ಭಟ್ಕಳ: ಮನೆಯಲ್ಲಿ ಬಳಸಿದ ನೀರನ್ನು ರಸ್ತೆ ಬಿಡುತ್ತಿದ್ದ ಬಗ್ಗೆ ಪ್ರಶ್ನಿಸಿದ ಕಾರಣ ಎದುರು ಮನೆಯವರು ಹೊಡೆತ ತಿಂದಿದ್ದಾರೆ!
ಮುಟ್ಟಳ್ಳಿ ಬಳಿಯ ತೆಲಂದದಲ್ಲಿ ವಸಂತ ಮಾಸ್ತಪ್ಪ ನಾಯ್ಕ ಅವರ ಮನೆಯಲ್ಲಿ ಬಳಸಿದ ನೀರನ್ನು ಜನ ಓಡಾಡುವ ರಸ್ತೆ ಮೇಲೆ ಬಿಡುತ್ತಾರೆ. ಈ ಬಗ್ಗೆ ಆ ಭಾಗದವರು ಆಕ್ಷೇಪ ವ್ಯಕ್ತಪಡಿಸಿದ ಕಾರಣ ಅದನ್ನು ಸಹಿಸದ ವಸಂತ ನಾಯ್ಕ ಅವರ ಪತ್ನಿ ರತ್ನಾ ನಾಯ್ಕ ಎದುರು ಮನೆಯ ನಟರಾಜ ನಾಯ್ಕ ಅವರ ತಲೆಯ ಮೇಲೆ ಕಲ್ಲಿನಿಂದ ಕುಟ್ಟಿದ್ದಾರೆ!
`ನಟರಾಜ ನಾಯ್ಕ ಅವರು ಅವರಿವರಲ್ಲಿ ಹೇಳಿದ ಕಾರಣದಿಂದಲೇ ಊರಿನ ಜನ ಈ ಬಗ್ಗೆ ತಮ್ಮನ್ನು ಪ್ರಶ್ನಿಸಿದ್ದಾರೆ’ ಎಂಬುದು ರತ್ನಾ ನಾಯ್ಕ ಅವರ ಸಿಟ್ಟಿಗೆ ಕಾರಣ. `ರಸ್ತೆ ಮೇಲೆ ನೀರು ಹೋಗುತ್ತಿದೆ. ಯಾರ ತಲೆ ಹೋಗುವ ವಿಷಯ ಅದಾಗಿರಲಿಲ್ಲ’ ಎಂಬುದು ಅವರ ಸಮರ್ಥನೆ.
ರತ್ನ ನಾಯ್ಕ ಅವರು ನಟರಾಜ ನಾಯ್ಕರ ಕುತ್ತಿಗೆ ಹಿಡಿದು ಕಲ್ಲಿನಿಂದ ಜಪ್ಪಿದ ಕಾರಣ ನಟರಾಜರ ತಲೆಭಾಗದಿಂದ ರಕ್ತ ಬಂದಿದೆ. ಕೈ ಬುಜಕ್ಕೆ ಸಹ ಪೆಟ್ಟಾಗಿದೆ. ಈ ಬಗ್ಗೆ ನಟರಾಜ ನಾಯ್ಕ ಅವರ ಪತ್ನಿ ಸಂಗೀತ ಪೊಲೀಸ್ ದೂರು ನೀಡಿದ್ದಾರೆ.




