ ಅಲೆದಾಟ ನಡೆಸಿದರೂ ಅಲ್ಲಿನವರಿಗೆ `ನೀರು ಕುಡಿಸುವ ಅಧಿಕಾರಿ’ ಯಾರು ಎಂದೇ ಗೊತ್ತಾಗಲಿಲ್ಲ.

Advertisement. Scroll to continue reading.

ನೀರಿನ ಸಮಸ್ಯೆ ತೀವ್ರವಾದಾಗ ಸಮೀಪದ ಶಾಲೆಯಿಂದ ನೀರು ತಂದರು. ಶಾಲೆಯಲ್ಲಿಯೂ ನೀರಿನ ಸಮಸ್ಯೆ ಎದುರಾದಾಗ ಸಂಕಷ್ಟಕ್ಕೆ ಸಿಲುಕಿದರು. ತಮ್ಮ ಸಮಸ್ಯೆಯ ಬಗ್ಗೆ ಊರಿನವರು ಅಲ್ಕೇರಿಯ ಜಯ ಕರ್ನಾಟಕ ಗ್ರಾಮೀಣ ಘಟಕ ಅಧ್ಯಕ್ಷ ಜಿಮ್ಮು ಜೋರೆ ಅವರ ಮೊರೆ ಹೋದರು. ಗುರುವಾರ ಜಯ ಕರ್ನಾಟಕ ಸಂಘದ ತಾಲೂಕಾಧ್ಯಕ್ಷ ವಿಲ್ಸನ್ ಫರ್ನಾಂಡಿಸ್ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗಕ್ಕೆ ತೆರಳಿ ವಿಚಾರಿಸಿದರು. ಮೂರು ವರ್ಷ ಕಳೆದರೂ ನೀರು ಕೊಡಲಾಗದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

`ಈ ಭಾಗದಲ್ಲಿ 70ಕ್ಕೂ ಅಧಿಕ ಮನೆಗಳಿಗೆ ಕುಡಿಯುವ ನೀರಿಲ್ಲ. ಕೋಟ್ಯಂತರ ರೂ ವೆಚ್ಚ ಮಾಡಿದರೂ ನೀರು ಪೂರೈಕೆ ಆಗಿಲ್ಲ’ ಎಂದು ಸಂಘಟನೆಯವರು ಆಕ್ರೋಶ ವ್ಯಕ್ತಪಡಿಸಿದರು. `ನೀರು ಸರಬರಾಜು ಮಾಡದೇ ಇದ್ದರೆ ಪ್ರತಿಭಟನೆ ನಡೆಸುತ್ತೇವೆ’ ಎಂದು ಎಚ್ಚರಿಸಿದರು. ಪ್ರಮುಖರಾದ ಜಾನು ಬಿಚ್ಚುಕುಲೆ, ಬಾಬು ಮಲ್ಗುಂಡೆ, ಜಾನು ಎಂಕರ್, ಸುಭಾಶ್ ಡಿ ಎಚ್, ಕೆ ಎಫ್ ಕಮಳನವರ್ ಇತರರು ಇದ್ದರು.

 

ShareSendTweetShare
ADVERTISEMENT
Previous Post

ಚಕ್ರಕ್ಕೆ ಸುತ್ತಿದ ಕೇಬಲ್: ಸ್ಕೂಟರ್ ಸವಾರನಿಗೆ ಗಾಯ

Next Post

ಗಡ ಗಡ ಎನ್ನುವ ಗುಂಡಿ: ಗುಂಡಿಗೆ ಗಟ್ಟಿ ಇದ್ದವರಿಗೆ ಮಾತ್ರ ಈ ರಸ್ತೆ!

Next Post

ಗಡ ಗಡ ಎನ್ನುವ ಗುಂಡಿ: ಗುಂಡಿಗೆ ಗಟ್ಟಿ ಇದ್ದವರಿಗೆ ಮಾತ್ರ ಈ ರಸ್ತೆ!

ಕಸ್ತೂರಿ ರಂಗನ್ ಜಾರಿಗೆ ವಿರೋಧ: ಕೇಂದ್ರದ ಮೇಲೆ ಒತ್ತಡ

ಗುಡುಗುಸಹಿತ ಮಳೆ | ಸಂತೆಗೆ ಬಂದವರಿಗೆ ಸಿಡಿಲ ಆಘಾತ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.