ಕಾರವಾರ: ತಾಲೂಕಿನ ನಗೆ ಶಾಲೆಯಲ್ಲಿ ಗುರುವಾರ ಗಡ್ಡೆ ಗೆಣಸಿನ ಪಾಯಸ ಮಾಡಿದ್ದು, ಅದರ ಸವಿಗೆ ಮಕ್ಕಳು ಮನಸೋತರು.
ಅಂಕೋಲಾಗೆ ತೆರಳಿದ ಮುಖ್ಯ ಶಿಕ್ಷಕ ಅಖ್ತರ್ ಸೈಯದ್, ಅಲ್ಲಿಂದ ಬಗೆ ಬಗೆಯ ಗಡ್ಡೆಗಳನ್ನು ಶಾಲೆಗೆ ಹೊತ್ತು ತಂದರು. ಗಡ್ಡೆ-ಗೆಣಸಿನ ಮಹತ್ವ ಹಾಗೂ ಅದರ ಪೋಷಕಾಂಶಗಳ ಬಗ್ಗೆ ಮಕ್ಕಳಿಗೆ ವಿವರಿಸಿದ ಅವರು ಗಡ್ಡೆ-ಗೆಣಸುಗಳನ್ನು ಬಳಸಿಯೇ ವಿವಿಧ ಅಡಿಗೆ ತಯಾರಿಕೆಗೆ ಸೂಚಿಸಿದರು. ಮುಖ್ಯವಾಗಿ ಗೆಣಸಿನಿಂದ ಮಾಡಿದ ಪಾಯಸವನ್ನು ಮಕ್ಕಳ ಜೊತೆ ಶಿಕ್ಷಕರು ಸವಿದರು.

ಇದಕ್ಕೂ ಮುನ್ನ ಮಕ್ಕಳ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಸಹಶಿಕ್ಷಕಿ ರೂಪಾ ಉಮೇಶ ನಾಯ್ಕ, ಅತಿಥಿ ಶಿಕ್ಷಕಿ ರೇಷ್ಮಾ ಹುಲಸ್ವಾರ, ಕೈಗಾ ಯೊಜನೆಯ ಶಿಕ್ಷಕಿ ಪ್ರಿಯಾ ಲಾಂಜೇಕರ, ಅಡುಗೆ ಸಿಬ್ಬಂದಿ ಶೋಭಾ ಗಣಪತಿ ಗೌಡ, ಕಾಂಚನಾ ಜೈವಂತ ಗೌಡ, ಎಸ್ಡಿಎಂಸಿ ಅಧ್ಯಕ್ಷೆ ಲಲಿತಾ ದಿನೇಶ ಗೌಡ ಭಾಗವಹಿಸಿದ್ದರು.
ಲಕ್ಷ್ಮೀ ದಿನೇಶ ಗೌಡ ಅವರು ನೆಹರು ಬಗ್ಗೆ ಭಾಷಣ ಮಾಡಿ ಹಾಡು ಹಾಡಿದರು. ಪಾಯಸದಿಂದ ಕೂಡಿದ ಬಿಸಿಯೂಟದ ಜೊತೆ ಹೆಚ್ಚುವರಿ ಮೊಟ್ಟೆಗಳನ್ನು ಶಿಕ್ಷಕರು ವಿತರಿಸಿದರು. ಇದರೊಂದಿಗೆ ನೀಡಿದ ಗ್ರಾಮೀಣ ಭಾಗದ ತಿನಿಸುಗಳನ್ನು ಮಕ್ಕಳು ಖುಷಿಯಿಂದ ಆಹ್ವಾದಿಸಿದರು.




