ಅಂಕೋಲಾ: ಬೆಲೇಕೆರಿಯ ನಂದು ನಾಯ್ಕ ಅವರು ಚಲಾಯಿಸುತ್ತಿದ್ದ ಬೈಕಿಗೆ ರಿಕ್ಷಾ ಗುದ್ದಿದೆ. ಪರಿಣಾಮ ನಂದು ನಾಯ್ಕ ಜೊತೆ ಅವರ ಮಗ ನಿಹಾಲ್ ಸಹ ಗಾಯಗೊಂಡಿದ್ದಾರೆ.
ಬೆಲೇಕೆರೆ ಪೊಲೀಸ್ ಸ್ಟೇಶನ್ ವಾಡಾದ ನಂದು ಕೇಶವ ನಾಯ್ಕ (49) ಎಲ್ಐಸಿ ಎಜೆಂಟರಾಗಿ ಬದುಕು ಕಟ್ಟಿಕೊಂಡಿದ್ದಾರೆ. ನ 12ರಂದು ಅವರು ಐದು ವರ್ಷದ ಮಗ ನಿಹಾಲ್ ಜೊತೆ ಕೇಣಿ ಮಾರ್ಗವಾಗಿ ಬೈಕಿನಲ್ಲಿ ಹೋಗುತ್ತಿದ್ದರು. ಆಗ ರಿಕ್ಷಾ ಓಡಿಸಿಕೊಂಡು ಬಂದ ಶೆಡೆಕೆರೆ ಹುಲಿದೇವರವಾಡದ ಆಝಾನ್ ರಿಯಾಜ ಅಹ್ಮದ್ ಹಿಂದಿನಿOದ ಅವರ ಬೈಕಿಗೆ ಗುದ್ದಿದ್ದು, ಬೈಕಿನಲ್ಲಿದ್ದ ಇಬ್ಬರು ನೆಲಕ್ಕೆ ಬಿದ್ದರು.
ಬೈಕಿನಿಂದ ಬಿದ್ದ ಪರಿಣಾಮ ನಂದು ನಾಯ್ಕ ಅವರ ತಲೆ, ಮುಖ, ಬುಜ, ಕೈ ಹಾಗೂ ಕಾಲುಗಳಿಗೆ ಗಾಯವಾಗಿದೆ. ಅವರ ಮಗ ನಿಹಾಲ್ ಅವರಿಗೂ ಕೈ-ಕಾಲುಗಳಿಗೆ ಪೆಟ್ಟಾಗಿದೆ. ಅಪಘಾತ ಮಾಡಿದ ರಿಕ್ಷಾ ಚಾಲಕನ ವಿರುದ್ಧ ನಂದು ನಾಯ್ಕ ಪೊಲೀಸ್ ದೂರು ನೀಡಿದ್ದಾರೆ.




