ದಾಂಡೇಲಿ: ನಗರಸಭೆಯಲ್ಲಿ ಕೆಲಸ ಮಾಡುವ ದತ್ತಾತ್ರೇಯ ನಾಯ್ಕ ಬಿಡುವಿನ ವೇಳೆ ಮಟ್ಕಾ ಆಡಿಸಿ ಹಣಗಳಿಸುತ್ತಾರೆ!
ಹಳೆದಾಂಡೇಲಿಯ ಫಾರೆಸ್ಟರ್ ಏರಿಯಾದಲ್ಲಿ ಮನೆ ಮಾಡಿಕೊಂಡಿರುವ ದತ್ತಾತ್ರೇಯ ಗಂಗಾಧರ ನಾಯ್ಕ ನಗರಸಭೆ ಕೆಲಸ ಮುಗಿಸಿ ಮಧ್ಯಾಹ್ನ ಊಟದ ವೇಳೆ ಮಟ್ಕಾ ಆಡಿಸುವಾಗ ಪೊಲೀಸರ ಬಳಿ ಸಿಕ್ಕಿಬಿದ್ದಿದ್ದಾರೆ. ನ 15ರ ಮಧ್ಯಾಹ್ನ ಊಟದ ಬಿಡುವು ಪಡೆದಿದ್ದ ಅವರು 3.15ಕ್ಕೆ ದಾಂಡೇಲಿಯ ಪಟೇಲ್ ಸರ್ಕಲ್ ಬಳಿ ಮಟ್ಕಾ ಆಡಿಸುತ್ತಿದ್ದರು.
ಪಿಎಸ್ಐ ಐ ಆರ್ ಗಡ್ಕರ್ ಇದನ್ನು ಗಮನಿಸಿ ದತ್ತಾತ್ರೇಯ ನಾಯ್ಕರ ಮೇಲೆ ದಾಳಿ ಮಾಡಿದರು. ಆಗ ಮಟ್ಕಾ ಸಂಖ್ಯೆ ಬರೆದ ಚೀಟಿಗಳ ಜೊತೆ ಜನರಿಂದ ಸಂಗ್ರಹಿಸಿದ 600ರೂ ಹಣವೂ ಸಿಕ್ಕಿದೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡರು.




