ಸಿದ್ದಾಪುರ: `ಕೇಂದ್ರ ಸರ್ಕಾರ ಕಸ್ತೂರಿ ರಂಗನ್ ವರದಿ ಸಂಪೂರ್ಣವಾಗಿ ತಿರಸ್ಕರಿಸಲು ಒಪ್ಪುವವರೆಗೂ ಅರಣ್ಯ ಅತಿಕ್ರಮಣದಾರರ ಹೋರಾಟ ನಿರಂತರ’ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಘೋಷಿಸಿದ್ದಾರೆ.
ಸಿದ್ದಾಪುರದ ಬಾಲಭವನದಲ್ಲಿ ಗುರುವಾರ ಸಭೆ ನಡೆಸಿ ಮಾತನಾಡಿದ ಅವರು `ಕೇಂದ್ರ ಸರ್ಕಾರವು ಕಸ್ತೂರಿರಂಗನ್ ವರದಿ ಸಂಪೂರ್ಣವಾಗಿ ತಿರಸ್ಕರಿಸಬೇಕು. ಸರ್ಕಾರದ ಮೇಲೆ ಒತ್ತಡ ತರಲು ಅರಣ್ಯವಾಸಿಗಳೆಲ್ಲರೂ ನ 21ರಂದು ಬೆಂಗಳೂರಿಗೆ ಬರಬೇಕು’ ಎಂದು ಕರೆ ನೀಡಿದರು.
`ಅರಣ್ಯ ಹಕ್ಕು ಕಾಯಿದೆ ಅರಣ್ಯವಾಸಿಗಳ ಪರವಾಗಿದೆ. ಮಂಜೂರಿ ಪ್ರಕ್ರಿಯೆಯಲ್ಲಿ ಇರುವ ಕಾನೂನಾತ್ಮಕ ಸಮಸ್ಯೆ ಬಗೆಹರಿಸಲು ಹೋರಾಟ ಅನಿವಾರ್ಯ’ ಎಂದರು. ಸಭೆಯಲ್ಲಿ ಮಾಬ್ಲೇಶ್ವರ ನಾಯ್ಕ ಸ್ವಾಗತಿಸಿದ್ದರು. ಕೆ.ಟಿ ನಾಯ್ಕ, ವಿನಾಯಕ ನಾಯ್ಕ, ಚೌಡು ತಿಮ್ಮಣ್ಣ ಗೌಡ್ರು, ಜಯಂತ ನಾಯ್ಕ, ರವೀಂದ್ರ ನಾಯ್ಕ, ಭಾಸ್ಕರ ನಾಯ್ಕ, ಮೋಹನ ನಾಯ್ಕ, ಹಜರಾ ಬೇಗಂ, ಮಂಜುಳಾ ನಾಯ್ಕ, ರಾಧಾ ಹಾಸಿಕಟ್ಟಾ, ತಿಮ್ಮಪ್ಪ ನಾಯ್ಕ, ಡಿ.ಕೆ. ಹಾಸಣಗಿ, ಮೋಹನಾ ನಾಯ್ಕ, ಕಾರ್ಲಿಸ್ ಫರ್ನಾಂಡಿಸ್, ಎ.ಬಿ ನಾಯ್ಕ, ರಾಮಚಂದ್ರ ನಾಯ್ಕ ಇದ್ದರು.




