ಹೊನ್ನಾವರ: ಕೆಳಗನೂರು ಗ್ರಾಮದಲ್ಲಿ ಭೂಮಿ ಹೊಂದಿದ ನಿತೇಶ ನಾಗೇಶ ನಾಯ್ಕ ಹಾಗೂ ನಾಜಗಾರದ ವಿವೇಕ ವಿಠ್ಠೋಬ ನಾಯ್ಕ, ಕಿರಣ ವಿಠ್ಠೋಬ ನಾಯ್ಕ ನಡುವೆ ಹೊಡೆದಾಟ ನಡೆದಿದೆ.
ಭೂಮಿಯ ಸುತ್ತಲು ಕಪೌಂಡ್ ನಿರ್ಮಾಣ ಹಾಗೂ ಕಾಲವೆ ವಿಷಯವಾಗಿ ನಡೆದ ವಾಗ್ವಾದ ಹೊಡೆದಾಟಕ್ಕೆ ತಿರುಗಿದೆ. ಕೆಳಗನೂರು ಗ್ರಾಮದಲ್ಲಿ ನಿತೇಶ ನಾಯ್ಕ ಅವರ ತಂದೆ ನಾಗೇಶ ನಾಯ್ಕ ಅವರ ಹೆಸರಿನಲ್ಲಿ 12.80 ಗುಂಟೆ ಕ್ಷೇತ್ರವಿದೆ. ನಾಲ್ಕು ತಿಂಗಳ ಹಿಂದೆ ಕ್ಷೇತ್ರದ ಅಳತೆ ನಡೆಸಿ ನಿತೇಶ ನಾಯ್ಕ ಅದಕ್ಕೆ ಕಪೌಂಡ್ ನಿರ್ಮಿಸಿದ್ದರು. ಇದನ್ನು ವಿವೇಕ ನಾಯ್ಕ ಹಾಗೂ ಕಿರಣ ನಾಯ್ಕ ವಿರೋಧಿಸಿದ್ದರು.
ನ 15ರಂದು ನಾಗೇಶ ನಾಯ್ಕ ಅವರ ಬಳಿ ವಿವೇಕ ನಾಯ್ಕ ಹಾಗೂ ಕಿರಣ ನಾಯ್ಕ ಜಗಳ ಮಾಡುತ್ತಿದ್ದು, ಇದನ್ನು ನಿತೇಶ ನಾಯ್ಕ ಪ್ರಶ್ನಿಸಿದ್ದಾರೆ. ಈ ವೇಳೆ ಆ ಇಬ್ಬರು ಸೇರಿ ನಿತೇಶ್ ಮೇಲೆ ದೊಣ್ಣೆಯಿಂದ ಹೊಡೆದಿದ್ದಾರೆ. ಅಲ್ಲಿಯೇ ಇದ್ದ ಜಗದೀಶ್ ಮಾದವ ನಾಯ್ಕ ಈ ಜಗಳ ಬಿಡಿಸಿದ್ದಾರೆ.
ಈ ಬಗ್ಗೆ ನಿತೇಶ ನಾಯ್ಕ ಪೊಲೀಸ್ ದೂರು ನೀಡಿದ್ದು, ಜಗಳ ಬಿಡಿಸಲು ಹೋದ ಜಗದೀಶ ನಾಯ್ಕ ಹಾಗೂ ನಿತೇಶ ನಾಯ್ಕ ಸಹ ತಮಗೆ ತೊಂದರೆ ನೀಡುತ್ತಿರುವ ಬಗ್ಗೆ ಕಿರಣ ನಾಯ್ಕ ಸಹ ಪ್ರತಿ ದೂರು ದಾಖಲಿಸಿದ್ದಾರೆ.




