6
  • Latest
Temple | ದೇವಾನುದೇವತೆಗಳ ಪುಣ್ಯಭೂಮಿ ನಾಯ್ಕನಕೆರೆ: ದಿವ್ಯ ಪರಿಸರದಲ್ಲಿ ಭವ್ಯ ದತ್ತ ಮಂದಿರ!

ಮೂರೇ ತಿಂಗಳಿನಲ್ಲಿ ಮುಕ್ತಾಯಗೊಂಡ ಕೋಟಿ ವೆಚ್ಚದ ದತ್ತ ಮಂದಿರ!

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Wednesday, August 20, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಮೂರೇ ತಿಂಗಳಿನಲ್ಲಿ ಮುಕ್ತಾಯಗೊಂಡ ಕೋಟಿ ವೆಚ್ಚದ ದತ್ತ ಮಂದಿರ!

AchyutKumar by AchyutKumar
in ಸ್ಥಳೀಯ
Temple | ದೇವಾನುದೇವತೆಗಳ ಪುಣ್ಯಭೂಮಿ ನಾಯ್ಕನಕೆರೆ: ದಿವ್ಯ ಪರಿಸರದಲ್ಲಿ ಭವ್ಯ ದತ್ತ ಮಂದಿರ!

ಯಲ್ಲಾಪುರ: ಕಳೆದ ಮೂರು ತಿಂಗಳ ಹಿಂದೆ ಪುಟ್ಟ ಗುಡಿ ಸುತ್ತಲು ಗುಡ್ಡ-ಮಣ್ಣು ಹಾಗೂ ನೀರಿನಿಂದ ಕೂಡಿದ್ದ ನಾಯ್ಕನಕೆರೆ ಪ್ರದೇಶದಲ್ಲಿ ಇದೀಗ ಸುಂದರ ದತ್ತ ಮಂದಿರ ತಲೆ ಎತ್ತಿದೆ. ಹಗಲು-ರಾತ್ರಿ ಶಿಲ್ಪಿಗಳು ಶ್ರಮಿಸಿದ ಕಾರಣ ಅಲ್ಪ ದಿನಗಳಲ್ಲಿ ಅಪಾರ ವಿಸ್ತೀರ್ಣದ ದೇಗುಲ ನಿರ್ಮಾಣವಾಗಿದೆ. ಮೂರು ತಿಂಗಳ ಅವಧಿಯಲ್ಲಿ ನಿರ್ಮಾಣವಾದ ಮೂರು ಕೋಟಿ ರೂ ಕ್ರಿಯಾ ಯೋಜನೆಯ ದತ್ತ ಮಂದಿರ ಲೋಕಾರ್ಪಣೆ ಕಾರ್ಯಕ್ರಮ ಮೂರು ದಿನಗಳ ಕಾಲ ನಡೆಯಲಿದೆ. ಪ್ರಸ್ತುತ ಒಂದು ಕೋಟಿ ರೂ ವೆಚ್ಚದಲ್ಲಿ ಗರ್ಭಗುಡಿ ಹಾಗೂ ಇನ್ನಿತರ ಕಾಮಗಾರಿ ಮುಕ್ತಾಯವಾಗಿದೆ. ಇನ್ನು 2 ಕೋಟಿ ರೂ ವೆಚ್ಚದ ಕಾಮಗಾರಿ ಬರುವ ವರ್ಷದಿಂದ ಶುರುವಾಗಲಿದೆ.

ADVERTISEMENT

`ಪಟ್ಟಣದ ನಾಯಕನಕೆರೆಯ ಬಳಿ ನೂತನವಾಗಿ ನಿರ್ಮಾಣಗೊಂಡ ಶಿಲಾಮಯ ದತ್ತಮಂದಿರ ಡಿಸೆಂಬರ್ 13, 14 ಹಾಗೂ 15ರಂದು ಲೋಕಾರ್ಪಣೆಗೊಳ್ಳಲಿದೆ’ ಎಂದು ದೇವಾಲಯ ಪ್ರಚಾರ ಸಮಿತಿಯ ಶ್ರೀರಂಗ ಕಟ್ಟಿ ಸುದ್ದಿಗಾರರಿಗೆ ತಿಳಿಸಿದರು.

ದತ್ತ ಮಂದಿರ ಲೋಕಾರ್ಪಣೆಯ ಆಮಂತ್ರಣ ಪತ್ರಿಕೆ ಬಿಡುಗಡೆ

ಶನಿವಾರ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾಹಿತಿ ನೀಡಿದ ಅವರು `ಡಿ 13 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಮಧ್ಯಾನ 3ಗಂಟೆಗೆ ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳ ಪುರಪ್ರವೇಶ, ಪೂರ್ಣಕುಂಭ ಸ್ವಾಗತ, ಸಂಜೆ ಧಾರ್ಮಿಕ ಕಾರ್ಯಕ್ರಮ ಹಾಗೂ ಅನಂತ ಪದ್ಮನಾಭ ಭಟ್ಟ ಕಾರ್ಕಳ ಅವರಿಂದ ಕೀರ್ತನೆ, ಗಣಪತಿ ಭಾಗ್ವತ್ ಮೊಟ್ಟೆಗದ್ದೆ ಸಂಗಡಿಗರಿoದ ಗಾನ ವೈಭವ ನಡೆಯಲಿದೆ’ ಎಂದು ವಿವರಿಸಿದರು.

Advertisement. Scroll to continue reading.

ಇದನ್ನೂ ಓದಿ: ದತ್ತ ಮಂದಿರದ ವಿಶೇಷತೆಗಳೇನು?

Advertisement. Scroll to continue reading.

`ಡಿ 14ರಂದು ಶ್ರೀಗಳಿಂದ ದೇವರಪುನರ್ ಪ್ರತಿಷ್ಠೆ, ಶಿಖರ ಪ್ರತಿಷ್ಠೆ ನಡೆಯಲಿದೆ. ಮಧ್ಯಾನ ಶ್ರೀಗಳ ಸಾನಿಧ್ಯದಲ್ಲಿ ಧರ್ಮಸಭೆ, ನಂತರ ವಾಣಿ ರಮೇಶ ಅವರಿಂದ ಭಕ್ತಿ ಸಂಗೀತ, ಕೊಂಡದಕುಳಿ ತಂಡದಿoದ ಯಕ್ಷಗಾನ, ಡಿ 15ಕ್ಕೆ ವಿವಿಧ ಧಾರ್ಮಿಕ ನಡೆಯಲಿದೆ. ಕೆ ಸಿ ನಾಗೇಶ ಅವರಿಂದ ದೇಹೋ ದೇವಾಲಯ ಪ್ರೋಕ್ತ, ಉಪನ್ಯಾಸ, ಗೌರಿ ಕುಲಕರ್ಣಿ ತಂಡದಿoದ ಭಕ್ತಿ ವೈಭವ, ಜಿಡಿ ಭಟ್ಟ ಕೆಕ್ಕಾರ ನಿರ್ದೇಶನದ ವರದಯೋಗಿ ಶ್ರೀಧರ ನಾಟಕ ಪ್ರದರ್ಶನಗೊಳ್ಳಲಿದೆ’ ಎಂದರು.

ಇದನ್ನೂ ಓದಿ: ದತ್ತ ಮಂದಿರ ಎಂಬ ದಿವ್ಯ ದೇಗುಲ

ಪ್ರಮುಖರಾದ ಪ್ರಶಾಂತ ಹೆಗಡೆ, ನಾಗೇಶ ಯಲ್ಲಾಪುರಕರ್, ನಾಗರಾಜ ಮದ್ಗುಣಿ, ವೇಣುಗೋಪಾಲ ಮದ್ಗುಣಿ, ಸಿ ಜಿ ಹೆಗಡೆ, ಮಹೇಶ ಗೌಳಿ, ಶಾಂತಾರಾಮ ಹೆಗಡೆ, ನಾರಾಯಣ ನಾಯಕ, ನರಸಿಂಹ ಗಾಂವ್ಕಾರ, ಶಿವಲಿಂಗಯ್ಯ ಅಲ್ಕಯ್ಯನಮಠ ಇದ್ದರು.

ಇದನ್ನೂ ಓದಿ: ದತ್ತ ಮಂದಿರದಲ್ಲಿ ತ್ರಿಮೂರ್ತಿ ದರ್ಶನ

Previous Post

ಸೈಕಲ್ ಸವಾರನಿಗೆ ಗುದ್ದಿದ ರಿಕ್ಷಾ

Next Post

ಆಸ್ಪತ್ರೆ ಮುಂದೆ ಅಪಘಾತ: ಮಹಿಳೆಯ ಕೈ ಮುರಿದ ಬೈಕ್ ಚಾಲಕ!

Next Post

ಆಸ್ಪತ್ರೆ ಮುಂದೆ ಅಪಘಾತ: ಮಹಿಳೆಯ ಕೈ ಮುರಿದ ಬೈಕ್ ಚಾಲಕ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ