ದಾಂಡೇಲಿ: ಜೆ ಎನ್ ರಸ್ತೆಯಲ್ಲಿ ತುಂಡಾಗಿ ಬಿದ್ದಿದ್ದ ಕೇಬಲ್’ಗೆ ಬೈಕ್ ಚಕ್ರ ಸುತ್ತಿಕೊಂಡ ಪರಿಣಾಮ ಅಪಘಾತ ನಡೆದಿದೆ.
ಶ್ರೀ ಲಾಡ್ಜ್ ಮುಂಭಾಗ ವಿದ್ಯುತ್ ಕಂಬದ ಮೂಲಕ ಹಾದು ಹೋದ ಕೇಬಲ್ ವೈಯರ್ ತುಂಡಾಗಿ ಬಿದ್ದಿದೆ. ಒಂದು ವಾರ ಕಳೆದರೂ ಅದನ್ನು ಯಾರೂ ಗಮನಿಸಿಲ್ಲ. ಜೋತುಬಿದ್ದ ವೈಯರನ್ನು ಸಹ ಮರು ಜೋಡಿಸಿಲ್ಲ. ಈ ಮಾರ್ಗವಾಗಿ ಬರುತ್ತಿದ್ದ ದೀಪಕ ವರ್ಣೇಕರ್ ಅವರ ಸ್ಕೂಟರ್’ಗೆ ಕೇಬಲ್ ಸುತ್ತಿಕೊಂಡು ಅಪಘಾತವಾಗಿದೆ.
ಈ ಅಪಘಾತದಿಂದ ದೀಪಕ ವರ್ಣೇಕರ್ ಅವರ ಕೈ ಹಾಗೂ ಕಾಲಿಗೆ ಪೆಟ್ಟಾಗಿದೆ. ಗಾಯಗೊಂಡ ಅವರನ್ನು ಸ್ಥಳೀಯರು ಸೇರಿ ಆಸ್ಪತ್ರೆಗೆ ಸೇರಿಸಿದರು.




